<p><strong>ಪೆಶಾವರ</strong>: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭಾನುವಾರ ರಾಜಕೀಯ ಪಕ್ಷವೊಂದರ ಸಭೆಯ ವೇಳೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ.</p>.<p>ಇಲ್ಲಿನ ಬಜೌರ್ ಖರ್ನಲ್ಲಿ ಜಮೈತ್ ಉಲೆಮಾ ಇ ಇಸ್ಲಾಂ ಫಜ್ಲ್ (ಜೆಯುಐ–ಎಫ್) ಪಕ್ಷದ ಸಭೆಯಲ್ಲಿ ಸ್ಫೋಟ ಸಂಭವಿಸಿತು. 200ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಭದ್ರತಾ ಸಿಬ್ಬಂದಿ ಸ್ಥಳವನ್ನು ಸುತ್ತುವರಿದಿದ್ದಾರೆ. ಸ್ಫೋಟದ ಸ್ವರೂಪವನ್ನು ಪರಿಶೀಲಿಸಲಾಗುತ್ತದೆ. ಇದೊಂದು ಆತ್ಮಾಹುತಿ ಸ್ಫೋಟ ಕೃತ್ಯ ಎಂದು ಹೇಳಲಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.</p>.<p>ಯಾವುದೇ ಸಂಘಟನೆಯು ಇದುವರೆಗೂ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿಲ್ಲ ಎಂದು ಮಲಕ್ಕಾಡ್ ವಲಯದ ಡಿಐಜಿ ಮೆಹಮೂದ್ ಸಟ್ಟಿ ತಿಳಿಸಿದರು. </p>.<p>‘ಸ್ಫೋಟ ಸಂಭವಿಸಿದಾಗ ಸಭೆಯಲ್ಲಿ ಸುಮಾರು 500 ಜನರು ಸೇರಿದ್ದರು. ಸ್ಥಳಕ್ಕೆ ಐದು ಆಂಬುಲೆನ್ಸ್ಗಳು ಧಾವಿಸಿವೆ’ ಎಂದು ರಕ್ಷಣಾ ಸಹಾಯವಾಣಿ 1122ರ ವಕ್ತಾರ ಬಿಲಾಲ್ ಫೈಜಿ ಅವರು ತಿಳಿಸಿದ್ದಾರೆ.</p>.<p>ಜೆಯುಐ–ಎಫ್ ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ ಅವರು, ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಉಸ್ತುವಾರಿ ಪ್ರಧಾನಿ ಅಜಂ ಖಾನ್ ಅವರಿಗೆ ಕೃತ್ಯದ ಸಮಗ್ರ ತನಿಖೆಗೆ ಆಗ್ರಹಪಡಿಸಿದ್ದಾರೆ.</p>.<p>ಪಕ್ಷದ ಕಾರ್ಯಕರ್ತರು ನೊಂದವರ ನೆರವಿಗಾಗಿ ಆಸ್ಪತ್ರೆಗೆ ಧಾವಿಸಬೇಕು ಹಾಗೂ ಶಾಂತಿ ಕಾಯ್ದುಕೊಳ್ಳಬೇಕು. ಸರ್ಕಾರ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.</p>.<p>ಕೃತ್ಯವನ್ನು ಖಂಡಿಸಿರುವ ಪಕ್ಷದ ಇನ್ನೊಬ್ಬ ಮುಖಂಡ ಹಫೀಜ್ ಹಮ್ದುಲ್ಹಾ ಅವರು, ‘ಇದು ಜಿಹಾದ್ ಅಲ್ಲ, ಭಯೋತ್ಪಾದನೆಯ ಕೃತ್ಯ ಎಂದಷ್ಟೇ ಇದರ ಹಿಂದಿರುವವರಿಗೆ ಹೇಳಲು ಬಯಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೆಶಾವರ</strong>: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭಾನುವಾರ ರಾಜಕೀಯ ಪಕ್ಷವೊಂದರ ಸಭೆಯ ವೇಳೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ.</p>.<p>ಇಲ್ಲಿನ ಬಜೌರ್ ಖರ್ನಲ್ಲಿ ಜಮೈತ್ ಉಲೆಮಾ ಇ ಇಸ್ಲಾಂ ಫಜ್ಲ್ (ಜೆಯುಐ–ಎಫ್) ಪಕ್ಷದ ಸಭೆಯಲ್ಲಿ ಸ್ಫೋಟ ಸಂಭವಿಸಿತು. 200ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಭದ್ರತಾ ಸಿಬ್ಬಂದಿ ಸ್ಥಳವನ್ನು ಸುತ್ತುವರಿದಿದ್ದಾರೆ. ಸ್ಫೋಟದ ಸ್ವರೂಪವನ್ನು ಪರಿಶೀಲಿಸಲಾಗುತ್ತದೆ. ಇದೊಂದು ಆತ್ಮಾಹುತಿ ಸ್ಫೋಟ ಕೃತ್ಯ ಎಂದು ಹೇಳಲಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.</p>.<p>ಯಾವುದೇ ಸಂಘಟನೆಯು ಇದುವರೆಗೂ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿಲ್ಲ ಎಂದು ಮಲಕ್ಕಾಡ್ ವಲಯದ ಡಿಐಜಿ ಮೆಹಮೂದ್ ಸಟ್ಟಿ ತಿಳಿಸಿದರು. </p>.<p>‘ಸ್ಫೋಟ ಸಂಭವಿಸಿದಾಗ ಸಭೆಯಲ್ಲಿ ಸುಮಾರು 500 ಜನರು ಸೇರಿದ್ದರು. ಸ್ಥಳಕ್ಕೆ ಐದು ಆಂಬುಲೆನ್ಸ್ಗಳು ಧಾವಿಸಿವೆ’ ಎಂದು ರಕ್ಷಣಾ ಸಹಾಯವಾಣಿ 1122ರ ವಕ್ತಾರ ಬಿಲಾಲ್ ಫೈಜಿ ಅವರು ತಿಳಿಸಿದ್ದಾರೆ.</p>.<p>ಜೆಯುಐ–ಎಫ್ ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ ಅವರು, ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಉಸ್ತುವಾರಿ ಪ್ರಧಾನಿ ಅಜಂ ಖಾನ್ ಅವರಿಗೆ ಕೃತ್ಯದ ಸಮಗ್ರ ತನಿಖೆಗೆ ಆಗ್ರಹಪಡಿಸಿದ್ದಾರೆ.</p>.<p>ಪಕ್ಷದ ಕಾರ್ಯಕರ್ತರು ನೊಂದವರ ನೆರವಿಗಾಗಿ ಆಸ್ಪತ್ರೆಗೆ ಧಾವಿಸಬೇಕು ಹಾಗೂ ಶಾಂತಿ ಕಾಯ್ದುಕೊಳ್ಳಬೇಕು. ಸರ್ಕಾರ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.</p>.<p>ಕೃತ್ಯವನ್ನು ಖಂಡಿಸಿರುವ ಪಕ್ಷದ ಇನ್ನೊಬ್ಬ ಮುಖಂಡ ಹಫೀಜ್ ಹಮ್ದುಲ್ಹಾ ಅವರು, ‘ಇದು ಜಿಹಾದ್ ಅಲ್ಲ, ಭಯೋತ್ಪಾದನೆಯ ಕೃತ್ಯ ಎಂದಷ್ಟೇ ಇದರ ಹಿಂದಿರುವವರಿಗೆ ಹೇಳಲು ಬಯಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>