<p>ಬೆಂಗಳೂರು: ಪ್ರತಿ ಪದವನ್ನೂ ತೂಗಿ ಅದರ ಅರ್ಥ ವ್ಯಾಪ್ತಿಯನ್ನು ಸರಿಯಾಗಿ ಅಂದಾಜಿಸಿ ಒಂದರ ಪಕ್ಕ ಮತ್ತೊಂದರಂತೆ ಜೋಡಿಸಿ ವಾಕ್ಯಗಳನ್ನೂ ಖಂಡಿಕೆಗಳನ್ನೂ ರೂಪಿಸುತ್ತಾ ಹೋಗುವ ದೇವನೂರ ಮಹಾದೇವ ತಮ್ಮ ಅತಿಥಿ ಸಂಪಾದಕನ ಕರ್ತವ್ಯವನ್ನೂ ಅಷ್ಟೇ ತೂಕದಲ್ಲಿ ನಿರ್ವಹಿಸಿದರು. <br /> <br /> ಸಂಚಿಕೆ ಮುದ್ರಣಕ್ಕೆ ಸಿದ್ಧವಾಗುವ ಕೊನೆಯ ಕ್ಷಣದ ತನಕವೂ ನುರಿತ ಸಂಚಿಕೆಯನ್ನು ರೂಪಿಸುವ ಎಲ್ಲಾ ಕೆಲಸಗಳಲ್ಲಿಯೂ ತಮ್ಮ ಪಾಲ್ಗೊಳ್ಳುವಿಕೆಯನ್ನು ಖಾತರಿ ಪಡಿಸುತ್ತಿದ್ದರು.<br /> <br /> `ದಲಿತ ವಿಶೇಷ ಸಂಚಿಕೆ~ಯನ್ನು ರೂಪಿಸುವ ಕನಸು ಮೂಡಿದ ಕ್ಷಣದಲ್ಲಿಯೇ ಅದರ ಸಂಪಾದಕತ್ವ ದೇವನೂರ ಮಹಾದೇವರದ್ದು ಎಂಬುದು ನಿರ್ಧಾರವಾಗಿತ್ತು. ಆದರೆ ಮಹಾದೇವ ಅವರನ್ನು ಒಪ್ಪಿಸುವುದು ಸುಲಭದ ಕೆಲಸ ಅಲ್ಲ ಎನ್ನುವುದು ಗೊತ್ತಿತ್ತು.<br /> <br /> ನಿರೀಕ್ಷೆಯಂತೆಯೇ ಅವರು ಮೊದಲು ನಿರಾಕರಿಸಿದರು, ನಾವು ಪಟ್ಟು ಬಿಡದಿರುವುದನ್ನು ಕಂಡು ಕೊನೆಗೆ ಒಪ್ಪಿಗೆ ನೀಡಿದರು. ಆದರೆ ಒಪ್ಪಿಕೊಂಡ ಮೇಲೆ ನಾವು ಕಂಡದ್ದು ಬೇರೆಯೇ ದೇವನೂರರನ್ನು. ಮೊದಲ ದಿನದಿಂದಲೇ ತಮ್ಮನ್ನು ಸಂಪೂರ್ಣವಾಗಿ ಸಂಚಿಕೆಯನ್ನು ರೂಪಿಸುವ ಕೆಲಸಕ್ಕೆ ಅರ್ಪಿಸಿಕೊಂಡಿದ್ದರು. ಏಪ್ರಿಲ್ 9ರ ಸೋಮವಾರದಂದೇ `ಪ್ರಜಾವಾಣಿ~ ಕಚೇರಿಗೆ ಬಂದಿದ್ದ ಮಹಾದೇವ ದಿನದ ಪತ್ರಿಕೆಯನ್ನು ಹೊರತರುವ ಎಲ್ಲಾ ಬಗೆಯ ಕೆಲಸಗಳ ಕುರಿತು ಅರಿತೇ ಮರಳಿದರು. <br /> <br /> ನಂತರದ ಮೂರೂ ದಿನ ಮೂರೂ ಹೊತ್ತು ಅವರು ನಮ್ಮ ಬಳಗದ ಸದಸ್ಯರ ನಿರಂತರ ಸಂಪರ್ಕದಲ್ಲಿದ್ದರು. ಲೇಖನದ ವಿಷಯ ಮತ್ತು ಲೇಖಕರ ಆಯ್ಕೆ ಬಗ್ಗೆ ಸಮಾಲೋಚನೆ ನಡೆಸುತ್ತಲೇ ಇದ್ದರು.<br /> <br /> ಶುಕ್ರವಾರ ಮತ್ತೆ ಅವರು ಕಚೇರಿಗೆ ಆಗಮಿಸಿದಾಗ ಅವರಲ್ಲಿದ್ದದ್ದು ಸಂಪಾದಕನ ಸಿದ್ಧತೆ. ದಲಿತ ಬದುಕಿನ ಎಲ್ಲಾ ಮಜಲುಗಳನ್ನು ಸಂಚಿಕೆ ಪ್ರತಿಬಿಂಬಿಸಬೇಕೆಂಬ ಅವರ ನಿಲುವು ಅವರು ಆರಿಸಿಕೊಂಡ ಲೇಖಕರು ಮತ್ತು ಅವರಿಗೆ ಕೊಡಲಾದ ವಿಷಯಗಳೇ ಪ್ರತಿಬಿಂಬಿಸುತ್ತಿವೆ. <br /> <br /> ಸಂಶೋಧನಾ ಪ್ರಬಂಧವೊಂದರ ಶೈಲಿಯಲ್ಲಿದ್ದ ಲೇಖನವೊಂದನ್ನು ಜನಸಾಮಾನ್ಯರ ಭಾಷೆಗೆ ಬದಲಾಯಿಸುವ ಸಲಹೆಯೂ ಅವರದ್ದೇ ಆಗಿತ್ತು. ಪದ ಬಳಕೆಯ ಕುರಿತು ಅವರಿಗಿರುವ ಕಾಳಜಿ ಶೀರ್ಷಿಕೆಗಳಲ್ಲಿ ಪ್ರತಿಬಿಂಬಿಸಿದವು. ನಿತ್ಯದ ಸಂಪಾದಕೀಯದ ವಿಷಯವನ್ನು ಸೂಚಿಸುವಲ್ಲಿಯೂ ದೇವನೂರರ ಸಹಜ ಶೈಲಿಯಿತ್ತು. <br /> <br /> ಭಾರತಕ್ಕೆ ಹೊಸತಾಗಿರುವ `ಸಾಮಾಜಿಕ ಪೊಲೀಸಿಂಗ್~ ವಿಷಯದ ಕುರಿತಂತೆ ಸಂಪಾದಕೀಯ ಬರೆಯಬೇಕೆಂಬ ನಿರ್ಧಾರವೂ ಅವರದ್ದೇ ಆಗಿತ್ತು.<br /> <br /> ಪದಗಳನ್ನು ಅಳೆದು ತೂಗುವ ದೇವನೂರರ ಗುಣವನ್ನು ಅರಿತವರಿಗೆಲ್ಲಾ ಆಶ್ಚರ್ಯವಾಗುವಷ್ಟು ಅವರು ಮಾತನಾಡುತ್ತಿದ್ದರು. ಅವರು ಮಾತನಾಡಿಸದೆ ಉಳಿದ ಒಬ್ಬ ಸಿಬ್ಬಂದಿಯೂ ಕಚೇರಿಯಲ್ಲಿರಲಿಲ್ಲ. <br /> ಬಹಳ ಮುಖ್ಯವಾಗಿ ನಮ್ಮ ಸಂಪಾದಕೀಯ ಬಳಗದಲ್ಲಿ ಎಲ್ಲ ಸಮುದಾಯಗಳಿಗೆ ಮತ್ತು ಪ್ರದೇಶಗಳಿಗೆ ನೀಡಿರುವ ಪ್ರಾತಿನಿಧ್ಯ ಅವರ ವಿಶೇಷ ಪ್ರಶಂಸೆಗೆ ಪಾತ್ರವಾಯಿತು. ಅವರ ಮಾತುಗಳಲ್ಲಿ ಔಪಚಾರಿಕತೆ ಇರಲಿಲ್ಲ.ಅದರಲ್ಲಿ ಅತಿಥಿಯ ಸೌಜನ್ಯದಷ್ಟೇ ಸಂಪಾದಕನ ಜವಾಬ್ದಾರಿಯೂ ಇತ್ತು. <br /> <br /> ಮಧ್ಯಾಹ್ನ ಕಚೇರಿಗೆ ಬಂದಾಗ ಅವರ ಮುಖದ ಮೇಲಿದ್ದ ಮುಗುಳ್ನಗೆ ರಾತ್ರಿ ಕೆಲಸ ಮುಗಿಸಿ ಸಂಪಾದಕೀಯ ಬಳಗದ ಸದಸ್ಯರ ಜತೆ ಪೋಟೋ ತೆಗೆಸಿಕೊಂಡು ಹೋಗುವಾಗಲೂ ಮಾಸದೆ ಹಾಗೆಯ ಉಳಿದಿತ್ತು. `ಸಂಬಂಜ `ಎಂದರೆ ಇದೇ ಅಲ್ಲವೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಪ್ರತಿ ಪದವನ್ನೂ ತೂಗಿ ಅದರ ಅರ್ಥ ವ್ಯಾಪ್ತಿಯನ್ನು ಸರಿಯಾಗಿ ಅಂದಾಜಿಸಿ ಒಂದರ ಪಕ್ಕ ಮತ್ತೊಂದರಂತೆ ಜೋಡಿಸಿ ವಾಕ್ಯಗಳನ್ನೂ ಖಂಡಿಕೆಗಳನ್ನೂ ರೂಪಿಸುತ್ತಾ ಹೋಗುವ ದೇವನೂರ ಮಹಾದೇವ ತಮ್ಮ ಅತಿಥಿ ಸಂಪಾದಕನ ಕರ್ತವ್ಯವನ್ನೂ ಅಷ್ಟೇ ತೂಕದಲ್ಲಿ ನಿರ್ವಹಿಸಿದರು. <br /> <br /> ಸಂಚಿಕೆ ಮುದ್ರಣಕ್ಕೆ ಸಿದ್ಧವಾಗುವ ಕೊನೆಯ ಕ್ಷಣದ ತನಕವೂ ನುರಿತ ಸಂಚಿಕೆಯನ್ನು ರೂಪಿಸುವ ಎಲ್ಲಾ ಕೆಲಸಗಳಲ್ಲಿಯೂ ತಮ್ಮ ಪಾಲ್ಗೊಳ್ಳುವಿಕೆಯನ್ನು ಖಾತರಿ ಪಡಿಸುತ್ತಿದ್ದರು.<br /> <br /> `ದಲಿತ ವಿಶೇಷ ಸಂಚಿಕೆ~ಯನ್ನು ರೂಪಿಸುವ ಕನಸು ಮೂಡಿದ ಕ್ಷಣದಲ್ಲಿಯೇ ಅದರ ಸಂಪಾದಕತ್ವ ದೇವನೂರ ಮಹಾದೇವರದ್ದು ಎಂಬುದು ನಿರ್ಧಾರವಾಗಿತ್ತು. ಆದರೆ ಮಹಾದೇವ ಅವರನ್ನು ಒಪ್ಪಿಸುವುದು ಸುಲಭದ ಕೆಲಸ ಅಲ್ಲ ಎನ್ನುವುದು ಗೊತ್ತಿತ್ತು.<br /> <br /> ನಿರೀಕ್ಷೆಯಂತೆಯೇ ಅವರು ಮೊದಲು ನಿರಾಕರಿಸಿದರು, ನಾವು ಪಟ್ಟು ಬಿಡದಿರುವುದನ್ನು ಕಂಡು ಕೊನೆಗೆ ಒಪ್ಪಿಗೆ ನೀಡಿದರು. ಆದರೆ ಒಪ್ಪಿಕೊಂಡ ಮೇಲೆ ನಾವು ಕಂಡದ್ದು ಬೇರೆಯೇ ದೇವನೂರರನ್ನು. ಮೊದಲ ದಿನದಿಂದಲೇ ತಮ್ಮನ್ನು ಸಂಪೂರ್ಣವಾಗಿ ಸಂಚಿಕೆಯನ್ನು ರೂಪಿಸುವ ಕೆಲಸಕ್ಕೆ ಅರ್ಪಿಸಿಕೊಂಡಿದ್ದರು. ಏಪ್ರಿಲ್ 9ರ ಸೋಮವಾರದಂದೇ `ಪ್ರಜಾವಾಣಿ~ ಕಚೇರಿಗೆ ಬಂದಿದ್ದ ಮಹಾದೇವ ದಿನದ ಪತ್ರಿಕೆಯನ್ನು ಹೊರತರುವ ಎಲ್ಲಾ ಬಗೆಯ ಕೆಲಸಗಳ ಕುರಿತು ಅರಿತೇ ಮರಳಿದರು. <br /> <br /> ನಂತರದ ಮೂರೂ ದಿನ ಮೂರೂ ಹೊತ್ತು ಅವರು ನಮ್ಮ ಬಳಗದ ಸದಸ್ಯರ ನಿರಂತರ ಸಂಪರ್ಕದಲ್ಲಿದ್ದರು. ಲೇಖನದ ವಿಷಯ ಮತ್ತು ಲೇಖಕರ ಆಯ್ಕೆ ಬಗ್ಗೆ ಸಮಾಲೋಚನೆ ನಡೆಸುತ್ತಲೇ ಇದ್ದರು.