<p><strong>ವಿಶ್ವಸಂಸ್ಥೆ</strong>: ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನ್ಯಾಯಯುತ, ಪರಿಣಾಮಕಾರಿ, ಪ್ರಾತಿನಿಧಿಕ, ಜವಾಬ್ದಾರಿಯುತ ಸುಧಾರಣೆ ತರುವ ಏಕೈಕ ಮಾರ್ಗವೆಂದರೆ ಅದರ ಶಾಶ್ವತ ಮತ್ತು ಶಾಶ್ವತವಲ್ಲದ ವರ್ಗಗಳಲ್ಲಿ ಸದಸ್ಯತ್ವವನ್ನು ಹೆಚ್ಚಿಸುವುದೇ ಆಗಿದೆ’ ಎಂದು ಭಾರತವು ಮಂಗಳವಾರ ಪ್ರತಿಪಾದಿಸಿದೆ.</p>.<p>ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಆಮೂಲಾಗ್ರ ಸುಧಾರಣೆಗೆ ಒತ್ತಾಯಿಸುವುದರಲ್ಲಿ ಭಾರತ ಮುಂಚೂಣಿಯಲ್ಲಿದೆ. 15 ಸದಸ್ಯ ಬಲದ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ನೀಡಬೇಕು ಎಂದೂ ಹಕ್ಕು ಪ್ರತಿಪಾದಿಸಿದೆ. </p>.<p>‘ಭದ್ರತಾ ಮಂಡಳಿಯ ಸದತ್ಯತ್ವ ವಿಸ್ತರಣೆ ಪರವಾಗಿ ಭಾರತ ಇದೆ. ಅದರ ಸುಧಾರಣೆಯ ನ್ಯಾಯಯುತ ಮಾರ್ಗ ಇದೇ ಆಗಿದೆ’ ಎಂದು ರಾಯಭಾರಿ, ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ರುಚಿರಾ ಕಾಂಬೊಜ್ ಹೇಳಿದ್ದಾರೆ.</p>.<p>ಸೋಮವಾರ ನಡೆದ ಭದ್ರತಾ ಮಂಡಳಿಯ ಅಂತರ ಸರ್ಕಾರ ಸಮಾಲೋಚನೆ (ಐಜಿಎನ್) ಸಮಿತಿಯ ಆರನೇ ಸುತ್ತಿನ ಸಭೆಯಲ್ಲಿ ಅವರು ಈ ಅಭಿಪ್ರಾಯವನ್ನು ಮಂಡಿಸಿದರು.</p>.<p>ಭೌಗೋಳಿಕ ಮತ್ತು ಅಭಿವೃದ್ಧಿ ವೈವಿಧ್ಯವನ್ನು ಸರಿಯಾಗಿ ಬಿಂಬಿಸಲು ಈಗ ಸುಧಾರಣೆ ಆಗಬೇಕಿದೆ. ಅಭಿವೃದ್ಧಿ ಆಗುತ್ತಿರುವ ದೇಶಗಳ ಧ್ವನಿಗೂ ಸೂಕ್ತ ಮಾನ್ಯತೆ ಸಿಗಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.</p>.<p>ರುಚಿರಾ ಅವರ ಭಾಷಣದ ತರುವಾಯ ಅಧಿಕಾರಿಯೊಬ್ಬರು ಇಂಡಿಯಾ ಮಿಷನ್ನ ‘ಎಕ್ಸ್’ ಜಾಲತಾಣದಲ್ಲಿ ಅವರ ಭಾಷಣದ ವಿಡಿಯೊ ಮುದ್ರಿಕೆಯನ್ನು ಪೋಸ್ಟ್ ಮಾಡಿದ್ದಾರೆ. ಭಾರತವು ಭದ್ರತಾ ಮಂಡಳಿಯ ಸುಧಾರಣೆಗೆ ಕರೆ ನೀಡಿದೆ ಎಂದು ಶೀರ್ಷಿಕೆ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವಸಂಸ್ಥೆ</strong>: ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನ್ಯಾಯಯುತ, ಪರಿಣಾಮಕಾರಿ, ಪ್ರಾತಿನಿಧಿಕ, ಜವಾಬ್ದಾರಿಯುತ ಸುಧಾರಣೆ ತರುವ ಏಕೈಕ ಮಾರ್ಗವೆಂದರೆ ಅದರ ಶಾಶ್ವತ ಮತ್ತು ಶಾಶ್ವತವಲ್ಲದ ವರ್ಗಗಳಲ್ಲಿ ಸದಸ್ಯತ್ವವನ್ನು ಹೆಚ್ಚಿಸುವುದೇ ಆಗಿದೆ’ ಎಂದು ಭಾರತವು ಮಂಗಳವಾರ ಪ್ರತಿಪಾದಿಸಿದೆ.</p>.<p>ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಆಮೂಲಾಗ್ರ ಸುಧಾರಣೆಗೆ ಒತ್ತಾಯಿಸುವುದರಲ್ಲಿ ಭಾರತ ಮುಂಚೂಣಿಯಲ್ಲಿದೆ. 15 ಸದಸ್ಯ ಬಲದ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ನೀಡಬೇಕು ಎಂದೂ ಹಕ್ಕು ಪ್ರತಿಪಾದಿಸಿದೆ. </p>.<p>‘ಭದ್ರತಾ ಮಂಡಳಿಯ ಸದತ್ಯತ್ವ ವಿಸ್ತರಣೆ ಪರವಾಗಿ ಭಾರತ ಇದೆ. ಅದರ ಸುಧಾರಣೆಯ ನ್ಯಾಯಯುತ ಮಾರ್ಗ ಇದೇ ಆಗಿದೆ’ ಎಂದು ರಾಯಭಾರಿ, ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ರುಚಿರಾ ಕಾಂಬೊಜ್ ಹೇಳಿದ್ದಾರೆ.</p>.<p>ಸೋಮವಾರ ನಡೆದ ಭದ್ರತಾ ಮಂಡಳಿಯ ಅಂತರ ಸರ್ಕಾರ ಸಮಾಲೋಚನೆ (ಐಜಿಎನ್) ಸಮಿತಿಯ ಆರನೇ ಸುತ್ತಿನ ಸಭೆಯಲ್ಲಿ ಅವರು ಈ ಅಭಿಪ್ರಾಯವನ್ನು ಮಂಡಿಸಿದರು.</p>.<p>ಭೌಗೋಳಿಕ ಮತ್ತು ಅಭಿವೃದ್ಧಿ ವೈವಿಧ್ಯವನ್ನು ಸರಿಯಾಗಿ ಬಿಂಬಿಸಲು ಈಗ ಸುಧಾರಣೆ ಆಗಬೇಕಿದೆ. ಅಭಿವೃದ್ಧಿ ಆಗುತ್ತಿರುವ ದೇಶಗಳ ಧ್ವನಿಗೂ ಸೂಕ್ತ ಮಾನ್ಯತೆ ಸಿಗಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.</p>.<p>ರುಚಿರಾ ಅವರ ಭಾಷಣದ ತರುವಾಯ ಅಧಿಕಾರಿಯೊಬ್ಬರು ಇಂಡಿಯಾ ಮಿಷನ್ನ ‘ಎಕ್ಸ್’ ಜಾಲತಾಣದಲ್ಲಿ ಅವರ ಭಾಷಣದ ವಿಡಿಯೊ ಮುದ್ರಿಕೆಯನ್ನು ಪೋಸ್ಟ್ ಮಾಡಿದ್ದಾರೆ. ಭಾರತವು ಭದ್ರತಾ ಮಂಡಳಿಯ ಸುಧಾರಣೆಗೆ ಕರೆ ನೀಡಿದೆ ಎಂದು ಶೀರ್ಷಿಕೆ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>