ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕ್ರಮಸಿಂಘೆ ನೇಮಕ ಜನರ ಆಶಯಕ್ಕೆ ವಿರುದ್ಧ: ವಿರೋಧ ಪಕ್ಷ

ಶ್ರೀಲಂಕಾ: ಸರ್ಕಾರದ ಭಾಗವಾಗುವುದಿಲ್ಲ – ವಿರೋಧ ಪಕ್ಷಗಳ ಹೇಳಿಕೆ
Last Updated 13 ಮೇ 2022, 20:49 IST
ಅಕ್ಷರ ಗಾತ್ರ

ಕೊಲಂಬೊ: ‘ದೇಶದ ಪ್ರಧಾನಿಯಾಗಿ ರಾನಿಲ್ ವಿಕ್ರಮಸಿಂಘೆ ಅವರ ನೇಮಕವು ಜನರ ಆಶಯಕ್ಕೆ ವಿರುದ್ಧವಾಗಿದೆ’ ಎಂದಿರುವ ವಿರೋಧ ಪಕ್ಷಗಳು, ವಿಕ್ರಮಸಿಂಘೆ ಅವರಿಗೆ ಬೆಂಬಲ ನೀಡುವುದಿಲ್ಲ ಎಂದು ಘೋಷಣೆ ಶುಕ್ರವಾರ ಮಾಡಿವೆ.

ಅಲ್ಲದೆ, ತಾವು ವಿಕ್ರಮಸಿಂಘೆ ಅವರ ಸರ್ಕಾರದ ಭಾಗವಾಗುವುದಿಲ್ಲ ಎಂದು ಬಹುತೇಕ ವಿರೋಧ ಪಕ್ಷಗಳು ಘೋಷಣೆ
ಮಾಡಿವೆ. ಆದರೆ, ದೇಶದ ಆರ್ಥಿಕ ಪುನಶ್ಚೇತನಕ್ಕೆ ಸರ್ಕಾರ ಕೈಗೊಳ್ಳಲಿರುವ ಆರ್ಥಿಕ ಕಾರ್ಯನೀತಿಗಳಿಗೆ ಬಾಹ್ಯ ಬೆಂಬಲ ನೀಡುವುದಾಗಿ ತಿಳಿಸಿವೆ.

ಈ ನಡುವೆ, ಪ್ರಮುಖ ವಿರೋಧಪಕ್ಷ ಎಸ್‌ಜೆಬಿ, ಅಧ್ಯಕ್ಷ ಗೊಟಬಯ ರಾಜಪಕ್ಸ ವಿರುದ್ಧದ ನಿರ್ಣಯ ಮತ್ತು ದೇಶದ ಪ್ರಸ್ತುತ ಸ್ಥಿತಿ ಕುರಿತು ಚರ್ಚೆ ನಡೆಸಿತು. ಅಲ್ಲದೆ ಜನತಾ ವಿಮುಕ್ತಿ ಪೆರಮುನಾ(ಜೆವಿಪಿ) ಮತ್ತು ತಮಿಳು ನ್ಯಾಷನಲ್ ಅಲಯನ್ಸ್ ಸಹ ವಿಕ್ರಮಸಿಂಘೆ ಅವರ ನೇಮಕವನ್ನು ಅಸಾಂವಿಧಾನಿಕ ಎಂದು ಟೀಕಿಸಿವೆ.

‘ಆತ್ಮಹತ್ಯೆಯಲ್ಲ, ಕೊಲೆ’: ‘ಗಲಭೆ ವೇಳೆ ಮೃತಪಟ್ಟ ಸಂಸದನ ಸಾವು ಆತ್ಮಹತ್ಯೆಯಲ್ಲ. ಅವರನ್ನು ಬಡಿದು ಕೊಲ್ಲಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ದೇಶದಾದ್ಯಂತ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಆಗಿನ ಆಡಳಿತಾರೂಢ ಪಕ್ಷದ ಸಂಸದ ಅಮರಕೀರ್ತಿ ಅತುಕೊರಲಾ ಅವರು ನಿಟ್ಟಂಬುವಾ ಎಂಬ ಪಟ್ಟಣದಲ್ಲಿ ಮೃತಪಟ್ಟಿದ್ದರು. ತಮ್ಮ ಕಾರನ್ನು ಅಡ್ಡಗಟ್ಟಿದ ಪ್ರತಿಭಟನಕಾರರ ಪೈಕಿ ಇಬ್ಬರ ಮೇಲೆ ಗುಂಡು ಹಾರಿಸಿದ್ದರು. ಬಳಿಕ ಪ್ರತಿಭಟನಕಾರರಿಗೆ ಬೆದರಿ, ಕಟ್ಟಡವೊಂದಕ್ಕೆ ತೆರಳಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿತ್ತು.

ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ವಕ್ತಾರ ನಿಹಾಲ್ ಥಲ್ಡುವಾ ಅವರು, 'ಸಂಸದರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಾಗಿ ಅವರನ್ನು ಪ್ರತಿಭಟನಕಾರರು ಭೀಕರವಾಗಿ ಹತ್ಯೆ ಮಾಡಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT