<p><strong>ಸಿಂಗಾಪುರ:</strong> ಭಾರತ ಮೂಲದ ಹಿರಿಯ ನಾಗರಿಕರೊಬ್ಬರು ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ಸುಳ್ಳು ದಾಖಲೆ ತೋರಿಸಿ ಮದ್ಯದಂಗಡಿ ಪ್ರವೇಶಿಸಿ, ಜೈಲು ಸೇರಿದ ಘಟನೆ ಸಿಂಗಾಪುರದಲ್ಲಿ ವರದಿಯಾಗಿದೆ.</p>.<p>ಕಳೆದ ವರ್ಷ ಕೋವಿಡ್-19 ಸೋಂಕು ವಿಪರೀತ ಏರಿಕೆ ಕಂಡುಬಂದ ಸಂದರ್ಭ 65 ವರ್ಷದ ಉದಯಕುಮಾರ್ ನಲ್ಲತಂಬಿ ಎಂಬುವವರು ಮತ್ತೊಬ್ಬರ ಲಸಿಕೀಕರಣದ ದಾಖಲೆಯನ್ನು ತೋರಿಸುವ ಮೂಲಕ ಬಾರ್ಗೆ ಪ್ರವೇಶ ಪಡೆದಿದ್ದರು ಎಂದು ಬುಧವಾರ 'ದಿ ಸ್ಟ್ರೈಟ್ ಟೈಮ್ಸ್ ನ್ಯೂಸ್ಪೇಪರ್' ವರದಿ ಮಾಡಿದೆ.</p>.<p>ಜೊತೆಗೆ ಉದಯಕುಮಾರ್ಗೆ ಸಹಾಯ ಮಾಡಿದ ಮತ್ತೊಬ್ಬ ಭಾರತೀಯ ಮೂಲದ ಮಲೇಷಿಯಾದ ಪ್ರಜೆ, 37 ವರ್ಷದ ಕಿರಣ್ ಸಿಂಗ್ ರಘುಬಿರ್ ಸಿಂಗ್ ಎಂಬುವವರು ಈಗಾಗಲೇ ಫೆಬ್ರುವರಿ ತಿಂಗಳಲ್ಲಿ 5 ದಿನಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ.</p>.<p>'ಟ್ರೇಸ್ ಟುಗೆದರ್ ಆ್ಯಪ್'ನಲ್ಲಿ ಉದಯಕುಮಾರ್ ಸುಳ್ಳು ದಾಖಲೆ ತೋರಿಸಿ ಮದ್ಯದಂಗಡಿ ಪ್ರವೇಶಿಸಿರುವುದು ದಾಖಲಾಗಿತ್ತು. ಮದ್ಯದಂಗಡಿ ಪ್ರವೇಶಕ್ಕೆ ಲಸಿಕೀಕರಣ ಕಡ್ಡಾಯವಾಗಿತ್ತು. ತನಿಖೆ ನಡೆದಾಗ ಕಿರಣ್ ಸಿಂಗ್ ಅವರ ಲಸಿಕೀಕರಣದ ದಾಖಲೆ ತೋರಿಸಿ ಬಾರ್ ಪ್ರವೇಶಿಸಿರುವುದು ಖಾತರಿಯಾಗಿತ್ತು.</p>.<p><a href="https://www.prajavani.net/india-news/uttar-pradesh-villege-development-officer-made-to-serve-mid-day-meals-for-delaying-to-reply-rti-932193.html" itemprop="url">ಆರ್ಟಿಐಗೆ ಉತ್ತರ ನೀಡದ ಅಧಿಕಾರಿಗೆ ಬಿಸಿಯೂಟ ಬಡಿಸುವ ಶಿಕ್ಷೆ! </a></p>.<p><strong>ನಡೆದಿದ್ದೇನು?</strong><br />ವಿಚಾರಣೆ ವೇಳೆ ಕಿರಣ್ ಸಿಂಗ್ ಕೋರ್ಟ್ ಮುಂದೆ ಹೇಳಿದ ಸಂಗತಿಯನ್ನು ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಶೆನ್ ವಾಂಕ್ವಿನ್ ಹಂಚಿಕೊಂಡಿದ್ದಾರೆ.</p>.<p>ಕಳೆದ ವರ್ಷ ಸೆಪ್ಟಂಬರ್ 9ರಂದು ಕಿರಣ್ ಸಿಂಗ್ ಅವರು ತಮ್ಮ ಗೆಳತಿಯೊಂದಿಗೆ ಸೆಂಟೊಸಾದ ಐಲೆಂಡ್ ರೆಸಾರ್ಟ್ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭ ಉದಯಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ನಂತರ 'ಬಿಕಿನಿ ಬಾರ್'ಗೆ ಹೋಗಲು ಮೂವರು ನಿರ್ಧರಿಸಿದ್ದಾರೆ. ಆದರೆ ಲಸಿಕೆ ಪಡೆಯದ ಕಾರಣ ಉದಯಕುಮಾರ್ ಅವರಿಗೆ ಬಿಕಿನಿ ಬಾರ್ನ ಸಹಾಯಕ ಮ್ಯಾನೇಜರ್ ಪ್ರವೇಶವನ್ನು ನಿರಾಕರಿಸಿದ್ದಾರೆ.</p>.<p>ಈ ವೇಳೆ ಸಿಂಗ್ ಅವರು ತನ್ನ ಟ್ರೇಸ್ ಟುಗೆದರ್ ಆ್ಯಪ್ ಬಳಸಿ ಬಾರ್ ಪ್ರವೇಶಿಸುವಂತೆ ಉದಯಕುಮಾರ್ ಅವರಿಗೆ ಸಲಹೆ ನೀಡಿದ್ದಾರೆ. ಒಪ್ಪಿದ ಉದಯಕುಮಾರ್ ಅವರು ಸಿಂಗ್ ಅವರ ಜೊತೆಗಿದ್ದ ಮಹಿಳೆಯ ಜೊತೆ ಬೇರೊಂದು ಬಾರ್ಗೆ ಹೋಗಿದ್ದಾರೆ. ಈ ವೇಳೆ ಸಿಂಗ್ ಹೊರಗೆ ಕಾದು ನಿಂತಿದ್ದಾರೆ.</p>.<p>ಉದಯಕುಮಾರ್ ಅವರು ಮತ್ತೊಂದು ಬಾರ್ ಪ್ರವೇಶಿಸಿ ಮದ್ಯ ಹೀರುತ್ತಿರುವ ಬಗ್ಗೆ ಬಿಕಿನಿ ಬಾರ್ನ ಸಹಾಯಕ ಮ್ಯಾನೇಜರ್ಗೆ ಆ್ಯಪ್ ಮೂಲಕ ಮಾಹಿತಿ ಸಿಕ್ಕಿದೆ. ಕೋವಿಡ್ ಲಸಿಕೆ ಪಡೆಯದ ಕಾರಣ ಉದಯಕುಮಾರ್ ಅವರಿಗೆ ತಮ್ಮ ಬಾರ್ನಲ್ಲಿ ಪ್ರವೇಶ ನಿರಾಕರಿಸಿದ್ದ ಮಾಹಿತಿಯನ್ನು ತಕ್ಷಣ ರವಾನಿಸಿದ್ದಾರೆ.</p>.<p>ಈ ಸುಳಿವು ಸಿಗುತ್ತಿದ್ದಂತೆ ಸಿಬ್ಬಂದಿ ಉದಯಕುಮಾರ್ ಅವರನ್ನು ಸಂಪರ್ಕಿಸಿದಾಗ ಸಿಂಗ್ ಅವರ ಹೆಸರಲ್ಲಿ ಬಾರ್ ಪ್ರವೇಶಿಸಿರುವುದು ಖಚಿತವಾಗಿದೆ. ತಕ್ಷಣ ಸೆಂಟೊಸಾ ಡೆವಲಪ್ಮೆಂಟ್ ಕಾರ್ಪೋರೇಷನ್ಗೆ ದೂರು ನೀಡಿದ್ದಾರೆ.</p>.<p>ಉದಯಕುಮಾರ್ ಅವರಿಗೆ ತನ್ನ ಹೆಸರಲ್ಲಿ ಬಾರ್ ಪ್ರವೇಶಿಸಲು ಅನುವು ಮಾಡಿಕೊಟ್ಟ ಬಗ್ಗೆ ತಪ್ಪೊಪ್ಪಿಕೊಂಡ ಸಿಂಗ್ ಅವರು ಫೆಬ್ರುವರಿ ತಿಂಗಳಲ್ಲಿ 5 ದಿನಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ.</p>.