<p><strong>ಸುರಿನ್( ಕಾಂಬೋಡಿಯಾ)</strong>: ಕಾಂಬೋಡಿಯಾ–ಥಾಯ್ಲೆಂಡ್ ಗಡಿ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು ಗಡಿಯಲ್ಲಿರುವ ವಿವಾದಿತ ಪ್ರದೇಶದಲ್ಲಿದ್ದ 30 ಅಡಿ ಎತ್ತರದ ವಿಷ್ಣು ಪ್ರತಿಮೆಯನ್ನು ಥಾಯ್ಲೆಂಡ್ ಸೇನೆ ಧ್ವಂಸ ಮಾಡಿದೆ ಎಂದು ಕಾಂಬೋಡಿಯಾ ಆರೋಪಿಸಿದೆ.</p><p>ಉಭಯ ದೇಶಗಳ ಮಧ್ಯೆ ಗಡಿ ಸಂಘರ್ಷ ಕಳೆದ ಎರಡು ವಾರಗಳಿಂದ ಮತ್ತಷ್ಟು ತೀವ್ರಗೊಂಡಿದ್ದು ಎರಡು ದೇಶಗಳ ಸೈನಿಕರ ನಡುವೆ ಘರ್ಷಣೆ ನಡೆದಿದೆ. ಥಾಯ್ ಸೇನೆ ವಿಷ್ಣು ಪ್ರತಿಮೆಯನ್ನು ಧ್ವಂಸ ಮಾಡಿದೆ ಎಂದು ಆರೋಪಿಸಿರುವ ಕಾಂಬೋಡಿಯಾ, ಥಾಯ್ಲೆಂಡ್ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದೆ.</p>.<p>2014ರಲ್ಲಿ ನಮ್ಮ ಗಡಿ ಪ್ರದೇಶದಲ್ಲಿರುವ ಪ್ರೇಮ್ ವಿಹಾರ್ ಪ್ರಾಂತ್ಯದಲ್ಲಿ ಈ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು. ಇದು ಗಡಿ ರೇಖೆಯಿಂದ 400 ಮೀಟರ್ ದೂರದಲ್ಲಿತ್ತು. ಎರಡು ದಿನಗಳ ಹಿಂದೆ ಈ ಪ್ರತಿಮೆಯನ್ನು ಧ್ವಂಸ ಮಾಡಲಾಗಿದೆ ಎಂದು ಕಾಂಬೋಡಿಯಾ ವಕ್ತಾರ ಕಿಮ್ ಚಾನ್ಪನ್ನಾ ಹೇಳಿದ್ದಾರೆ.</p><p>ಬೌದ್ಧ ಮತ್ತು ಹಿಂದೂ ಧರ್ಮದ ಭಕ್ತರು ಪೂಜಿಸುವ ಪುರಾತನ ದೇವಾಲಯಗಳು ಮತ್ತು ಪ್ರತಿಮೆಗಳನ್ನು ಧ್ವಂಸ ಮಾಡಿರುವುದನ್ನು ನಾವು ಖಂಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.</p><p>ಈ ಕುರಿತು ಪ್ರತಿಕ್ರಿಯೆ ನೀಡಲು ಥಾಯ್ಲೆಂಡ್ ಸೇನೆಯ ವಕ್ತಾರರು ನಿರಾಕರಿಸಿದ್ದಾರೆ. </p><p>ಹಲವು ದಶಕಗಳಿಂದ ಉಭಯ ದೇಶಗಳ ನಡುವೆ ಗಡಿ ಸಂಘರ್ಷ ನಡೆಯುತ್ತಿದೆ. ಈ ತಿಂಗಳಲ್ಲಿ ಘರ್ಷಣೆ ತೀವ್ರಗೊಂಡಿದ್ದು ಯುದ್ಧದ ಆತಂಕ ನಿರ್ಮಾಣವಾಗಿದೆ. ಗಡಿಯಲ್ಲಿದ್ದ 10 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ. ಘರ್ಷಣೆಯಲ್ಲಿ 40 ಜನರು ಮೃತಪಟ್ಟಿದ್ದಾರೆ ಎಂದು ಕಾಂಬೋಡಿಯಾ ಸರ್ಕಾರದ ಅಧಿಕಾರಿಗಳು ಖಚಿತಪಡಿಸಿದ್ದಾರೆ.</p>.ವಿದೇಶ ವಿದ್ಯಮಾನ | ಥಾಯ್ಲೆಂಡ್–ಕಾಂಬೋಡಿಯಾ: ಶತಮಾನದ ವೈಮನಸ್ಸು, ಸಂಘರ್ಷ ಬಿರುಸು.