<p class="title"><strong>ಅಂಕಾರಾ:</strong> ಸಾವಿರಾರು ಕಟ್ಟಡಗಳು ನೆಲಸಮ ಆಗಿರುವುದರಲ್ಲಿ ಕಂಪನದ ಜತೆಗೆ ಕಳಪೆ ನಿರ್ಮಾಣವೂ ಕಾರಣವೆಂಬ ದೂರುಗಳು ಟರ್ಕಿಯಾದ್ಯಂತ ವ್ಯಾಪಕವಾಗಿವೆ. ಇದರಿಂದ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಟರ್ಕಿ ಸರ್ಕಾರ, ಭೂಕಂಪ ಸಂಬಂಧಿತ ಅಪರಾಧಗಳ ತನಿಖಾ ಬ್ಯೂರೊ ಸ್ಥಾಪಿಸುವುದಾಗಿ ಘೋಷಿಸಿದೆ.</p>.<p>ಈ ತನಿಖಾ ಸಂಸ್ಥೆ ಸಾಕ್ಷ್ಯಗಳನ್ನು ಸಂಗ್ರಹಿಸಲಿದೆ. ಕಟ್ಟಡಗಳ ನಿರ್ಮಾಣದಲ್ಲಿ ಜವಾಬ್ದಾರರಾದ ಗುತ್ತಿಗೆದಾರರು, ವಾಸ್ತುಶಿಲ್ಪಿಗಳು, ಭೂವಿಜ್ಞಾನಿಗಳು ಮತ್ತು ಎಂಜಿನಿಯರ್ಗಳನ್ನು ಗುರುತಿಸಿ, ಬಾಧ್ಯಸ್ಥರನ್ನಾಗಿಸಲು ಸೂಚಿಸಲಾಗಿದೆ. ಅಲ್ಲದೆ, ಕಟ್ಟಡ ಪರವಾನಗಿಗಳು ಮತ್ತು ಉದ್ಯೋಗ ಪರವಾನಗಿಗಳನ್ನು ಪರಿಶೀಲಿಸಿ ಸಂಬಂಧಿಸಿದವರ ಮೇಲೆ ಕ್ರಮಕ್ಕೆ ಆದೇಶಿಸಲಾಗಿದೆ ಎಂದು ಕಾನೂನು ಸಚಿವಾಲಯ ಹೇಳಿದೆ. </p>.<p>ಭೂಕಂಪ ತಾಳಿಕೊಳ್ಳದ ಕಟ್ಟಡಗಳ ಸಂಬಂಧ 131 ಗುತ್ತಿಗೆದಾರರು ಮತ್ತು ಎಂಜಿನಿಯರ್ಗಳನ್ನು ಹೊಣೆ ಮಾಡಲಾಗಿದೆ. ಇವರ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಟರ್ಕಿಯ ಕಾನೂನು ಸಚಿವ ಬೆಕಿರ್ ಬೊಜ್ಡಾಗ್ ಹೇಳಿದ್ದಾರೆ.</p>.<p>ಗಾಝಿಯಾನ್ಟೆಪ್ ಪ್ರಾಂತ್ಯದಲ್ಲಿ ಮೂವರನ್ನು ಬಂಧಿಸಿದ್ದು, ವಿಚಾರಣೆ ಬಾಕಿ ಇದೆ. ಇನ್ನೂ ಏಳು ಮಂದಿಯನ್ನು ವಶಕ್ಕೆ ಪಡೆದು, ದೇಶಬಿಡದಂತೆ ನಿರ್ಬಂಧ ಹೇರಲಾಗಿದೆ. </p>.<p>ಅದಿಯಾಮನ್ನಲ್ಲಿ ಹಲವು ಕಟ್ಟಡಗಳು ನಾಶವಾಗಿವೆ. ಇದರಿಂದ ಸರ್ಕಾರದ ಕ್ರಮಕ್ಕೆ ಹೆದರಿ, ದೇಶಬಿಡಲು ಮುಂದಾಗಿದ್ದ ಇಬ್ಬರು ಗುತ್ತಿಗೆದಾರರನ್ನು ಭಾನುವಾರ ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಡಿಎಚ್ಎ ಸುದ್ದಿ ಸಂಸ್ಥೆ ವರದಿ ಮಾಡಿದೆ. </p>.<p>‘ನನ್ನ ಆತ್ಮಸಾಕ್ಷಿಯು ಸ್ಪಷ್ಟವಿದೆ. ನಾನು 44 ಕಟ್ಟಡಗಳನ್ನು ನಿರ್ಮಿಸಿದ್ದೆ. ಅವುಗಳಲ್ಲಿ ನಾಲ್ಕು ನೆಲಸಮವಾಗಿವೆ. ನಿಯಮಾನುಸಾರವೇ ಕಟ್ಟಡಗಳನ್ನು ನಿರ್ಮಿಸಿದ್ದೆ’ ಎಂದು ಬಂಧಿತ ಗುತ್ತಿಗೆದಾರ ಯಾವುಜ್ ಕರಕಸ್ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.