<p>ಸಿಂಗಾಪುರದಲ್ಲಿ ಪರರ ಹೆಸರಲ್ಲಿ ವಂಚನೆ ಮಾಡಿದರೆ 5 ವರ್ಷಗಳ ವರೆಗೆ ಜೈಲು ಹಾಗೂ ದಂಡ ವಿಧಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂಗಾಪುರ:</strong> ಭಾರತ ಮೂಲದ ಹಿರಿಯ ನಾಗರಿಕರೊಬ್ಬರು ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ಸುಳ್ಳು ದಾಖಲೆ ತೋರಿಸಿ ಮದ್ಯದಂಗಡಿ ಪ್ರವೇಶಿಸಿ, ಜೈಲು ಸೇರಿದ ಘಟನೆ ಸಿಂಗಾಪುರದಲ್ಲಿ ವರದಿಯಾಗಿದೆ.</p>.<p>ಕಳೆದ ವರ್ಷ ಕೋವಿಡ್-19 ಸೋಂಕು ವಿಪರೀತ ಏರಿಕೆ ಕಂಡುಬಂದ ಸಂದರ್ಭ 65 ವರ್ಷದ ಉದಯಕುಮಾರ್ ನಲ್ಲತಂಬಿ ಎಂಬುವವರು ಮತ್ತೊಬ್ಬರ ಲಸಿಕೀಕರಣದ ದಾಖಲೆಯನ್ನು ತೋರಿಸುವ ಮೂಲಕ ಬಾರ್ಗೆ ಪ್ರವೇಶ ಪಡೆದಿದ್ದರು ಎಂದು ಬುಧವಾರ 'ದಿ ಸ್ಟ್ರೈಟ್ ಟೈಮ್ಸ್ ನ್ಯೂಸ್ಪೇಪರ್' ವರದಿ ಮಾಡಿದೆ.</p>.<p>ಜೊತೆಗೆ ಉದಯಕುಮಾರ್ಗೆ ಸಹಾಯ ಮಾಡಿದ ಮತ್ತೊಬ್ಬ ಭಾರತೀಯ ಮೂಲದ ಮಲೇಷಿಯಾದ ಪ್ರಜೆ, 37 ವರ್ಷದ ಕಿರಣ್ ಸಿಂಗ್ ರಘುಬಿರ್ ಸಿಂಗ್ ಎಂಬುವವರು ಈಗಾಗಲೇ ಫೆಬ್ರುವರಿ ತಿಂಗಳಲ್ಲಿ 5 ದಿನಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ.</p>.<p>'ಟ್ರೇಸ್ ಟುಗೆದರ್ ಆ್ಯಪ್'ನಲ್ಲಿ ಉದಯಕುಮಾರ್ ಸುಳ್ಳು ದಾಖಲೆ ತೋರಿಸಿ ಮದ್ಯದಂಗಡಿ ಪ್ರವೇಶಿಸಿರುವುದು ದಾಖಲಾಗಿತ್ತು. ಮದ್ಯದಂಗಡಿ ಪ್ರವೇಶಕ್ಕೆ ಲಸಿಕೀಕರಣ ಕಡ್ಡಾಯವಾಗಿತ್ತು. ತನಿಖೆ ನಡೆದಾಗ ಕಿರಣ್ ಸಿಂಗ್ ಅವರ ಲಸಿಕೀಕರಣದ ದಾಖಲೆ ತೋರಿಸಿ ಬಾರ್ ಪ್ರವೇಶಿಸಿರುವುದು ಖಾತರಿಯಾಗಿತ್ತು.</p>.<p><a href="https://www.prajavani.net/india-news/uttar-pradesh-villege-development-officer-made-to-serve-mid-day-meals-for-delaying-to-reply-rti-932193.html" itemprop="url">ಆರ್ಟಿಐಗೆ ಉತ್ತರ ನೀಡದ ಅಧಿಕಾರಿಗೆ ಬಿಸಿಯೂಟ ಬಡಿಸುವ ಶಿಕ್ಷೆ! </a></p>.<p><strong>ನಡೆದಿದ್ದೇನು?</strong><br />ವಿಚಾರಣೆ ವೇಳೆ ಕಿರಣ್ ಸಿಂಗ್ ಕೋರ್ಟ್ ಮುಂದೆ ಹೇಳಿದ ಸಂಗತಿಯನ್ನು ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಶೆನ್ ವಾಂಕ್ವಿನ್ ಹಂಚಿಕೊಂಡಿದ್ದಾರೆ.</p>.