ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ20 ಶೃಂಗ | ಭಾರತದ ಅಧ್ಯಕ್ಷತೆಯಲ್ಲಿ ಪ್ರಗತಿ ನಿರೀಕ್ಷೆ: ಗೀತಾ ಗೋಪಿನಾಥ್‌

Last Updated 15 ಡಿಸೆಂಬರ್ 2022, 13:49 IST
ಅಕ್ಷರ ಗಾತ್ರ

ವಾಷಿಂಗ್ಟನ್:ಜಿ20 ಶೃಂಗವು ಭಾರತದ ಅಧ್ಯಕ್ಷತೆಯಲ್ಲಿ ಪ್ರಮುಖ ಮೂರು ಕ್ಷೇತ್ರಗಳಲ್ಲಿಸಮಗ್ರ ಪ್ರಗತಿ ಸಾಧಿಸಬಹುದು ಎಂದುಅಂತರರಾಷ್ಟ್ರೀಯ ಹಣಕಾಸು ನಿಧಿಯ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಆಶಿಸಿದ್ದಾರೆ.

‘ಜಾಗತಿಕ ಸಾಲ ಪರಿಹಾರ ನಿರ್ವಹಣೆ, ಕ್ರಿಪ್ಟೊಕರೆನ್ಸಿಗಳ ನಿಯಂತ್ರಣ, ಮತ್ತು ತಾಪಮಾನ ನಿರ್ವಹಣೆ ಕುರಿತ ಹಣಕಾಸಿನ ನೆರವು’ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ನಿರೀಕ್ಷೆಯಿದೆ ಎಂದು ಹೇಳಿದರು.ಜಿ20 ಕುರಿತು ಚರ್ಚಿಸಲು ಭಾರತಕ್ಕೆ ಭೇಟಿ ನೀಡಿರುವ ಅವರು, ತಮ್ಮ ಅಭಿಪ್ರಾಯ ಕುರಿತ ವಿಡಿಯೊವನ್ನು ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅತಿಕಡಿಮೆ ಆದಾಯದ ಹಲವು ದೇಶಗಳು ಸಾಲದ ಸಂಕಷ್ಟದಲ್ಲಿವೆ. ಸಾಲ ಪರಿಹಾರಕ್ಕಾಗಿಜಿ–20 ಒಂದು ಕಾರ್ಯಸೂಚಿ ಹೊಂದಿದ್ದರೂ ಕಾರ್ಯವಿಧಾನವನ್ನು ಸುಧಾರಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಇದು ಈಗಿನ ಅಗತ್ಯವೂ ಆಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT