<p><strong>ಇಸ್ಲಾಮಾಬಾದ್:</strong> ವಿದೇಶಿ ಸಂಸ್ಥೆಗಳನ್ನು ನೇಮಿಸಿಕೊಳ್ಳಲು ಈಗಿರುವ ನಿಯಮಗಳನ್ನು ಪಾಕಿಸ್ತಾನ ಸಚಿವ ಸಂಪುಟ ಸಡಿಲಗೊಳಿಸಿದೆ.</p>.<p>ಕೌಶಲರಹಿತ ಅಧಿಕಾರಿಗಳ ಬದಲು ವಿದೇಶಿ ಪ್ರತಿಭೆ ಮನ್ನಣೆ ನೀಡುವುದು ಮತ್ತು ವಿವಿಧ ಯೋಜನೆಗಳಿಗೆ ಕೊಲ್ಲಿ ಮತ್ತು ಇತರ ರಾಷ್ಟ್ರಗಳಿಂದ ಹೆಚ್ಚು ಹೂಡಿಕೆಯನ್ನು ಆಕರ್ಷಿಸುವುದು ಈ ಯೋಜನೆಯ ಉದ್ದೇಶವಾಗಿದೆ.</p>.<p>‘ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಕಳೆದ ವರ್ಷ ನಾಗರಿಕ ಸೇನಾ ಸಂಸ್ಥೆ ರಚಿಸಿದ್ದ ವಿಶೇಷ ಹೂಡಿಕೆ ಸೌಕರ್ಯ ಮಂಡಳಿಗೆ(ಎಸ್ಐಎಫ್ಸಿ) ಉತ್ತೇಜನ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಎಕ್ಸ್ಪ್ರೆಸ್ ಟ್ರಿಬ್ಯುನ್ ಪತ್ರಿಕೆ ವರದಿ ಮಾಡಿದೆ. </p>.<p>‘ಯೋಜನೆಯನ್ನು ರೂಪಿಸಲು ಮತ್ತು ಅನುಷ್ಠಾನಗೊಳಿಸಲು ವಿಫಲವಾಗಿರುವ ಪಾಕಿಸ್ತಾನಿ ಅಧಿಕಾರಿಗಳ ಬದಲು ಈ ವಿದೇಶಿ ಸಂಸ್ಥೆಗಳನ್ನು ಐದು ವರ್ಷಗಳ ಅವಧಿಗೆ ನೇಮಿಸಿಕೊಳ್ಳಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.</p>.<p>ಅಧಿಕಾರಿಗಳ ವೈಫಲ್ಯಗಳ ಬಗ್ಗೆ ಎಸ್ಐಎಫ್ಸಿಯು ಸರ್ಕಾರಕ್ಕೆ ತಿಳಿಸಿದ್ದು, ಹೀಗಾಗಿ, ಸಚಿವಸಂಪುಟವು ಕೆಲ ನಿಯಮಗಳನ್ನು ಸಡಿಲಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್:</strong> ವಿದೇಶಿ ಸಂಸ್ಥೆಗಳನ್ನು ನೇಮಿಸಿಕೊಳ್ಳಲು ಈಗಿರುವ ನಿಯಮಗಳನ್ನು ಪಾಕಿಸ್ತಾನ ಸಚಿವ ಸಂಪುಟ ಸಡಿಲಗೊಳಿಸಿದೆ.</p>.<p>ಕೌಶಲರಹಿತ ಅಧಿಕಾರಿಗಳ ಬದಲು ವಿದೇಶಿ ಪ್ರತಿಭೆ ಮನ್ನಣೆ ನೀಡುವುದು ಮತ್ತು ವಿವಿಧ ಯೋಜನೆಗಳಿಗೆ ಕೊಲ್ಲಿ ಮತ್ತು ಇತರ ರಾಷ್ಟ್ರಗಳಿಂದ ಹೆಚ್ಚು ಹೂಡಿಕೆಯನ್ನು ಆಕರ್ಷಿಸುವುದು ಈ ಯೋಜನೆಯ ಉದ್ದೇಶವಾಗಿದೆ.</p>.<p>‘ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಕಳೆದ ವರ್ಷ ನಾಗರಿಕ ಸೇನಾ ಸಂಸ್ಥೆ ರಚಿಸಿದ್ದ ವಿಶೇಷ ಹೂಡಿಕೆ ಸೌಕರ್ಯ ಮಂಡಳಿಗೆ(ಎಸ್ಐಎಫ್ಸಿ) ಉತ್ತೇಜನ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಎಕ್ಸ್ಪ್ರೆಸ್ ಟ್ರಿಬ್ಯುನ್ ಪತ್ರಿಕೆ ವರದಿ ಮಾಡಿದೆ. </p>.<p>‘ಯೋಜನೆಯನ್ನು ರೂಪಿಸಲು ಮತ್ತು ಅನುಷ್ಠಾನಗೊಳಿಸಲು ವಿಫಲವಾಗಿರುವ ಪಾಕಿಸ್ತಾನಿ ಅಧಿಕಾರಿಗಳ ಬದಲು ಈ ವಿದೇಶಿ ಸಂಸ್ಥೆಗಳನ್ನು ಐದು ವರ್ಷಗಳ ಅವಧಿಗೆ ನೇಮಿಸಿಕೊಳ್ಳಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.</p>.<p>ಅಧಿಕಾರಿಗಳ ವೈಫಲ್ಯಗಳ ಬಗ್ಗೆ ಎಸ್ಐಎಫ್ಸಿಯು ಸರ್ಕಾರಕ್ಕೆ ತಿಳಿಸಿದ್ದು, ಹೀಗಾಗಿ, ಸಚಿವಸಂಪುಟವು ಕೆಲ ನಿಯಮಗಳನ್ನು ಸಡಿಲಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>