ಕಠ್ಮಂಡು: ನಕಲಿ ದಾಖಲೆ ಹೊಂದಿದ್ದ, ನೈಸರ್ಗಿಕ ವಿಕೋಪಕ್ಕೆ ಸಿಲುಕಿ ಸಂಕಷ್ಟಕ್ಕೀಡಾಗಿದ್ದವರಂತೆ ವರ್ತಿಸುತ್ತಿದ್ದ ಅಪ್ರಾಪ್ತ ವಯಸ್ಸಿನ 12 ಮಂದಿ ಸೇರಿದಂತೆ 24 ಭಿಕ್ಷುಕರನ್ನು ಬಂಧಿಸಿದ ನೇಪಾಳ ಪೊಲೀಸರು, ಭಾರತಕ್ಕೆ ವಾಪಸ್ ಕಳಿಸಿದ್ದಾರೆ.
ರಾಜಸ್ಥಾನದ ಇವರೆಲ್ಲರೂ ಇಂಡೋ–ನೇಪಾಳ ಗಡಿಯಲ್ಲಿರುವ ಬಿರ್ತಾಮೋಡ್ ನಗರದ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದರು ಎಂದು ತಿಳಿಸಿದ್ದಾರೆ. ನೇಪಾಳದಲ್ಲಿನ ಹಬ್ಬದ ದಿನಗಳಲ್ಲಿ ಗಡಿ ದಾಟಿ ಭಿಕ್ಷೆ ಬೇಡಲು ಬರುತ್ತಿರುವವರ ಸಂಖ್ಯೆ ಈಚೆಗೆ ಹೆಚ್ಚಿದೆ ಎಂದಿದ್ದಾರೆ.