</p>.<p>ಭೂಕಂಪ ತಾಳಿಕೊಳ್ಳುವ ಎಂಜಿನಿಯರಿಂಗ್ ಮಾನದಂಡಗಳನ್ನು ಪೂರೈಸುವಂತೆ ಟರ್ಕಿಯಲ್ಲಿ ಕಟ್ಟಡ ನಿರ್ಮಾಣ ನಿಯಮಾವಳಿ ರೂಪಿಸಲಾಗಿದೆ. ಆದರೆ, ಇವು ಕಾಗದಕ್ಕೆ ಸೀಮಿತವಾಗಿದ್ದು, ಜಾರಿಯಾಗಿಲ್ಲ.</p>.<p>ಭಾರತ, ಅಮೆರಿಕ, ಚೀನಾ ಸೇರಿ ಜಗತ್ತಿನ ಸುಮಾರು 74 ರಾಷ್ಟ್ರಗಳಿಂದ ವಿಪತ್ತು ಸ್ಪಂದನಾ ಪಡೆಯ ಸಿಬ್ಬಂದಿ ಟರ್ಕಿ ಮತ್ತು ಸಿರಿಯಾ ದೇಶಗಳ ಸೇನೆ ಮತ್ತು ರಕ್ಷಣಾ ಸಿಬ್ಬಂದಿ ಜತೆಗೆ ರಕ್ಷಣಾ ಕಾರ್ಯಾಚರಣೆಯನ್ನು ನಿರಂತರವಾಗಿ ನಡೆಸುತ್ತಿದ್ದಾರೆ.</p>.<p>ಕಳೆದ ಸೋಮವಾರ (ಫೆ.6) ನಸುಕಿನಲ್ಲಿ 7.8ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದಾದ ನಂತರ 200ಕ್ಕೂ ಹೆಚ್ಚು ಕಂಪನಗಳು ಸಂಭವಿಸಿದ್ದವು.</p>.<p><u><strong>6ರ ಬಾಲಕನ ರಕ್ಷಣೆ; ಮಹಿಳೆಯರ ಕಣ್ಣಲ್ಲಿ ಆನಂದ ಭಾಷ್ಪ</strong></u></p>.<p>ಅದಿಯಾಮನ್ನಲ್ಲಿ ಅವಶೇಷಗಳಡಿ ಸಿಲುಕಿದ್ದ 6 ವರ್ಷದ ಬಾಲಕನನ್ನು ರಕ್ಷಣಾ ಸಿಬ್ಬಂದಿಯೊಬ್ಬರು ಸುರಕ್ಷಿತವಾಗಿ ಹೊರತಂದರು. ಅಲ್ಲಿ ಗುಂಪುಗೂಡಿದ್ದ ಮಹಿಳೆಯರ ಕಣ್ಣಲ್ಲಿ ಆನಂದಭಾಷ್ಪ. ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಬಾಲಕನ್ನು ರಕ್ಷಿಸಿದ ದೃಶ್ಯ ‘ಹೆಬರ್ ಟರ್ಕ್’ ವಾಹಿನಿಯಲ್ಲಿ ಪ್ರಸಾರವಾಗಿದೆ.</p>.<p>ಹತಾಯ್ ಪ್ರಾಂತ್ಯದ ಅಂಟಾಕ್ಯಾದಲ್ಲಿ 20ರಿಂದ 30 ವರ್ಷದ ವ್ಯಕ್ತಿಯನ್ನು ರಕ್ಷಿಸಲಾಯಿತು. ಅವಶೇಷಗಳಡಿ ಸಿಲುಕಿದ್ದ 9 ಜನರಲ್ಲಿ ಈತನೂ ಒಬ್ಬನಾಗಿದ್ದ. ಆದರೆ, ಅಲ್ಲಿ ಬೇರೆಯವರ ಇರುವಿಕೆ ಬಗ್ಗೆ ಮೂರು ದಿನಗಳಿಂದ ಯಾವುದೇ ಸೂಚನೆ ಇಲ್ಲವೆಂದು ಆ ವ್ಯಕ್ತಿ ಹೇಳಿದ್ದಾನೆ. ಕಿರಿಖಾನ್ನಲ್ಲಿ 88 ವರ್ಷದ ವ್ಯಕ್ತಿಯನ್ನು ಜರ್ಮಿನಿ ಮತ್ತು ಟರ್ಕಿ ರಕ್ಷಣಾ ಸಿಬ್ಬಂದಿ ರಕ್ಷಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಅಂಕಾರಾ:</strong> ಸಾವಿರಾರು