<p><strong>ಇಸ್ಲಾಮಾಬಾದ್:</strong> ಅಫ್ಗನ್ ತಾಲಿಬಾನ್ ಹಾಗೂ ಪಾಕಿಸ್ತಾನದ ಅಧಿಕಾರಿಗಳು ಇಸ್ತಾನ್ಬುಲ್ನಲ್ಲಿ ಗುರುವಾರ ಶಾಂತಿ ಮಾತುಕತೆಯನ್ನು ಪುನಾರಂಭಿಸಿದ್ದಾರೆ. </p>.<p>ಉಭಯ ರಾಷ್ಟ್ರಗಳ ನಡುವಿನ ವೈಮನಸ್ಸು ಮತ್ತಷ್ಟು ಉಲ್ಭಣಗೊಳ್ಳದಂತೆ ತಪ್ಪಿಸಲು ಹಾಗೂ ಗಡಿಯಾಚೆಗಿನ ಭಯೋತ್ಪಾದನೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಈ ಮಾತುಕತೆ ಮುಂದುವರಿಸಿರುವುದಾಗಿ ತಿಳಿದುಬಂದಿದೆ. </p>.<p class="title">ಅಕ್ಟೋಬರ್ 11ರಂದು ಪಾಕ್ ಹಾಗೂ ಅಫ್ಗನ್ ಪಡೆಗಳ ನಡುವೆ ನಡೆದ ಸಂಘರ್ಷದಲ್ಲಿ ಎರಡೂ ಕಡೆ ಸಾವು–ನೋವು ಸಂಭವಿಸಿತ್ತು.</p>.<p class="title">206 ಮಂದಿ ಅಫ್ಗನ್ ತಾಲಿಬಾನಿಗಳು ಹಾಗೂ 110 ಮಂದಿ ತಹ್ರೀಕ್–ಎ–ತಾಲಿಬಾನ್ ಸಂಘಟನೆಯ ಸದಸ್ಯರನ್ನು ಹತ್ಯೆಗೈದಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿತ್ತು. ಜತೆಗೆ ಪಾಕ್ನ 23 ಮಂದಿ ಸೈನಿಕರೂ ಯುದ್ಧದಲ್ಲಿ ಮೃತಪಟ್ಟಿದ್ದರು. ಅಕ್ಟೋಬರ್ 15ರಂದು ಕದನವಿರಾಮ ಘೋಷಿಸಲಾಗಿತ್ತು.</p>.<p class="title">ಅಕ್ಟೋಬರ್ 18 ದೋಹಾದಲ್ಲಿ ಹಾಗೂ ಅಕ್ಟೋಬರ್ 25ರಂದು ಇಸ್ತಾಂಬುಲ್ನಲ್ಲಿ ಶಾಂತಿ ಮಾತುಕತೆ ನಡೆಸುವ ಮೂಲಕ ತಾತ್ಕಾಲಿಕ ಕದನವಿರಾಮವನ್ನು ಮುಂದುವರಿಸಲಾಗಿದೆ. ಇದೀಗ ಮೂರನೇ ಸುತ್ತಿನ ಮಾತುಕತೆ ಇಸ್ತಾನ್ಬುಲ್ನಲ್ಲಿ ನಡೆಸಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್:</strong> ಅಫ್ಗನ್ ತಾಲಿಬಾನ್ ಹಾಗೂ ಪಾಕಿಸ್ತಾನದ ಅಧಿಕಾರಿಗಳು ಇಸ್ತಾನ್ಬುಲ್ನಲ್ಲಿ ಗುರುವಾರ ಶಾಂತಿ ಮಾತುಕತೆಯನ್ನು ಪುನಾರಂಭಿಸಿದ್ದಾರೆ. </p>.<p>ಉಭಯ ರಾಷ್ಟ್ರಗಳ ನಡುವಿನ ವೈಮನಸ್ಸು ಮತ್ತಷ್ಟು ಉಲ್ಭಣಗೊಳ್ಳದಂತೆ ತಪ್ಪಿಸಲು ಹಾಗೂ ಗಡಿಯಾಚೆಗಿನ ಭಯೋತ್ಪಾದನೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಈ ಮಾತುಕತೆ ಮುಂದುವರಿಸಿರುವುದಾಗಿ ತಿಳಿದುಬಂದಿದೆ. </p>.<p class="title">ಅಕ್ಟೋಬರ್ 11ರಂದು ಪಾಕ್ ಹಾಗೂ ಅಫ್ಗನ್ ಪಡೆಗಳ ನಡುವೆ ನಡೆದ ಸಂಘರ್ಷದಲ್ಲಿ ಎರಡೂ ಕಡೆ ಸಾವು–ನೋವು ಸಂಭವಿಸಿತ್ತು.</p>.<p class="title">206 ಮಂದಿ ಅಫ್ಗನ್ ತಾಲಿಬಾನಿಗಳು ಹಾಗೂ 110 ಮಂದಿ ತಹ್ರೀಕ್–ಎ–ತಾಲಿಬಾನ್ ಸಂಘಟನೆಯ ಸದಸ್ಯರನ್ನು ಹತ್ಯೆಗೈದಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿತ್ತು. ಜತೆಗೆ ಪಾಕ್ನ 23 ಮಂದಿ ಸೈನಿಕರೂ ಯುದ್ಧದಲ್ಲಿ ಮೃತಪಟ್ಟಿದ್ದರು. ಅಕ್ಟೋಬರ್ 15ರಂದು ಕದನವಿರಾಮ ಘೋಷಿಸಲಾಗಿತ್ತು.</p>.<p class="title">ಅಕ್ಟೋಬರ್ 18 ದೋಹಾದಲ್ಲಿ ಹಾಗೂ ಅಕ್ಟೋಬರ್ 25ರಂದು ಇಸ್ತಾಂಬುಲ್ನಲ್ಲಿ ಶಾಂತಿ ಮಾತುಕತೆ ನಡೆಸುವ ಮೂಲಕ ತಾತ್ಕಾಲಿಕ ಕದನವಿರಾಮವನ್ನು ಮುಂದುವರಿಸಲಾಗಿದೆ. ಇದೀಗ ಮೂರನೇ ಸುತ್ತಿನ ಮಾತುಕತೆ ಇಸ್ತಾನ್ಬುಲ್ನಲ್ಲಿ ನಡೆಸಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>