<p><strong>ನವದೆಹಲಿ</strong>: ಹೆಸರಾಂತ ಲೇಖಕಿ ಕಿರಣ್ ದೇಸಾಯಿ ಅವರ ಇತ್ತೀಚಿನ ಕಾದಂಬರಿ ‘ದಿ ಲೋನ್ನ್ಲಿನೆಸ್ ಆಫ್ ಸೋನಿಯಾ ಆ್ಯಂಡ್ ಸನಿ’ ಕೃತಿಯು ಪ್ರತಿಷ್ಠಿತ ಬುಕರ್ ಪ್ರಶಸ್ತಿಯ ಮೊದಲ ಸುತ್ತಿಗೆ ಆಯ್ಕೆಯಾಗಿದೆ.</p>.<p>ಅವರ ‘ದಿ ಇನ್ಹೆರಿಟನ್ಸ್ ಆಫ್ ಲಾಸ್’ ಕೃತಿಗೆ ಬುಕರ್ ಪ್ರಶಸ್ತಿ ಲಭಿಸಿ 19 ವರ್ಷಗಳ ನಂತರ ಅವರ ಮತ್ತೊಂದು ಕೃತಿಯು ಮತ್ತೆ ಸ್ಥಾನ ಪಡೆದಂತಾಗಿದೆ.</p>.<p>ಬುಕರ್ ಪ್ರೈಜ್ ಫೌಂಡೇಷನ್, ಈ ಬಗ್ಗೆ ಮಂಗಳವಾರ ಘೋಷಣೆ ಮಾಡಿದೆ. ಒಟ್ಟು ಒಂಬತ್ತು ದೇಶಗಳ ಏಳು ಜನ ಮಹಿಳೆಯರು ಹಾಗೂ ಆರು ಜನ ಪುರುಷರು ರಚಿಸಿರುವ ಕಾದಂಬರಿಗಳು ಪಟ್ಟಿಯಲ್ಲಿವೆ.</p>.<p>‘ಕೆಲವು ಸಣ್ಣ ಕತೆಗಳು ಹಾಗೂ ದೀರ್ಘ ಕಾದಂಬರಿಗಳು ಪಟ್ಟಿಯಲ್ಲಿವೆ. ನಮ್ಮ ಭೂತ ಹಾಗೂ ವರ್ತಮಾನವನ್ನು ಒರೆಗೆ ಹಚ್ಚುವ ಪ್ರಯತ್ನಗಳು, ಹೊಸ ಪ್ರಯೋಗಗಳು ಈ ಕೃತಿಗಳಲ್ಲಿ ಕಂಡುಬರುತ್ತವೆ. ನಿರೂಪಣೆ ಹಾಗೂ ಪಾತ್ರಗಳ ಸೃಷ್ಟಿ ದೃಷ್ಟಿಯಿಂದ ಈ ಎಲ್ಲ ಕೃತಿಗಳು ಗಮನ ಸೆಳೆಯುವಂತಿವೆ’ ಎಂದು ತೀರ್ಪುಗಾರರ ಮಂಡಳಿ ಮುಖ್ಯಸ್ಥ ರೊಡಿ ಡಾಯ್ಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಹಮೀಶ್ ಹ್ಯಾಮಿಲ್ಟನ್ ಅವರು ದೇಸಾಯಿ ಅವರ ಕಾದಂಬರಿಯನ್ನು ಪ್ರಕಟಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಹೆಸರಾಂತ ಲೇಖಕಿ ಕಿರಣ್ ದೇಸಾಯಿ ಅವರ ಇತ್ತೀಚಿನ ಕಾದಂಬರಿ ‘ದಿ ಲೋನ್ನ್ಲಿನೆಸ್ ಆಫ್ ಸೋನಿಯಾ ಆ್ಯಂಡ್ ಸನಿ’ ಕೃತಿಯು ಪ್ರತಿಷ್ಠಿತ ಬುಕರ್ ಪ್ರಶಸ್ತಿಯ ಮೊದಲ ಸುತ್ತಿಗೆ ಆಯ್ಕೆಯಾಗಿದೆ.</p>.<p>ಅವರ ‘ದಿ ಇನ್ಹೆರಿಟನ್ಸ್ ಆಫ್ ಲಾಸ್’ ಕೃತಿಗೆ ಬುಕರ್ ಪ್ರಶಸ್ತಿ ಲಭಿಸಿ 19 ವರ್ಷಗಳ ನಂತರ ಅವರ ಮತ್ತೊಂದು ಕೃತಿಯು ಮತ್ತೆ ಸ್ಥಾನ ಪಡೆದಂತಾಗಿದೆ.</p>.<p>ಬುಕರ್ ಪ್ರೈಜ್ ಫೌಂಡೇಷನ್, ಈ ಬಗ್ಗೆ ಮಂಗಳವಾರ ಘೋಷಣೆ ಮಾಡಿದೆ. ಒಟ್ಟು ಒಂಬತ್ತು ದೇಶಗಳ ಏಳು ಜನ ಮಹಿಳೆಯರು ಹಾಗೂ ಆರು ಜನ ಪುರುಷರು ರಚಿಸಿರುವ ಕಾದಂಬರಿಗಳು ಪಟ್ಟಿಯಲ್ಲಿವೆ.</p>.<p>‘ಕೆಲವು ಸಣ್ಣ ಕತೆಗಳು ಹಾಗೂ ದೀರ್ಘ ಕಾದಂಬರಿಗಳು ಪಟ್ಟಿಯಲ್ಲಿವೆ. ನಮ್ಮ ಭೂತ ಹಾಗೂ ವರ್ತಮಾನವನ್ನು ಒರೆಗೆ ಹಚ್ಚುವ ಪ್ರಯತ್ನಗಳು, ಹೊಸ ಪ್ರಯೋಗಗಳು ಈ ಕೃತಿಗಳಲ್ಲಿ ಕಂಡುಬರುತ್ತವೆ. ನಿರೂಪಣೆ ಹಾಗೂ ಪಾತ್ರಗಳ ಸೃಷ್ಟಿ ದೃಷ್ಟಿಯಿಂದ ಈ ಎಲ್ಲ ಕೃತಿಗಳು ಗಮನ ಸೆಳೆಯುವಂತಿವೆ’ ಎಂದು ತೀರ್ಪುಗಾರರ ಮಂಡಳಿ ಮುಖ್ಯಸ್ಥ ರೊಡಿ ಡಾಯ್ಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಹಮೀಶ್ ಹ್ಯಾಮಿಲ್ಟನ್ ಅವರು ದೇಸಾಯಿ ಅವರ ಕಾದಂಬರಿಯನ್ನು ಪ್ರಕಟಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>