<p><strong>ಕೈರೊ</strong>: ಭಾರತೀಯ ಪ್ರಜೆಯನ್ನು ಅಪಹರಿಸಿ ಒತ್ತೆಯಾಳುವನ್ನಾಗಿ ಇಟ್ಟುಕೊಂಡಿರುವ ಸುಡಾನ್ನ ಬಂಡುಕೋರರ ಪಡೆ, ಅವರ ಬಳಿ ಬಾಲಿವುಡ್ ನಟ ಶಾರುಕ್ ಖಾನ್ ಬಗ್ಗೆ ವಿಚಾರಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.</p><p>ಒಡಿಶಾದ ಜಗತ್ಸಿಂಗಪುರದ ನಿವಾಸಿ ಆದರ್ಶ್ ಬೆಹೆರಾ(36) ಅಪಹರಣಕ್ಕೊಳಗಾದ ವ್ಯಕ್ತಿ. ಸುಡಾನ್ನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರನ್ನು ಆರ್ಎಸ್ಎಫ್ ಬಂಡುಕೋರರು ಅಲ್ ಫಾಸಿರ್ ನಗರದಿಂದ ಅಪಹರಿಸಿದ್ದರು. ನಂತರ ಆರ್ಎಸ್ಎಫ್ನ ಭದ್ರಕೋಟೆಯಾದ ಮಿಲಿಟಿಯಾಗೆ ಕರೆದುಕೊಂಡು ಹೋಗಿದ್ದಾರೆ.</p><p>ವಿಡಿಯೊದಲ್ಲಿ ಆದರ್ಶ್ ಅವರು ಬಂಡುಕೋರರ ಮಧ್ಯೆ ಕುಳಿತಿರುವುದು ಕಾಣಬಹುದು. ಬಂದೂಕು ಹಿಡಿದುಕೊಂಡಿರುವ ಬಂಡುಕೋರನೊಬ್ಬ ‘ನಿಮಗೆ ಶಾರುಕ್ ಖಾನ್ ಗೊತ್ತಾ?’ ಎಂದು ಆದರ್ಶ್ ಅವರಲ್ಲಿ ಕೇಳಿದ್ದಾನೆ.</p><p>ಮತ್ತೊಬ್ಬ ಬಂಡುಕೋರ, ‘ಡಗ್ಲೋ ತುಂಬಾ ಒಳ್ಳೆಯವನು’ ಎಂದು ಹೇಳುವಂತೆ ಆದರ್ಶ್ಗೆ ಆಜ್ಞೆ ಮಾಡುವುದನ್ನೂ ಕಾಣಬಹುದಾಗಿದೆ. </p><p>ಸುಡಾನ್ನ ಸೇನಾ ಮುಖ್ಯಸ್ಥ ಅಬ್ಡೆಲ್ ಫತ್ತಾಹ್ ಅಲ್ ಬುರ್ಹನ್ ಮತ್ತು ಕ್ರಿಪ್ರ ಬೆಂಬಲ ಪಡೆಗಳ (ಆರ್ಎಸ್ಎಫ್) ಕಮಾಂಡರ್ ಮೊಹಮದ್ ಹಮ್ದಾನ್ ಡಗ್ಲೋ ನಡುವೆ 2023ರ ಏಪ್ರಿಲ್ನಿಂದ ಸಂಘರ್ಷ ಹುಟ್ಟುಕೊಂಡಿದ್ದು, ಇನ್ನೂ ಮುಂದುವರಿದಿದೆ. ಸಂಘರ್ಷದಲ್ಲಿ 80 ಲಕ್ಷ ಹೆಚ್ಚು ಜನರು ನೆಲೆ ಕಳೆದುಕೊಂಡಿದ್ದಾರೆ.</p><p>ಏತನ್ಮಧ್ಯೆ, ಆರ್ಎಸ್ಎಫ್ನಿಂದ ಆದರ್ಶ್ ಅವರನ್ನು ಪಾರು ಮಾಡುವಂತೆ ಅವರ ಕುಟುಂಬ ಭಾರತ ಸರ್ಕಾರವನ್ನು ಒತ್ತಾಯಿಸಿದೆ. </p><p>ಆದರ್ಶ್ ಅವರ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಸುಡಾನ್ ಅಧಿಕಾರಿಗಳು ಮತ್ತು ವಿದೇಶಾಂಗ ಸಚಿವಾಲಯದೊಂದಿಗೆ ಸಂಪರ್ಕದಲ್ಲಿರುವುದಾಗಿ ಭಾರತದಲ್ಲಿನ ಸುಡಾನ್ ರಾಯಭಾರಿ ಮೊಹಮ್ಮದ್ ಅಬ್ದಲ್ಲಾ ಅಲಿ ಎಲ್ಟೋಮ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೈರೊ</strong>: ಭಾರತೀಯ ಪ್ರಜೆಯನ್ನು ಅಪಹರಿಸಿ ಒತ್ತೆಯಾಳುವನ್ನಾಗಿ ಇಟ್ಟುಕೊಂಡಿರುವ ಸುಡಾನ್ನ ಬಂಡುಕೋರರ ಪಡೆ, ಅವರ ಬಳಿ ಬಾಲಿವುಡ್ ನಟ ಶಾರುಕ್ ಖಾನ್ ಬಗ್ಗೆ ವಿಚಾರಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.