<p><strong>ಯಾಗೂಂನ್ (ರಾಯಿಟರ್ಸ್): </strong>‘ವಿದೇಶಗಳಿಂದ ದ್ವೇಷಪೂರಿತ ಮತ್ತು ಪ್ರಚೋದನಕಾರಿ ಹೇಳಿಕೆಗಳು ಮ್ಯಾನ್ಮಾರ್ನ ಸಮುದಾಯಗಳ ನಡುವೆ ಮತ್ತಷ್ಟು ಒಡಕು ಹುಟ್ಟಿಸುತ್ತಿವೆ’ ಎಂದು ಮ್ಯಾನ್ಮಾರ್ನ ಹಿರಿಯ ನಾಯಕಿ ಆಂಗ್ ಸಾನ್ ಸೂಕಿ ಅವರುಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಯೊಂದನ್ನು ನೀಡಿದ್ದಾರೆ.</p>.<p>ಸಮುದಾಯಗಳ ನಡುವೆ ನಂಬಿಕೆಯನ್ನು ಮತ್ತೆ ಸ್ಥಾಪಿಸಲು ತಾಳ್ಮೆ ಹಾಗೂ ಸಾಕಷ್ಟು ಸಮಯದ ಅಗತ್ಯವಿದೆ ಎಂದು ಅವರು ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ತಮ್ಮನ್ನು ಭೇಟಿಯಾದ ವಿಶ್ವಸಂಸ್ಥೆಯ ಮ್ಯಾನ್ಮಾರ್ನ ವಿಶೇಷ ರಾಯಭಾರಿ ಸ್ಕ್ರೇನರ್ ಬರ್ಗೆನರ್ ಅವರಿಗೂ ಇದೇ ವಿಷಯವನ್ನು ತಿಳಿಸಿದ್ದಾರೆ.</p>.<p>‘ಕಳೆದ ಆಗಸ್ಟ್ನಿಂದ ಮ್ಯಾನ್ಮಾರ್ನ ಉತ್ತರಭಾಗದಿಂದ ಸುಮಾರು 70 ಸಾವಿರ ರೋಹಿಂಗ್ಯಾ ಮುಸಲ್ಮಾನರು ರಖೈನ್ ಪ್ರಾಂತ್ಯದಿಂದ ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದಾರೆ. ಇದಕ್ಕೆ ಬೌದ್ಧ ಸಮುದಾಯದ ದಾಳಿ ಹಾಗೂ ಸೇನಾ ಕಾರ್ಯಾಚರಣೆಯೇ ಕಾರಣ. ಈ ವೇಳೆ ಅನೇಕರ ಮೇಲೆ ಹತ್ಯೆ, ಅತ್ಯಾಚಾರಗಳು’ ನಡೆದಿದ್ದವು ಎಂದು ವಿಶ್ವಸಂಸ್ಥೆ ತಿಳಿಸಿತ್ತು.</p>.<p>‘ಮಾತುಕತೆ ಮೂಲಕ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮುಂದಡಿ ಇಡಬೇಕು’ ಎಂದು ಅವರು ಇದೇ ವೇಳೆ ಮನವಿ ಮಾಡಿದ್ದಾರೆ.</p>.<p>ಸೂಕಿ ಹೇಳಿಕೆ ಕುರಿತಂತೆ ಮ್ಯಾನ್ಮಾರ್ ಸರ್ಕಾರ ಯಾವುದೇ ಹೇಳಿಕೆ ನೀಡಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾಗೂಂನ್ (ರಾಯಿಟರ್ಸ್): </strong>‘ವಿದೇಶಗಳಿಂದ ದ್ವೇಷಪೂರಿತ ಮತ್ತು ಪ್ರಚೋದನಕಾರಿ ಹೇಳಿಕೆಗಳು ಮ್ಯಾನ್ಮಾರ್ನ ಸಮುದಾಯಗಳ ನಡುವೆ ಮತ್ತಷ್ಟು ಒಡಕು ಹುಟ್ಟಿಸುತ್ತಿವೆ’ ಎಂದು ಮ್ಯಾನ್ಮಾರ್ನ ಹಿರಿಯ ನಾಯಕಿ ಆಂಗ್ ಸಾನ್ ಸೂಕಿ ಅವರುಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಯೊಂದನ್ನು ನೀಡಿದ್ದಾರೆ.</p>.<p>ಸಮುದಾಯಗಳ ನಡುವೆ ನಂಬಿಕೆಯನ್ನು ಮತ್ತೆ ಸ್ಥಾಪಿಸಲು ತಾಳ್ಮೆ ಹಾಗೂ ಸಾಕಷ್ಟು ಸಮಯದ ಅಗತ್ಯವಿದೆ ಎಂದು ಅವರು ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ತಮ್ಮನ್ನು ಭೇಟಿಯಾದ ವಿಶ್ವಸಂಸ್ಥೆಯ ಮ್ಯಾನ್ಮಾರ್ನ ವಿಶೇಷ ರಾಯಭಾರಿ ಸ್ಕ್ರೇನರ್ ಬರ್ಗೆನರ್ ಅವರಿಗೂ ಇದೇ ವಿಷಯವನ್ನು ತಿಳಿಸಿದ್ದಾರೆ.</p>.<p>‘ಕಳೆದ ಆಗಸ್ಟ್ನಿಂದ ಮ್ಯಾನ್ಮಾರ್ನ ಉತ್ತರಭಾಗದಿಂದ ಸುಮಾರು 70 ಸಾವಿರ ರೋಹಿಂಗ್ಯಾ ಮುಸಲ್ಮಾನರು ರಖೈನ್ ಪ್ರಾಂತ್ಯದಿಂದ ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದಾರೆ. ಇದಕ್ಕೆ ಬೌದ್ಧ ಸಮುದಾಯದ ದಾಳಿ ಹಾಗೂ ಸೇನಾ ಕಾರ್ಯಾಚರಣೆಯೇ ಕಾರಣ. ಈ ವೇಳೆ ಅನೇಕರ ಮೇಲೆ ಹತ್ಯೆ, ಅತ್ಯಾಚಾರಗಳು’ ನಡೆದಿದ್ದವು ಎಂದು ವಿಶ್ವಸಂಸ್ಥೆ ತಿಳಿಸಿತ್ತು.</p>.<p>‘ಮಾತುಕತೆ ಮೂಲಕ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮುಂದಡಿ ಇಡಬೇಕು’ ಎಂದು ಅವರು ಇದೇ ವೇಳೆ ಮನವಿ ಮಾಡಿದ್ದಾರೆ.</p>.<p>ಸೂಕಿ ಹೇಳಿಕೆ ಕುರಿತಂತೆ ಮ್ಯಾನ್ಮಾರ್ ಸರ್ಕಾರ ಯಾವುದೇ ಹೇಳಿಕೆ ನೀಡಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>