<p><strong>ನ್ಯೂಯಾರ್ಕ್ (ಪಿಟಿಐ): </strong>ಒಂಬತ್ತು ವರ್ಷದ ಮಲಮಗಳನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಭಾರತ ಮೂಲದ ಶ್ಯಾಮ್ದಾಯಿ ಅರ್ಜುನ್ ಎಂಬುವರನ್ನು ದೋಷಿ ಎಂದು ನ್ಯೂಯಾರ್ಕ್ನ ಕ್ವೀನ್ಸ್ ನ್ಯಾಯಾಲಯ ಘೋಷಿಸಿದೆ.</p>.<p>ಮಲಮಗಳು ಆಶಾದೀಪ್ ಕೌರ್ ಎಂಬುವವರನ್ನು 2016ರಲ್ಲಿ ಕೊಲೆ ಮಾಡಿರುವ ಆರೋಪ ಸಾಬೀತಾಗಿದ್ದು, ಜೂನ್3ರಂದು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲಾಗುತ್ತದೆ. ಗರಿಷ್ಠ 25 ವರ್ಷಗಳವರೆಗೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.</p>.<p>2016ರ ಆಗಸ್ಟ್ 19ರಂದು ನಡೆದ ಘಟನೆಯನ್ನು ಪ್ರತ್ಯಕ್ಷದರ್ಶಿಯೊಬ್ಬರು ವಿಚಾರಣೆ ವೇಳೆ ಕೋರ್ಟ್ಗೆ ವಿವರಿಸಿದ್ದಾರೆ.</p>.<p>‘ಶ್ಯಾಮ್ದಾಯಿ, ಆಕೆಯ ಮಾಜಿ ಪತಿ ನಾರಾಯಣನ್ ಹಾಗೂ 3 ಮತ್ತು 5 ವರ್ಷದ ಮೊಮ್ಮಕ್ಕಳೊಂದಿಗೆ ಕ್ವೀನ್ಸ್ನ ಅಪಾರ್ಟ್ಮೆಂಟ್ನಿಂದ ಹೊರಹೋದರು. ಆದರೆ, ಬಾತ್ರೂಂನ ದೀಪ ತುಂಬಾ ಹೊತ್ತು ಉರಿಯುತ್ತಿರುವುದನ್ನು ಗಮನಿ<br />ಸಿದ ನಾನು ತಕ್ಷಣವೇ ಬಾಲಕಿ ತಂದೆ ಸುಖ್ವಿಂದರ್ ಸಿಂಗ್ಗೆ ಕರೆ ಮಾಡಿದೆ.</p>.<p>ಅವರು ಬಂದ ಕೂಡಲೇ ಇಬ್ಬರೂ ಹೋಗಿ ಬಾತ್ರೂಂ ಬಾಗಿಲು ಒಡೆದು ನೋಡಿದಾಗ ವಿವಸ್ತ್ರವಾಗಿದ್ದ ಆಶಾದೀಪ್ಕೌರ್ ದೇಹ ಟಬ್ನಲ್ಲಿ ಇತ್ತು. ದೇಹದ ತುಂಬಾ ಗಾಯಗಳಾಗಿದ್ದವು’ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನ್ಯೂಯಾರ್ಕ್ (ಪಿಟಿಐ): </strong>ಒಂಬತ್ತು ವರ್ಷದ ಮಲಮಗಳನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಭಾರತ ಮೂಲದ ಶ್ಯಾಮ್ದಾಯಿ ಅರ್ಜುನ್ ಎಂಬುವರನ್ನು ದೋಷಿ ಎಂದು ನ್ಯೂಯಾರ್ಕ್ನ ಕ್ವೀನ್ಸ್ ನ್ಯಾಯಾಲಯ ಘೋಷಿಸಿದೆ.</p>.<p>ಮಲಮಗಳು ಆಶಾದೀಪ್ ಕೌರ್ ಎಂಬುವವರನ್ನು 2016ರಲ್ಲಿ ಕೊಲೆ ಮಾಡಿರುವ ಆರೋಪ ಸಾಬೀತಾಗಿದ್ದು, ಜೂನ್3ರಂದು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲಾಗುತ್ತದೆ. ಗರಿಷ್ಠ 25 ವರ್ಷಗಳವರೆಗೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.</p>.<p>2016ರ ಆಗಸ್ಟ್ 19ರಂದು ನಡೆದ ಘಟನೆಯನ್ನು ಪ್ರತ್ಯಕ್ಷದರ್ಶಿಯೊಬ್ಬರು ವಿಚಾರಣೆ ವೇಳೆ ಕೋರ್ಟ್ಗೆ ವಿವರಿಸಿದ್ದಾರೆ.</p>.<p>‘ಶ್ಯಾಮ್ದಾಯಿ, ಆಕೆಯ ಮಾಜಿ ಪತಿ ನಾರಾಯಣನ್ ಹಾಗೂ 3 ಮತ್ತು 5 ವರ್ಷದ ಮೊಮ್ಮಕ್ಕಳೊಂದಿಗೆ ಕ್ವೀನ್ಸ್ನ ಅಪಾರ್ಟ್ಮೆಂಟ್ನಿಂದ ಹೊರಹೋದರು. ಆದರೆ, ಬಾತ್ರೂಂನ ದೀಪ ತುಂಬಾ ಹೊತ್ತು ಉರಿಯುತ್ತಿರುವುದನ್ನು ಗಮನಿ<br />ಸಿದ ನಾನು ತಕ್ಷಣವೇ ಬಾಲಕಿ ತಂದೆ ಸುಖ್ವಿಂದರ್ ಸಿಂಗ್ಗೆ ಕರೆ ಮಾಡಿದೆ.</p>.<p>ಅವರು ಬಂದ ಕೂಡಲೇ ಇಬ್ಬರೂ ಹೋಗಿ ಬಾತ್ರೂಂ ಬಾಗಿಲು ಒಡೆದು ನೋಡಿದಾಗ ವಿವಸ್ತ್ರವಾಗಿದ್ದ ಆಶಾದೀಪ್ಕೌರ್ ದೇಹ ಟಬ್ನಲ್ಲಿ ಇತ್ತು. ದೇಹದ ತುಂಬಾ ಗಾಯಗಳಾಗಿದ್ದವು’ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>