ಯುದ್ಧದಿಂದ ಮಕ್ಕಳಿಗೆ ಎಂದಿಗೂ ಒಳಿತಾಗುವುದಿಲ್ಲ. ಪವಿತ್ರ ಭೂಮಿಯಲ್ಲಿ ಶಾಂತಿ ಮತ್ತು ನ್ಯಾಯ ನೆಲೆಸಲೆಂದು ಹಂಬಲಿಸುತ್ತಿರುವ ಮಕ್ಕಳು ಹಾಗೂ ಜನರಿಗಾಗಿ ನಾನು ಮರುಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
2012ರಲ್ಲಿ ತಾಲಿಬಾನ್ ಹತ್ಯೆಯ ದಾಳಿಯಿಂದ ಬದುಕುಳಿದ ಮಲಾಲಾ, ತಾವು ಅನುಭವಿಸಿದ ನೋವನ್ನು ಹಂಚಿಕೊಂಡಿದ್ದಾರೆ. ‘ನಾನು ವಿದ್ಯಾರ್ಥಿಯಾಗಿದ್ದ ಸಂದರ್ಭ, 11 ವರ್ಷದವಳಾಗಿದ್ದಾಗಲೇ ಯುದ್ಧ ಹಾಗೂ ಭಯೋತ್ಪಾದನೆಗೆ ಸಾಕ್ಷಿಯಾಗಿದ್ದೆ. ಶಾಲೆ ಮತ್ತು ಮಸೀದಿ ಬಾಂಬ್ ದಾಳಿಯಿಂದ ನಾಶವಾಗಿದ್ದವು. ಶಾಂತಿ ಎಂಬುದು ನಮಗೆ ಕನಸಿನ ಮಾತಾಗಿತ್ತು‘ ಎಂದು ತಿಳಿಸಿದ್ದಾರೆ.