ನಿರಾಶ್ರಿತರ ಮೇಲೆ ಥಾಯ್ಲೆಂಡ್ ಬಾಂಬ್: ಕಾಂಬೋಡಿಯಾ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಿನ್( ಕಾಂಬೋಡಿಯಾ)</strong>: ಕಾಂಬೋಡಿಯಾ–ಥಾಯ್ಲೆಂಡ್ ಗಡಿ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು ಗಡಿಯಲ್ಲಿರುವ ವಿವಾದಿತ ಪ್ರದೇಶದಲ್ಲಿದ್ದ 30 ಅಡಿ ಎತ್ತರದ ವಿಷ್ಣು ಪ್ರತಿಮೆಯನ್ನು ಥಾಯ್ಲೆಂಡ್ ಸೇನೆ ಧ್ವಂಸ ಮಾಡಿದೆ ಎಂದು ಕಾಂಬೋಡಿಯಾ ಆರೋಪಿಸಿದೆ.</p><p>ಉಭಯ ದೇಶಗಳ ಮಧ್ಯೆ ಗಡಿ ಸಂಘರ್ಷ ಕಳೆದ ಎರಡು ವಾರಗಳಿಂದ ಮತ್ತಷ್ಟು ತೀವ್ರಗೊಂಡಿದ್ದು ಎರಡು ದೇಶಗಳ ಸೈನಿಕರ ನಡುವೆ ಘರ್ಷಣೆ ನಡೆದಿದೆ. ಥಾಯ್ ಸೇನೆ ವಿಷ್ಣು ಪ್ರತಿಮೆಯನ್ನು ಧ್ವಂಸ ಮಾಡಿದೆ ಎಂದು ಆರೋಪಿಸಿರುವ ಕಾಂಬೋಡಿಯಾ, ಥಾಯ್ಲೆಂಡ್ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದೆ.</p>.<p>2014ರಲ್ಲಿ ನಮ್ಮ ಗಡಿ ಪ್ರದೇಶದಲ್ಲಿರುವ ಪ್ರೇಮ್ ವಿಹಾರ್ ಪ್ರಾಂತ್ಯದಲ್ಲಿ ಈ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು. ಇದು ಗಡಿ ರೇಖೆಯಿಂದ 400 ಮೀಟರ್ ದೂರದಲ್ಲಿತ್ತು. ಎರಡು ದಿನಗಳ ಹಿಂದೆ ಈ ಪ್ರತಿಮೆಯನ್ನು ಧ್ವಂಸ ಮಾಡಲಾಗಿದೆ ಎಂದು ಕಾಂಬೋಡಿಯಾ ವಕ್ತಾರ ಕಿಮ್ ಚಾನ್ಪನ್ನಾ ಹೇಳಿದ್ದಾರೆ.</p><p>ಬೌದ್ಧ ಮತ್ತು ಹಿಂದೂ ಧರ್ಮದ ಭಕ್ತರು ಪೂಜಿಸುವ ಪುರಾತನ ದೇವಾಲಯಗಳು ಮತ್ತು ಪ್ರತಿಮೆಗಳನ್ನು ಧ್ವಂಸ ಮಾಡಿರುವುದನ್ನು ನಾವು ಖಂಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.</p><p>ಈ ಕುರಿತು ಪ್ರತಿಕ್ರಿಯೆ ನೀಡಲು ಥಾಯ್ಲೆಂಡ್ ಸೇನೆಯ ವಕ್ತಾರರು ನಿರಾಕರಿಸಿದ್ದಾರೆ. </p><p>ಹಲವು ದಶಕಗಳಿಂದ ಉಭಯ ದೇಶಗಳ ನಡುವೆ ಗಡಿ ಸಂಘರ್ಷ ನಡೆಯುತ್ತಿದೆ. ಈ ತಿಂಗಳಲ್ಲಿ ಘರ್ಷಣೆ ತೀವ್ರಗೊಂಡಿದ್ದು ಯುದ್ಧದ ಆತಂಕ ನಿರ್ಮಾಣವಾಗಿದೆ. ಗಡಿಯಲ್ಲಿದ್ದ 10 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ. ಘರ್ಷಣೆಯಲ್ಲಿ 40 ಜನರು ಮೃತಪಟ್ಟಿದ್ದಾರೆ ಎಂದು ಕಾಂಬೋಡಿಯಾ ಸರ್ಕಾರದ ಅಧಿಕಾರಿಗಳು ಖಚಿತಪಡಿಸಿದ್ದಾರೆ.</p>.ವಿದೇಶ ವಿದ್ಯಮಾನ | ಥಾಯ್ಲೆಂಡ್–ಕಾಂಬೋಡಿಯಾ: ಶತಮಾನದ ವೈಮನಸ್ಸು, ಸಂಘರ್ಷ ಬಿರುಸು.ನಿರಾಶ್ರಿತರ ಮೇಲೆ ಥಾಯ್ಲೆಂಡ್ ಬಾಂಬ್: ಕಾಂಬೋಡಿಯಾ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>