<p><strong>ನ್ಯೂಯಾರ್ಕ್:</strong> 2011ರ ಸೆಪ್ಟೆಂಬರ್ 11ರಂದು ಇಲ್ಲಿನ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಗೋಪುರ ಧ್ವಂಸ ಪ್ರಕರಣ ಸಂಬಂಧ ಅಮೆರಿಕನ್ ಏರ್ಲೈನ್ಸ್ ಹಾಗೂ ಯುನೈಟೆಡ್ ಏರ್ಲೈನ್ಸ್ ಸಂಸ್ಥೆಗಳು ₹617 ಕೋಟಿ (95 ಮಿಲಿಯನ್ ಯುಎಸ್ಡಿ) ಪಾವತಿಸುವ ಒಪ್ಪಂದಕ್ಕೆ ಬಂದಿದೆ. 13 ವರ್ಷಗಳ ಬಳಿಕ ಈ ವ್ಯಾಜ್ಯ ಕೊನೆ ಹಂತಕ್ಕೆ ಬಂದಿದೆ.</p>.<p>ಪೋರ್ಟ್ ಅಥಾರಿಟಿ ಒಡೆತನದ ವಿಶ್ವ ವಾಣಿಜ್ಯ ಕೇಂದ್ರವನ್ನು ಲ್ಯಾರಿ ಸಿಲ್ವರ್ಸ್ಟೇನ್ ಎಂಬ ಡೆವಲಪರ್ 99 ವರ್ಷಗಳ ಭೋಗ್ಯಕ್ಕೆ ಪಡೆದ ಆರು ವಾರಗಳ ಬಳಿಕ ಈ ದುರ್ಘಟನೆ ನಡೆದಿತ್ತು. ವರ್ಷಗಳ ಕಾಲ ನಡೆದ ಮಾತುಕತೆ ಬಳಿಕ ಲ್ಯಾರಿ ಅವರಿಗೆ ವೈಯಕ್ತಿಕ ವಿಮೆಯಿಂದ ₹26 ಸಾವಿರ ಕೋಟಿ (4.5 ಬಿಲಿಯನ್ ಯುಎಸ್ಡಿ) ಸಂದಾಯವಾಗಿತ್ತು.</p>.<p>ವಿಶ್ವ ವಾಣಿಜ್ಯ ಕೇಂದ್ರದ ಡೆವಲಪರ್ ಲ್ಯಾರಿ ಅವರಿಗೆ ವಿಮಾನಯಾನ ಸಂಸ್ಥೆಗಳ ಪರ ವಿಮಾ ಕಂಪೆನಿಗಳು ಪರಿಹಾರ ಪಾವತಿಸಲಿವೆ ಎಂದು ನ್ಯಾಯಾಲಯದ ಕಡತಗಳಲ್ಲಿ ಉಲ್ಲೇಖಿಸಲಾಗಿದೆ. </p>.<p>ಕಟ್ಟಡ ಧ್ವಂಸಕ್ಕೆ ಎರಡೂ ಕಂಪೆನಿಗಳ ವಿಮಾನಗಳನ್ನು ಉಗ್ರರು ಬಳಸಿದ್ದರು. ಘಟನೆಯಲ್ಲಿ 2700ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನ್ಯೂಯಾರ್ಕ್:</strong> 2011ರ ಸೆಪ್ಟೆಂಬರ್ 11ರಂದು ಇಲ್ಲಿನ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಗೋಪುರ ಧ್ವಂಸ ಪ್ರಕರಣ ಸಂಬಂಧ ಅಮೆರಿಕನ್ ಏರ್ಲೈನ್ಸ್ ಹಾಗೂ ಯುನೈಟೆಡ್ ಏರ್ಲೈನ್ಸ್ ಸಂಸ್ಥೆಗಳು ₹617 ಕೋಟಿ (95 ಮಿಲಿಯನ್ ಯುಎಸ್ಡಿ) ಪಾವತಿಸುವ ಒಪ್ಪಂದಕ್ಕೆ ಬಂದಿದೆ. 13 ವರ್ಷಗಳ ಬಳಿಕ ಈ ವ್ಯಾಜ್ಯ ಕೊನೆ ಹಂತಕ್ಕೆ ಬಂದಿದೆ.</p>.<p>ಪೋರ್ಟ್ ಅಥಾರಿಟಿ ಒಡೆತನದ ವಿಶ್ವ ವಾಣಿಜ್ಯ ಕೇಂದ್ರವನ್ನು ಲ್ಯಾರಿ ಸಿಲ್ವರ್ಸ್ಟೇನ್ ಎಂಬ ಡೆವಲಪರ್ 99 ವರ್ಷಗಳ ಭೋಗ್ಯಕ್ಕೆ ಪಡೆದ ಆರು ವಾರಗಳ ಬಳಿಕ ಈ ದುರ್ಘಟನೆ ನಡೆದಿತ್ತು. ವರ್ಷಗಳ ಕಾಲ ನಡೆದ ಮಾತುಕತೆ ಬಳಿಕ ಲ್ಯಾರಿ ಅವರಿಗೆ ವೈಯಕ್ತಿಕ ವಿಮೆಯಿಂದ ₹26 ಸಾವಿರ ಕೋಟಿ (4.5 ಬಿಲಿಯನ್ ಯುಎಸ್ಡಿ) ಸಂದಾಯವಾಗಿತ್ತು.</p>.<p>ವಿಶ್ವ ವಾಣಿಜ್ಯ ಕೇಂದ್ರದ ಡೆವಲಪರ್ ಲ್ಯಾರಿ ಅವರಿಗೆ ವಿಮಾನಯಾನ ಸಂಸ್ಥೆಗಳ ಪರ ವಿಮಾ ಕಂಪೆನಿಗಳು ಪರಿಹಾರ ಪಾವತಿಸಲಿವೆ ಎಂದು ನ್ಯಾಯಾಲಯದ ಕಡತಗಳಲ್ಲಿ ಉಲ್ಲೇಖಿಸಲಾಗಿದೆ. </p>.<p>ಕಟ್ಟಡ ಧ್ವಂಸಕ್ಕೆ ಎರಡೂ ಕಂಪೆನಿಗಳ ವಿಮಾನಗಳನ್ನು ಉಗ್ರರು ಬಳಸಿದ್ದರು. ಘಟನೆಯಲ್ಲಿ 2700ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>