ಕಟ್ಟಡಗಳು ನೆಲಸಮ ಆಗಿರುವುದರಲ್ಲಿ ಕಂಪನದ ಜತೆಗೆ ಕಳಪೆ ನಿರ್ಮಾಣವೂ ಕಾರಣವೆಂಬ ದೂರುಗಳು ಟರ್ಕಿಯಾದ್ಯಂತ ವ್ಯಾಪಕವಾಗಿವೆ. ಇದರಿಂದ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಟರ್ಕಿ ಸರ್ಕಾರ, ಭೂಕಂಪ ಸಂಬಂಧಿತ ಅಪರಾಧಗಳ ತನಿಖಾ ಬ್ಯೂರೊ ಸ್ಥಾಪಿಸುವುದಾಗಿ ಘೋಷಿಸಿದೆ.</p>.<p>ಈ ತನಿಖಾ ಸಂಸ್ಥೆ ಸಾಕ್ಷ್ಯಗಳನ್ನು ಸಂಗ್ರಹಿಸಲಿದೆ. ಕಟ್ಟಡಗಳ ನಿರ್ಮಾಣದಲ್ಲಿ ಜವಾಬ್ದಾರರಾದ ಗುತ್ತಿಗೆದಾರರು, ವಾಸ್ತುಶಿಲ್ಪಿಗಳು, ಭೂವಿಜ್ಞಾನಿಗಳು ಮತ್ತು ಎಂಜಿನಿಯರ್ಗಳನ್ನು ಗುರುತಿಸಿ, ಬಾಧ್ಯಸ್ಥರನ್ನಾಗಿಸಲು ಸೂಚಿಸಲಾಗಿದೆ. ಅಲ್ಲದೆ, ಕಟ್ಟಡ ಪರವಾನಗಿಗಳು ಮತ್ತು ಉದ್ಯೋಗ ಪರವಾನಗಿಗಳನ್ನು ಪರಿಶೀಲಿಸಿ ಸಂಬಂಧಿಸಿದವರ ಮೇಲೆ ಕ್ರಮಕ್ಕೆ ಆದೇಶಿಸಲಾಗಿದೆ ಎಂದು ಕಾನೂನು ಸಚಿವಾಲಯ ಹೇಳಿದೆ. </p>.<p>ಭೂಕಂಪ ತಾಳಿಕೊಳ್ಳದ ಕಟ್ಟಡಗಳ ಸಂಬಂಧ 131 ಗುತ್ತಿಗೆದಾರರು ಮತ್ತು ಎಂಜಿನಿಯರ್ಗಳನ್ನು ಹೊಣೆ ಮಾಡಲಾಗಿದೆ. ಇವರ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಟರ್ಕಿಯ ಕಾನೂನು ಸಚಿವ ಬೆಕಿರ್ ಬೊಜ್ಡಾಗ್ ಹೇಳಿದ್ದಾರೆ.</p>.<p>ಗಾಝಿಯಾನ್ಟೆಪ್ ಪ್ರಾಂತ್ಯದಲ್ಲಿ ಮೂವರನ್ನು ಬಂಧಿಸಿದ್ದು, ವಿಚಾರಣೆ ಬಾಕಿ ಇದೆ. ಇನ್ನೂ ಏಳು ಮಂದಿಯನ್ನು ವಶಕ್ಕೆ ಪಡೆದು, ದೇಶಬಿಡದಂತೆ ನಿರ್ಬಂಧ ಹೇರಲಾಗಿದೆ. </p>.<p>ಅದಿಯಾಮನ್ನಲ್ಲಿ ಹಲವು ಕಟ್ಟಡಗಳು ನಾಶವಾಗಿವೆ. ಇದರಿಂದ ಸರ್ಕಾರದ ಕ್ರಮಕ್ಕೆ ಹೆದರಿ, ದೇಶಬಿಡಲು ಮುಂದಾಗಿದ್ದ ಇಬ್ಬರು ಗುತ್ತಿಗೆದಾರರನ್ನು ಭಾನುವಾರ ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಡಿಎಚ್ಎ ಸುದ್ದಿ ಸಂಸ್ಥೆ ವರದಿ ಮಾಡಿದೆ. </p>.<p>‘ನನ್ನ ಆತ್ಮಸಾಕ್ಷಿಯು ಸ್ಪಷ್ಟವಿದೆ. ನಾನು 44 ಕಟ್ಟಡಗಳನ್ನು ನಿರ್ಮಿಸಿದ್ದೆ. ಅವುಗಳಲ್ಲಿ ನಾಲ್ಕು ನೆಲಸಮವಾಗಿವೆ. ನಿಯಮಾನುಸಾರವೇ ಕಟ್ಟಡಗಳನ್ನು ನಿರ್ಮಿಸಿದ್ದೆ’ ಎಂದು ಬಂಧಿತ ಗುತ್ತಿಗೆದಾರ ಯಾವುಜ್ ಕರಕಸ್ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.