</p><p>ಒಡಿಶಾದ ಜಗತ್ಸಿಂಗಪುರದ ನಿವಾಸಿ ಆದರ್ಶ್ ಬೆಹೆರಾ(36) ಅಪಹರಣಕ್ಕೊಳಗಾದ ವ್ಯಕ್ತಿ. ಸುಡಾನ್ನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರನ್ನು ಆರ್ಎಸ್ಎಫ್ ಬಂಡುಕೋರರು ಅಲ್ ಫಾಸಿರ್ ನಗರದಿಂದ ಅಪಹರಿಸಿದ್ದರು. ನಂತರ ಆರ್ಎಸ್ಎಫ್ನ ಭದ್ರಕೋಟೆಯಾದ ಮಿಲಿಟಿಯಾಗೆ ಕರೆದುಕೊಂಡು ಹೋಗಿದ್ದಾರೆ.</p><p>ವಿಡಿಯೊದಲ್ಲಿ ಆದರ್ಶ್ ಅವರು ಬಂಡುಕೋರರ ಮಧ್ಯೆ ಕುಳಿತಿರುವುದು ಕಾಣಬಹುದು. ಬಂದೂಕು ಹಿಡಿದುಕೊಂಡಿರುವ ಬಂಡುಕೋರನೊಬ್ಬ ‘ನಿಮಗೆ ಶಾರುಕ್ ಖಾನ್ ಗೊತ್ತಾ?’ ಎಂದು ಆದರ್ಶ್ ಅವರಲ್ಲಿ ಕೇಳಿದ್ದಾನೆ.</p><p>ಮತ್ತೊಬ್ಬ ಬಂಡುಕೋರ, ‘ಡಗ್ಲೋ ತುಂಬಾ ಒಳ್ಳೆಯವನು’ ಎಂದು ಹೇಳುವಂತೆ ಆದರ್ಶ್ಗೆ ಆಜ್ಞೆ ಮಾಡುವುದನ್ನೂ ಕಾಣಬಹುದಾಗಿದೆ. </p><p>ಸುಡಾನ್ನ ಸೇನಾ ಮುಖ್ಯಸ್ಥ ಅಬ್ಡೆಲ್ ಫತ್ತಾಹ್ ಅಲ್ ಬುರ್ಹನ್ ಮತ್ತು ಕ್ರಿಪ್ರ ಬೆಂಬಲ ಪಡೆಗಳ (ಆರ್ಎಸ್ಎಫ್) ಕಮಾಂಡರ್ ಮೊಹಮದ್ ಹಮ್ದಾನ್ ಡಗ್ಲೋ ನಡುವೆ 2023ರ ಏಪ್ರಿಲ್ನಿಂದ ಸಂಘರ್ಷ ಹುಟ್ಟುಕೊಂಡಿದ್ದು, ಇನ್ನೂ ಮುಂದುವರಿದಿದೆ. ಸಂಘರ್ಷದಲ್ಲಿ 80 ಲಕ್ಷ ಹೆಚ್ಚು ಜನರು ನೆಲೆ ಕಳೆದುಕೊಂಡಿದ್ದಾರೆ.</p><p>ಏತನ್ಮಧ್ಯೆ, ಆರ್ಎಸ್ಎಫ್ನಿಂದ ಆದರ್ಶ್ ಅವರನ್ನು ಪಾರು ಮಾಡುವಂತೆ ಅವರ ಕುಟುಂಬ ಭಾರತ ಸರ್ಕಾರವನ್ನು ಒತ್ತಾಯಿಸಿದೆ. </p><p>ಆದರ್ಶ್ ಅವರ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಸುಡಾನ್ ಅಧಿಕಾರಿಗಳು ಮತ್ತು ವಿದೇಶಾಂಗ ಸಚಿವಾಲಯದೊಂದಿಗೆ ಸಂಪರ್ಕದಲ್ಲಿರುವುದಾಗಿ ಭಾರತದಲ್ಲಿನ ಸುಡಾನ್ ರಾಯಭಾರಿ ಮೊಹಮ್ಮದ್ ಅಬ್ದಲ್ಲಾ ಅಲಿ ಎಲ್ಟೋಮ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>