ಗುರುವಾರ, 13 ನವೆಂಬರ್ 2025
×
ADVERTISEMENT
ADVERTISEMENT

ಧರ್ಮಸ್ಥಳ ಪ್ರಕರಣ: ಕಾಡಿನಲ್ಲಿ 7 ತಲೆ ಬುರುಡೆ, ನೂರಾರು ಮೂಳೆಗಳು ಪತ್ತೆ

Published : 18 ಸೆಪ್ಟೆಂಬರ್ 2025, 11:36 IST
Last Updated : 18 ಸೆಪ್ಟೆಂಬರ್ 2025, 19:30 IST
ಫಾಲೋ ಮಾಡಿ
Comments
ಒಂದು ಮೃತದೇಹದ ಗುರುತು ಪತ್ತೆ?
ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಸಿಕ್ಕಿರುವ ಮೃತದೇಹಗಳ ಅವಶೇಷಗಳಲ್ಲಿ ಒಂದು ಮೃತದೇಹದ ಗುರುತು ಪತ್ತೆಯಾಗಿದೆ ಎಂದು ಗೊತ್ತಾಗಿದೆ. ಮೃತದೇಹದ ಅವಶೇಷದ ಜೊತೆ ಗುರುತಿನ ಚೀಟಿಯೂ ಸಿಕ್ಕಿತ್ತು. ಅದರಲ್ಲಿದ್ದ ವಿಳಾಸದ ಪ್ರಕಾರ ಅದು ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಯು.ಬಿ.ಅಯ್ಯಪ್ಪ ಅವರದು ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಇನ್ನಷ್ಟೇ ಖಾತರಿಪಡಿಸಿಕೊಳ್ಳಬೇಕಿದೆ ಎಂದು ಮೂಲಗಳು ತಿಳಿಸಿವೆ.
ಸಾಕ್ಷಿ ದೂರುದಾರ ನ್ಯಾಯಾಲಯಕ್ಕೆ ಹಾಜರು
ಪ್ರಕರಣದ ಸಾಕ್ಷಿ ದೂರುದಾರನನ್ನು ಶಿವಮೊಗ್ಗದ ಜೈಲಿನಿಂದ ಕರೆತಂದು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಬುಧವಾರ ಹಾಜರುಪಡಿಸಲಾಯಿತು. ‘ಹೇಳಿಕೆ ದಾಖಲಿಸಿಕೊಳ್ಳುವ ಉದ್ದೇಶದಿಂದ ಆತನನ್ನು ಬೆಳ್ತಂಗಡಿಗೆ ಕರೆತರಲಾಗಿತ್ತು. ಆದರೆ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆದಿಲ್ಲ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT