<p><strong>ಇರ್ಬಿಲ್ (ಇರಾಕ್)</strong>: ಇರಾನ್ ವಿರೋಧಿ ಭಯೋತ್ಪಾದಕ ಸಂಘಟನೆಗಳ ನೆಲೆ ಹಾಗೂ ಗುಪ್ತದಳದ ಮುಖ್ಯ ಕಚೇರಿಯನ್ನು ಗುರಿಯಾಗಿಸಿ ವಾಯುದಾಳಿ ಆರಂಭಿಸಲಾಗಿದೆ ಎಂದು ಇರಾನ್ ಮಂಗಳವಾರ ಘೋಷಿಸಿದೆ.</p>.<p>ಕುರ್ದಿಶ್ ವಲಯದ ಇರ್ಬಿಲ್ನಲ್ಲಿ ಇರುವ ಅಮೆರಿಕ ಕಾನ್ಸುಲೇಟ್ ಕಚೇರಿಯ ಸಮೀಪ ಕ್ಷಿಪಣಿ ದಾಳಿ ನಡೆದ ಹಿಂದೆಯೇ ಈ ಪ್ರತಿದಾಳಿ ಆರಂಭಿಸಲಾಗಿದೆ ಎಂದು ಇರಾನ್ ತಿಳಿಸಿದೆ.</p>.<p>ಕುರ್ದಿಶ್ ಪ್ರಾದೇಶಿಕ ಸರ್ಕಾರದ ಭದ್ರತಾ ಸಮಿತಿಯು ಈ ಕುರಿತಂತೆ ಹೇಳಿಕೆ ನೀಡಿದೆ. ಈ ದಾಳಿಯಿಂದ ನಾಲ್ವರು ನಾಗರಿಕರು ಮೃತಪಟ್ಟಿದ್ದು, ಇತರೆ ಆರು ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.</p>.<p>ಸ್ಥಳೀಯ ಉದ್ಯಮಿ ಪೇಶ್ರಾ ದಿಜಾಯಿ ಮತ್ತು ಅವರ ಕುಟುಂಬ ಸದಸ್ಯರು ಮೃತಪಟ್ಟಿದ್ದಾರೆ ಎಂದು ಇರಾಕ್ ಸಂಸತ್ತಿನ ಮಾಜಿ ಸದಸ್ಯ ಮಶನ್ ಅಲ್ ಜಬೌರಿ ಅವರು ‘ಎಕ್ಸ್’ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕ್ಷಿಪಣಿಯೊಂದು ಇವರ ಮನೆ ಮೇಲೇ ಬಿದ್ದಿದೆ ಎಂದು ತಿಳಿಸಿದರು.</p>.<p>ಸಿರಿಯಾದ ಇಸ್ಲಾಮಿಕ್ ಸ್ಟೇಟ್ನ ನೆಲೆ ಗುರಿಯಾಗಿಸಿ ಹಲವು ಕ್ಷಿಪಣಿ ದಾಳಿ ನಡೆಸಿದ್ದು, ನೆಲೆಯನ್ನು ನಾಶಪಡಿಸಲಾಗಿದೆ. ಮೊಸಾದ್ನಲ್ಲಿನ ಇಸ್ರೇಲ್ನ ಗುಪ್ತದಳ ಏಜೆನ್ಸಿ ಕಚೇರಿ ಮೇಲೂ ದಾಳಿ ನಡೆದಿದೆ ಎಂದು ಇರಾನ್ ಇಸ್ಲಾಮಿಕ್ ರಿವೊಲುಷನರಿ ಗಾರ್ಡ್ಸ್ ಹೇಳಿಕೆ ನೀಡಿದೆ.</p>.<p>ಈ ತಿಂಗಳ ಆರಂಭದಲ್ಲಿ ಇರಾನ್ನಲ್ಲಿ ನಡೆದಿದ್ದ ಎರಡು ಆತ್ಮಾಹುತಿ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿತ್ತು. ಈ ದಾಳಿಯಲ್ಲಿ ಕನಿಷ್ಠ 84 ಜನರು ಸತ್ತಿದ್ದು, 284 ಜನರು ಗಾಯಗೊಂಡಿದ್ದರು.</p>.<p>ಇರಾನ್ನಿಂದ ಉಪ ರಾಯಭಾರಿ ಹಿಂದಕ್ಕೆ ಕರೆಸಿದ ಇರಾಕ್: </p>.