<p>ಕಳೆದ ವರ್ಷ ಸೆಪ್ಟಂಬರ್ 9ರಂದು ಕಿರಣ್ ಸಿಂಗ್ ಅವರು ತಮ್ಮ ಗೆಳತಿಯೊಂದಿಗೆ ಸೆಂಟೊಸಾದ ಐಲೆಂಡ್ ರೆಸಾರ್ಟ್ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭ ಉದಯಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ನಂತರ 'ಬಿಕಿನಿ ಬಾರ್'ಗೆ ಹೋಗಲು ಮೂವರು ನಿರ್ಧರಿಸಿದ್ದಾರೆ. ಆದರೆ ಲಸಿಕೆ ಪಡೆಯದ ಕಾರಣ ಉದಯಕುಮಾರ್ ಅವರಿಗೆ ಬಿಕಿನಿ ಬಾರ್ನ ಸಹಾಯಕ ಮ್ಯಾನೇಜರ್ ಪ್ರವೇಶವನ್ನು ನಿರಾಕರಿಸಿದ್ದಾರೆ.</p>.<p>ಈ ವೇಳೆ ಸಿಂಗ್ ಅವರು ತನ್ನ ಟ್ರೇಸ್ ಟುಗೆದರ್ ಆ್ಯಪ್ ಬಳಸಿ ಬಾರ್ ಪ್ರವೇಶಿಸುವಂತೆ ಉದಯಕುಮಾರ್ ಅವರಿಗೆ ಸಲಹೆ ನೀಡಿದ್ದಾರೆ. ಒಪ್ಪಿದ ಉದಯಕುಮಾರ್ ಅವರು ಸಿಂಗ್ ಅವರ ಜೊತೆಗಿದ್ದ ಮಹಿಳೆಯ ಜೊತೆ ಬೇರೊಂದು ಬಾರ್ಗೆ ಹೋಗಿದ್ದಾರೆ. ಈ ವೇಳೆ ಸಿಂಗ್ ಹೊರಗೆ ಕಾದು ನಿಂತಿದ್ದಾರೆ.</p>.<p>ಉದಯಕುಮಾರ್ ಅವರು ಮತ್ತೊಂದು ಬಾರ್ ಪ್ರವೇಶಿಸಿ ಮದ್ಯ ಹೀರುತ್ತಿರುವ ಬಗ್ಗೆ ಬಿಕಿನಿ ಬಾರ್ನ ಸಹಾಯಕ ಮ್ಯಾನೇಜರ್ಗೆ ಆ್ಯಪ್ ಮೂಲಕ ಮಾಹಿತಿ ಸಿಕ್ಕಿದೆ. ಕೋವಿಡ್ ಲಸಿಕೆ ಪಡೆಯದ ಕಾರಣ ಉದಯಕುಮಾರ್ ಅವರಿಗೆ ತಮ್ಮ ಬಾರ್ನಲ್ಲಿ ಪ್ರವೇಶ ನಿರಾಕರಿಸಿದ್ದ ಮಾಹಿತಿಯನ್ನು ತಕ್ಷಣ ರವಾನಿಸಿದ್ದಾರೆ.</p>.<p>ಈ ಸುಳಿವು ಸಿಗುತ್ತಿದ್ದಂತೆ ಸಿಬ್ಬಂದಿ ಉದಯಕುಮಾರ್ ಅವರನ್ನು ಸಂಪರ್ಕಿಸಿದಾಗ ಸಿಂಗ್ ಅವರ ಹೆಸರಲ್ಲಿ ಬಾರ್ ಪ್ರವೇಶಿಸಿರುವುದು ಖಚಿತವಾಗಿದೆ. ತಕ್ಷಣ ಸೆಂಟೊಸಾ ಡೆವಲಪ್ಮೆಂಟ್ ಕಾರ್ಪೋರೇಷನ್ಗೆ ದೂರು ನೀಡಿದ್ದಾರೆ.</p>.<p>ಉದಯಕುಮಾರ್ ಅವರಿಗೆ ತನ್ನ ಹೆಸರಲ್ಲಿ ಬಾರ್ ಪ್ರವೇಶಿಸಲು ಅನುವು ಮಾಡಿಕೊಟ್ಟ ಬಗ್ಗೆ ತಪ್ಪೊಪ್ಪಿಕೊಂಡ ಸಿಂಗ್ ಅವರು ಫೆಬ್ರುವರಿ ತಿಂಗಳಲ್ಲಿ 5 ದಿನಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ.</p>.<p>ಸಿಂಗಾಪುರದಲ್ಲಿ ಪರರ ಹೆಸರಲ್ಲಿ ವಂಚನೆ ಮಾಡಿದರೆ 5 ವರ್ಷಗಳ ವರೆಗೆ ಜೈಲು ಹಾಗೂ ದಂಡ ವಿಧಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>