<p><strong>ಢಾಕಾ</strong>: ಗಂಗಾ ನದಿ ನೀರು ಒಪ್ಪಂದ ಕುರಿತು ಚರ್ಚಿಸಲು 11 ಸದಸ್ಯರ ಬಾಂಗ್ಲಾದೇಶದ ನಿಯೋಗವು ಸೋಮವಾರ ಭಾರತಕ್ಕೆ ಭೇಟಿ ನೀಡಲಿದೆ. </p>.<p>ಒಪ್ಪಂದವು 2026ರಲ್ಲಿ ನವೀಕರಣಗೊಳ್ಳಬೇಕಿದೆ. ಇದು, ಉಭಯ ದೇಶಗಳ ತಾಂತ್ರಿಕ ಪರಿಣತರ ನಡುವಿನ 86ನೇ ಸಭೆಯಾಗಿದೆ. ಗಂಗಾ ನದಿ ನೀರು ಹಂಚಿಕೆ ಕುರಿತಂತೆ 30 ವರ್ಷಗಳ ಹಿಂದೆ ಒಡಂಬಡಿಕೆ ಆಗಿದೆ.</p>.<p class="title">ಬಾಂಗ್ಲಾದೇಶದ ಜಂಟಿ ನದಿ ಆಯೋಗದ (ಜೆಆರ್ಸಿ) ಸದಸ್ಯ ಮೊಹಮ್ಮದ್ ಅಬುಲ್ ಹೊಸೈನ್ ನೇತೃತ್ವದ ನಿಯೋಗ ಮಾರ್ಚ್ 3ರಂದು ಕೋಲ್ಕತ್ತಕ್ಕೆ ಬರಲಿದೆ. ಮಾರ್ಚ್5ರವರೆಗೂ ನದಿ ಪಾತ್ರವನ್ನು ಪರಿಶೀಲಿಸಲಿದೆ. ಮಾರ್ಚ್ 6–7ಕ್ಕೆ ಕೋಲ್ಕತ್ತದಲ್ಲಿ ಸಭೆ ನಡೆಯಲಿದೆ ಎಂದು ಈ ಕುರಿತ ಪತ್ರದಲ್ಲಿ ವಿವರಿಸಲಾಗಿದೆ. </p>.<p>ಭಾರತದ ಜಲಶಕ್ತಿ ಸಚಿವಾಲಯದ ಪ್ರಕಾರ, ಭಾರತ ಮತ್ತು ಬಾಂಗ್ಲಾದೇಶದ ನಡುವೆ 54 ನದಿಗಳು ಹಂಚಿಕೆ ಆಗಲಿವೆ. ಭಾರತ–ಬಾಂಗ್ಲಾದೇಶ ಜಂಟಿ ನದಿ ಆಯೋಗವನ್ನು 1972ರಲ್ಲಿ ರಚಿಸಲಾಗಿತ್ತು.</p>.<p>1996ರ ಡಿಸೆಂಬರ್ 12ರಂದು ಆಗಿನ ಭಾರತದ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಆಗಿನ ಬಾಂಗ್ಲಾದದೇ ಶದ ಪ್ರಧಾನಿ ಶೇಖ್ ಹಸೀನಾ ಅವರು ಗಂಗಾ ನದಿ ನೀರು ಒಪ್ಪಂದಕ್ಕೆ ಸಹಿ ಹಾಕಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಢಾಕಾ</strong>: ಗಂಗಾ ನದಿ ನೀರು ಒಪ್ಪಂದ ಕುರಿತು ಚರ್ಚಿಸಲು 11 ಸದಸ್ಯರ ಬಾಂಗ್ಲಾದೇಶದ ನಿಯೋಗವು ಸೋಮವಾರ ಭಾರತಕ್ಕೆ ಭೇಟಿ ನೀಡಲಿದೆ. </p>.<p>ಒಪ್ಪಂದವು 2026ರಲ್ಲಿ ನವೀಕರಣಗೊಳ್ಳಬೇಕಿದೆ. ಇದು, ಉಭಯ ದೇಶಗಳ ತಾಂತ್ರಿಕ ಪರಿಣತರ ನಡುವಿನ 86ನೇ ಸಭೆಯಾಗಿದೆ. ಗಂಗಾ ನದಿ ನೀರು ಹಂಚಿಕೆ ಕುರಿತಂತೆ 30 ವರ್ಷಗಳ ಹಿಂದೆ ಒಡಂಬಡಿಕೆ ಆಗಿದೆ.</p>.<p class="title">ಬಾಂಗ್ಲಾದೇಶದ ಜಂಟಿ ನದಿ ಆಯೋಗದ (ಜೆಆರ್ಸಿ) ಸದಸ್ಯ ಮೊಹಮ್ಮದ್ ಅಬುಲ್ ಹೊಸೈನ್ ನೇತೃತ್ವದ ನಿಯೋಗ ಮಾರ್ಚ್ 3ರಂದು ಕೋಲ್ಕತ್ತಕ್ಕೆ ಬರಲಿದೆ. ಮಾರ್ಚ್5ರವರೆಗೂ ನದಿ ಪಾತ್ರವನ್ನು ಪರಿಶೀಲಿಸಲಿದೆ. ಮಾರ್ಚ್ 6–7ಕ್ಕೆ ಕೋಲ್ಕತ್ತದಲ್ಲಿ ಸಭೆ ನಡೆಯಲಿದೆ ಎಂದು ಈ ಕುರಿತ ಪತ್ರದಲ್ಲಿ ವಿವರಿಸಲಾಗಿದೆ. </p>.<p>ಭಾರತದ ಜಲಶಕ್ತಿ ಸಚಿವಾಲಯದ ಪ್ರಕಾರ, ಭಾರತ ಮತ್ತು ಬಾಂಗ್ಲಾದೇಶದ ನಡುವೆ 54 ನದಿಗಳು ಹಂಚಿಕೆ ಆಗಲಿವೆ. ಭಾರತ–ಬಾಂಗ್ಲಾದೇಶ ಜಂಟಿ ನದಿ ಆಯೋಗವನ್ನು 1972ರಲ್ಲಿ ರಚಿಸಲಾಗಿತ್ತು.</p>.<p>1996ರ ಡಿಸೆಂಬರ್ 12ರಂದು ಆಗಿನ ಭಾರತದ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಆಗಿನ ಬಾಂಗ್ಲಾದದೇ ಶದ ಪ್ರಧಾನಿ ಶೇಖ್ ಹಸೀನಾ ಅವರು ಗಂಗಾ ನದಿ ನೀರು ಒಪ್ಪಂದಕ್ಕೆ ಸಹಿ ಹಾಕಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>