<p>ಇರಾನ್ ನಡೆಸಿದ ದಾಳಿಯನ್ನು ಖಂಡಿಸಿರುವ ಇರಾಕ್, ತೆಹ್ರೆನ್ನಲ್ಲಿರುವ ತನ್ನ ಉಪ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಅಲ್ಲದೆ ಬಾಗ್ದಾದ್ನಲ್ಲಿರುವ ಇರಾನ್ನ ರಾಯಭಾರ ಅನ್ನು ಕರೆಸಿಕೊಂಡು, ಪ್ರತಿಭಟನೆ ದಾಖಲಿಸಿದೆ.</p>.<p>ರಾತ್ರೋರಾತ್ರಿ ದಾಳಿ ನಡೆಸಿ ಹಲವು ನಾಗರಿಕರನ್ನು ಕೊಂದಿರುವ ಇರಾನ್ನ ಕ್ರಮವನ್ನು ತೀವ್ರವಾಗಿ ಖಂಡಿಸುವುದಾಗಿ ಇರಾಕ್ ವಿದೇಶಾಂಗ ಸಚಿವಾಲಯ ತಿಳಿಸಿದೆ.</p>.<p>‘ಇರಾನಿನ ದಾಳಿಯು ಇರಾಕ್ ಗಣರಾಜ್ಯದ ಸಾರ್ವಭೌಮತ್ವದ ಸ್ಪಷ್ಟ ಉಲ್ಲಂಘನೆಯಾಗಿದೆ. ಅಲ್ಲದೆ ಇದು ಉತ್ತಮ ನೆರೆಹೊರೆ ಸಂಬಂಧ ಮತ್ತು ಅಂತರರಾಷ್ಟ್ರೀಯ ಕಾನೂನಿನ ತತ್ವಗಳಿಗೆ ವಿರೋಧಿಯಾಗಿದೆ. ಜೊತೆಗೆ ಇದು ಈ ಪ್ರದೇಶದ ಭದ್ರತೆಗೆ ಬೆದರಿಕೆ ಹಾಕಿದಂತಾಗಿದೆ’ ಎಂದು ಸಚಿವಾಲಯ ಹೇಳಿಕೆಯಲ್ಲಿ ಉಲ್ಲೇಖಿಸಿದೆ.</p>.<p>‘ಇರಾನ್ ನಡೆಸಿದ ದಾಳಿಗೆ ಯಾವುದೇ ಕಾರಣವಿಲ್ಲ. ಅದನ್ನು ಕ್ಷಮಿಸಲಾಗದು’ ಎಂದು ಕುರ್ದಿಶ್ ಪ್ರದೇಶದ ಪ್ರಧಾನಿ ಮಸ್ರೂರ್ ಬರ್ಜಾನಿ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇರ್ಬಿಲ್ (ಇರಾಕ್)</strong>: ಇರಾನ್ ವಿರೋಧಿ ಭಯೋತ್ಪಾದಕ ಸಂಘಟನೆಗಳ ನೆಲೆ ಹಾಗೂ ಗುಪ್ತದಳದ ಮುಖ್ಯ ಕಚೇರಿಯನ್ನು ಗುರಿಯಾಗಿಸಿ ವಾಯುದಾಳಿ ಆರಂಭಿಸಲಾಗಿದೆ ಎಂದು ಇರಾನ್ ಮಂಗಳವಾರ ಘೋಷಿಸಿದೆ.</p>.<p>ಕುರ್ದಿಶ್ ವಲಯದ ಇರ್ಬಿಲ್ನಲ್ಲಿ ಇರುವ ಅಮೆರಿಕ ಕಾನ್ಸುಲೇಟ್ ಕಚೇರಿಯ ಸಮೀಪ ಕ್ಷಿಪಣಿ ದಾಳಿ ನಡೆದ ಹಿಂದೆಯೇ ಈ ಪ್ರತಿದಾಳಿ ಆರಂಭಿಸಲಾಗಿದೆ ಎಂದು ಇರಾನ್ ತಿಳಿಸಿದೆ.</p>.<p>ಕುರ್ದಿಶ್ ಪ್ರಾದೇಶಿಕ ಸರ್ಕಾರದ ಭದ್ರತಾ ಸಮಿತಿಯು ಈ ಕುರಿತಂತೆ ಹೇಳಿಕೆ ನೀಡಿದೆ. ಈ ದಾಳಿಯಿಂದ ನಾಲ್ವರು ನಾಗರಿಕರು ಮೃತಪಟ್ಟಿದ್ದು, ಇತರೆ ಆರು ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.</p>.<p>ಸ್ಥಳೀಯ ಉದ್ಯಮಿ ಪೇಶ್ರಾ ದಿಜಾಯಿ ಮತ್ತು ಅವರ ಕುಟುಂಬ ಸದಸ್ಯರು ಮೃತಪಟ್ಟಿದ್ದಾರೆ ಎಂದು ಇರಾಕ್ ಸಂಸತ್ತಿನ ಮಾಜಿ ಸದಸ್ಯ ಮಶನ್ ಅಲ್ ಜಬೌರಿ ಅವರು ‘ಎಕ್ಸ್’ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕ್ಷಿಪಣಿಯೊಂದು ಇವರ ಮನೆ ಮೇಲೇ ಬಿದ್ದಿದೆ ಎಂದು ತಿಳಿಸಿದರು.