</p>.<p>ಭೂಕಂಪ ತಾಳಿಕೊಳ್ಳುವ ಎಂಜಿನಿಯರಿಂಗ್ ಮಾನದಂಡಗಳನ್ನು ಪೂರೈಸುವಂತೆ ಟರ್ಕಿಯಲ್ಲಿ ಕಟ್ಟಡ ನಿರ್ಮಾಣ ನಿಯಮಾವಳಿ ರೂಪಿಸಲಾಗಿದೆ. ಆದರೆ, ಇವು ಕಾಗದಕ್ಕೆ ಸೀಮಿತವಾಗಿದ್ದು, ಜಾರಿಯಾಗಿಲ್ಲ.</p>.<p>ಭಾರತ, ಅಮೆರಿಕ, ಚೀನಾ ಸೇರಿ ಜಗತ್ತಿನ ಸುಮಾರು 74 ರಾಷ್ಟ್ರಗಳಿಂದ ವಿಪತ್ತು ಸ್ಪಂದನಾ ಪಡೆಯ ಸಿಬ್ಬಂದಿ ಟರ್ಕಿ ಮತ್ತು ಸಿರಿಯಾ ದೇಶಗಳ ಸೇನೆ ಮತ್ತು ರಕ್ಷಣಾ ಸಿಬ್ಬಂದಿ ಜತೆಗೆ ರಕ್ಷಣಾ ಕಾರ್ಯಾಚರಣೆಯನ್ನು ನಿರಂತರವಾಗಿ ನಡೆಸುತ್ತಿದ್ದಾರೆ.</p>.<p>ಕಳೆದ ಸೋಮವಾರ (ಫೆ.6) ನಸುಕಿನಲ್ಲಿ 7.8ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದಾದ ನಂತರ 200ಕ್ಕೂ ಹೆಚ್ಚು ಕಂಪನಗಳು ಸಂಭವಿಸಿದ್ದವು.</p>.<p><u><strong>6ರ ಬಾಲಕನ ರಕ್ಷಣೆ; ಮಹಿಳೆಯರ ಕಣ್ಣಲ್ಲಿ ಆನಂದ ಭಾಷ್ಪ</strong></u></p>.<p>ಅದಿಯಾಮನ್ನಲ್ಲಿ ಅವಶೇಷಗಳಡಿ ಸಿಲುಕಿದ್ದ 6 ವರ್ಷದ ಬಾಲಕನನ್ನು ರಕ್ಷಣಾ ಸಿಬ್ಬಂದಿಯೊಬ್ಬರು ಸುರಕ್ಷಿತವಾಗಿ ಹೊರತಂದರು. ಅಲ್ಲಿ ಗುಂಪುಗೂಡಿದ್ದ ಮಹಿಳೆಯರ ಕಣ್ಣಲ್ಲಿ ಆನಂದಭಾಷ್ಪ. ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಬಾಲಕನ್ನು ರಕ್ಷಿಸಿದ ದೃಶ್ಯ ‘ಹೆಬರ್ ಟರ್ಕ್’ ವಾಹಿನಿಯಲ್ಲಿ ಪ್ರಸಾರವಾಗಿದೆ.</p>.<p>ಹತಾಯ್ ಪ್ರಾಂತ್ಯದ ಅಂಟಾಕ್ಯಾದಲ್ಲಿ 20ರಿಂದ 30 ವರ್ಷದ ವ್ಯಕ್ತಿಯನ್ನು ರಕ್ಷಿಸಲಾಯಿತು. ಅವಶೇಷಗಳಡಿ ಸಿಲುಕಿದ್ದ 9 ಜನರಲ್ಲಿ ಈತನೂ ಒಬ್ಬನಾಗಿದ್ದ. ಆದರೆ, ಅಲ್ಲಿ ಬೇರೆಯವರ ಇರುವಿಕೆ ಬಗ್ಗೆ ಮೂರು ದಿನಗಳಿಂದ ಯಾವುದೇ ಸೂಚನೆ ಇಲ್ಲವೆಂದು ಆ ವ್ಯಕ್ತಿ ಹೇಳಿದ್ದಾನೆ. ಕಿರಿಖಾನ್ನಲ್ಲಿ 88 ವರ್ಷದ ವ್ಯಕ್ತಿಯನ್ನು ಜರ್ಮಿನಿ ಮತ್ತು ಟರ್ಕಿ ರಕ್ಷಣಾ ಸಿಬ್ಬಂದಿ ರಕ್ಷಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>