<br /> <br /> ಶುಕ್ರವಾರ ಮತ್ತೆ ಅವರು ಕಚೇರಿಗೆ ಆಗಮಿಸಿದಾಗ ಅವರಲ್ಲಿದ್ದದ್ದು ಸಂಪಾದಕನ ಸಿದ್ಧತೆ. ದಲಿತ ಬದುಕಿನ ಎಲ್ಲಾ ಮಜಲುಗಳನ್ನು ಸಂಚಿಕೆ ಪ್ರತಿಬಿಂಬಿಸಬೇಕೆಂಬ ಅವರ ನಿಲುವು ಅವರು ಆರಿಸಿಕೊಂಡ ಲೇಖಕರು ಮತ್ತು ಅವರಿಗೆ ಕೊಡಲಾದ ವಿಷಯಗಳೇ ಪ್ರತಿಬಿಂಬಿಸುತ್ತಿವೆ. <br /> <br /> ಸಂಶೋಧನಾ ಪ್ರಬಂಧವೊಂದರ ಶೈಲಿಯಲ್ಲಿದ್ದ ಲೇಖನವೊಂದನ್ನು ಜನಸಾಮಾನ್ಯರ ಭಾಷೆಗೆ ಬದಲಾಯಿಸುವ ಸಲಹೆಯೂ ಅವರದ್ದೇ ಆಗಿತ್ತು. ಪದ ಬಳಕೆಯ ಕುರಿತು ಅವರಿಗಿರುವ ಕಾಳಜಿ ಶೀರ್ಷಿಕೆಗಳಲ್ಲಿ ಪ್ರತಿಬಿಂಬಿಸಿದವು. ನಿತ್ಯದ ಸಂಪಾದಕೀಯದ ವಿಷಯವನ್ನು ಸೂಚಿಸುವಲ್ಲಿಯೂ ದೇವನೂರರ ಸಹಜ ಶೈಲಿಯಿತ್ತು. <br /> <br /> ಭಾರತಕ್ಕೆ ಹೊಸತಾಗಿರುವ `ಸಾಮಾಜಿಕ ಪೊಲೀಸಿಂಗ್~ ವಿಷಯದ ಕುರಿತಂತೆ ಸಂಪಾದಕೀಯ ಬರೆಯಬೇಕೆಂಬ ನಿರ್ಧಾರವೂ ಅವರದ್ದೇ ಆಗಿತ್ತು.<br /> <br /> ಪದಗಳನ್ನು ಅಳೆದು ತೂಗುವ ದೇವನೂರರ ಗುಣವನ್ನು ಅರಿತವರಿಗೆಲ್ಲಾ ಆಶ್ಚರ್ಯವಾಗುವಷ್ಟು ಅವರು ಮಾತನಾಡುತ್ತಿದ್ದರು. ಅವರು ಮಾತನಾಡಿಸದೆ ಉಳಿದ ಒಬ್ಬ ಸಿಬ್ಬಂದಿಯೂ ಕಚೇರಿಯಲ್ಲಿರಲಿಲ್ಲ. <br /> ಬಹಳ ಮುಖ್ಯವಾಗಿ ನಮ್ಮ ಸಂಪಾದಕೀಯ ಬಳಗದಲ್ಲಿ ಎಲ್ಲ ಸಮುದಾಯಗಳಿಗೆ ಮತ್ತು ಪ್ರದೇಶಗಳಿಗೆ ನೀಡಿರುವ ಪ್ರಾತಿನಿಧ್ಯ ಅವರ ವಿಶೇಷ ಪ್ರಶಂಸೆಗೆ ಪಾತ್ರವಾಯಿತು. ಅವರ ಮಾತುಗಳಲ್ಲಿ ಔಪಚಾರಿಕತೆ ಇರಲಿಲ್ಲ.ಅದರಲ್ಲಿ ಅತಿಥಿಯ ಸೌಜನ್ಯದಷ್ಟೇ ಸಂಪಾದಕನ ಜವಾಬ್ದಾರಿಯೂ ಇತ್ತು. <br /> <br /> ಮಧ್ಯಾಹ್ನ ಕಚೇರಿಗೆ ಬಂದಾಗ ಅವರ ಮುಖದ ಮೇಲಿದ್ದ ಮುಗುಳ್ನಗೆ ರಾತ್ರಿ ಕೆಲಸ ಮುಗಿಸಿ ಸಂಪಾದಕೀಯ ಬಳಗದ ಸದಸ್ಯರ ಜತೆ ಪೋಟೋ ತೆಗೆಸಿಕೊಂಡು ಹೋಗುವಾಗಲೂ ಮಾಸದೆ ಹಾಗೆಯ ಉಳಿದಿತ್ತು. `ಸಂಬಂಜ `ಎಂದರೆ ಇದೇ ಅಲ್ಲವೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>