</p>.<p>ಸಿರಿಯಾದ ಇಸ್ಲಾಮಿಕ್ ಸ್ಟೇಟ್ನ ನೆಲೆ ಗುರಿಯಾಗಿಸಿ ಹಲವು ಕ್ಷಿಪಣಿ ದಾಳಿ ನಡೆಸಿದ್ದು, ನೆಲೆಯನ್ನು ನಾಶಪಡಿಸಲಾಗಿದೆ. ಮೊಸಾದ್ನಲ್ಲಿನ ಇಸ್ರೇಲ್ನ ಗುಪ್ತದಳ ಏಜೆನ್ಸಿ ಕಚೇರಿ ಮೇಲೂ ದಾಳಿ ನಡೆದಿದೆ ಎಂದು ಇರಾನ್ ಇಸ್ಲಾಮಿಕ್ ರಿವೊಲುಷನರಿ ಗಾರ್ಡ್ಸ್ ಹೇಳಿಕೆ ನೀಡಿದೆ.</p>.<p>ಈ ತಿಂಗಳ ಆರಂಭದಲ್ಲಿ ಇರಾನ್ನಲ್ಲಿ ನಡೆದಿದ್ದ ಎರಡು ಆತ್ಮಾಹುತಿ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿತ್ತು. ಈ ದಾಳಿಯಲ್ಲಿ ಕನಿಷ್ಠ 84 ಜನರು ಸತ್ತಿದ್ದು, 284 ಜನರು ಗಾಯಗೊಂಡಿದ್ದರು.</p>.<p>ಇರಾನ್ನಿಂದ ಉಪ ರಾಯಭಾರಿ ಹಿಂದಕ್ಕೆ ಕರೆಸಿದ ಇರಾಕ್: </p>.<p>ಇರಾನ್ ನಡೆಸಿದ ದಾಳಿಯನ್ನು ಖಂಡಿಸಿರುವ ಇರಾಕ್, ತೆಹ್ರೆನ್ನಲ್ಲಿರುವ ತನ್ನ ಉಪ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಅಲ್ಲದೆ ಬಾಗ್ದಾದ್ನಲ್ಲಿರುವ ಇರಾನ್ನ ರಾಯಭಾರ ಅನ್ನು ಕರೆಸಿಕೊಂಡು, ಪ್ರತಿಭಟನೆ ದಾಖಲಿಸಿದೆ.</p>.<p>ರಾತ್ರೋರಾತ್ರಿ ದಾಳಿ ನಡೆಸಿ ಹಲವು ನಾಗರಿಕರನ್ನು ಕೊಂದಿರುವ ಇರಾನ್ನ ಕ್ರಮವನ್ನು ತೀವ್ರವಾಗಿ ಖಂಡಿಸುವುದಾಗಿ ಇರಾಕ್ ವಿದೇಶಾಂಗ ಸಚಿವಾಲಯ ತಿಳಿಸಿದೆ.</p>.<p>‘ಇರಾನಿನ ದಾಳಿಯು ಇರಾಕ್ ಗಣರಾಜ್ಯದ ಸಾರ್ವಭೌಮತ್ವದ ಸ್ಪಷ್ಟ ಉಲ್ಲಂಘನೆಯಾಗಿದೆ. ಅಲ್ಲದೆ ಇದು ಉತ್ತಮ ನೆರೆಹೊರೆ ಸಂಬಂಧ ಮತ್ತು ಅಂತರರಾಷ್ಟ್ರೀಯ ಕಾನೂನಿನ ತತ್ವಗಳಿಗೆ ವಿರೋಧಿಯಾಗಿದೆ. ಜೊತೆಗೆ ಇದು ಈ ಪ್ರದೇಶದ ಭದ್ರತೆಗೆ ಬೆದರಿಕೆ ಹಾಕಿದಂತಾಗಿದೆ’ ಎಂದು ಸಚಿವಾಲಯ ಹೇಳಿಕೆಯಲ್ಲಿ ಉಲ್ಲೇಖಿಸಿದೆ.</p>.<p>‘ಇರಾನ್ ನಡೆಸಿದ ದಾಳಿಗೆ ಯಾವುದೇ ಕಾರಣವಿಲ್ಲ. ಅದನ್ನು ಕ್ಷಮಿಸಲಾಗದು’ ಎಂದು ಕುರ್ದಿಶ್ ಪ್ರದೇಶದ ಪ್ರಧಾನಿ ಮಸ್ರೂರ್ ಬರ್ಜಾನಿ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>