<p><strong>ಡಾಕಾ</strong>: ಬಾಂಗ್ಲಾ ದೇಶದ ಮಧ್ಯಂತರ ಸರ್ಕಾರವು ಸುರಕ್ಷತೆ ದೃಷ್ಟಿಯಿಂದ ವೀಸಾ ಸೇವೆಯನ್ನು ಅಮಾನತಿನಲ್ಲಿ ಇಡುವಂತೆ ನವದೆಹಲಿ ಸೇರಿ ಭಾರತದಲ್ಲಿರುವ ತನ್ನ ಪ್ರಮುಖ ಅಧಿಕಾರಿಗಳಿಗೆ ಗುರುವಾರ ಸೂಚನೆ ನೀಡಿದೆ.</p>.<p>ವಿದೇಶಾಂಗ ವ್ಯವಹಾರಗಳ ಸಲಹೆಗಾರ ಎಂ. ತೌಹಿದ್ ಹುಸೇನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಭಾರತದಲ್ಲಿರುವ ನಮ್ಮ ಮೂವರು ಅಧಿಕಾರಿಗಳಿಗೆ ವೀಸಾ ವಿಭಾಗಗಳನ್ನು ತಾತ್ಕಾಲಿಕವಾಗಿ ಮುಚ್ಚಲು ತಿಳಿಸಿದ್ದೇವೆ’ ಎಂದರು.</p>.<p>‘ಇದಲ್ಲದೇ, ಅಮೆರಿಕ ಇತ್ತೀಚೆಗಷ್ಟೆ ಜಾರಿ ಮಾಡಿರುವ ವಿಸಾ ಬಾಂಡ್ (ಗ್ಯಾರಂಟಿ) ಅಗತ್ಯದ ಆದೇಶವನ್ನು ರದ್ದು ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ’ ಎಂದರು.</p>.<p>ಭಾರತ ಈ ಹಿಂದೆ 2024ರ ಆಗಸ್ಟ್ನಲ್ಲಿ ಬಾಂಗ್ಲಾದೇಶಿ ನಾಗರಿಕರ ವೀಸಾ ಮೇಲೆ ನಿಯಂತ್ರಣ ಹೇರಿತ್ತು.</p>
<p><strong>ಡಾಕಾ</strong>: ಬಾಂಗ್ಲಾ ದೇಶದ ಮಧ್ಯಂತರ ಸರ್ಕಾರವು ಸುರಕ್ಷತೆ ದೃಷ್ಟಿಯಿಂದ ವೀಸಾ ಸೇವೆಯನ್ನು ಅಮಾನತಿನಲ್ಲಿ ಇಡುವಂತೆ ನವದೆಹಲಿ ಸೇರಿ ಭಾರತದಲ್ಲಿರುವ ತನ್ನ ಪ್ರಮುಖ ಅಧಿಕಾರಿಗಳಿಗೆ ಗುರುವಾರ ಸೂಚನೆ ನೀಡಿದೆ.</p>.<p>ವಿದೇಶಾಂಗ ವ್ಯವಹಾರಗಳ ಸಲಹೆಗಾರ ಎಂ. ತೌಹಿದ್ ಹುಸೇನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಭಾರತದಲ್ಲಿರುವ ನಮ್ಮ ಮೂವರು ಅಧಿಕಾರಿಗಳಿಗೆ ವೀಸಾ ವಿಭಾಗಗಳನ್ನು ತಾತ್ಕಾಲಿಕವಾಗಿ ಮುಚ್ಚಲು ತಿಳಿಸಿದ್ದೇವೆ’ ಎಂದರು.</p>.<p>‘ಇದಲ್ಲದೇ, ಅಮೆರಿಕ ಇತ್ತೀಚೆಗಷ್ಟೆ ಜಾರಿ ಮಾಡಿರುವ ವಿಸಾ ಬಾಂಡ್ (ಗ್ಯಾರಂಟಿ) ಅಗತ್ಯದ ಆದೇಶವನ್ನು ರದ್ದು ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ’ ಎಂದರು.</p>.<p>ಭಾರತ ಈ ಹಿಂದೆ 2024ರ ಆಗಸ್ಟ್ನಲ್ಲಿ ಬಾಂಗ್ಲಾದೇಶಿ ನಾಗರಿಕರ ವೀಸಾ ಮೇಲೆ ನಿಯಂತ್ರಣ ಹೇರಿತ್ತು.</p>