<p><strong>ಢಾಕಾ:</strong> ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಜನಪ್ರಿಯಗೊಳಿಸಿದ್ದ ‘ಜೊಯ್ ಬಾಂಗ್ಲಾ’ ಅನ್ನು ‘ರಾಷ್ಟ್ರೀಯ ಘೋಷಣೆ’ ಎಂಬುದಾಗಿ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.</p>.<p>‘ಜೊಯ್ ಬಾಂಗ್ಲಾ’ವನ್ನು ರಾಷ್ಟ್ರೀಯ ಘೋಷಣೆ ಎಂಬುದಾಗಿ ಹೈಕೋರ್ಟ್ 2020ರ ಮಾರ್ಚ್ 10ರಂದು ತೀರ್ಪು ನೀಡಿತ್ತು. </p>.<p>ರೆಹಮಾನ್ ಅವರ ಪುತ್ರಿ ಶೇಖ್ ಹಸೀನಾ ಅವರನ್ನು ಆ.5ರಂದು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿದ ನಂತರ ಅಸ್ತಿತ್ವಕ್ಕೆ ಬಂದಿರುವ ಮಧ್ಯಂತರ ಸರ್ಕಾರವು ಈ ಘೋಷಣೆ ಕುರಿತ ಹೈಕೋರ್ಟ್ ತೀರ್ಪಿಗೆ ತಡೆ ನೀಡುವಂತೆ ಕೋರಿ ಡಿ.2ರಂದು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. </p>.<p>ರಾಷ್ಟ್ರೀಯ ಘೋಷಣೆಯು ಸರ್ಕಾರದ ನೀತಿ ನಿರ್ಧಾರದ ವಿಷಯವಾಗಿದೆ ಮತ್ತು ಈ ವಿಷಯದಲ್ಲಿ ನ್ಯಾಯಾಂಗವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೈಯದ್ ರೆಫಾತ್ ಅಹ್ಮದ್ ನೇತೃತ್ವದ ನಾಲ್ವರು ನ್ಯಾಯಮೂರ್ತಿಗಳು ಇದ್ದ ಪೀಠವು ತನ್ನ ತೀರ್ಪಿನಲ್ಲಿ ಹೇಳಿದೆ.</p>.<p>‘ಸುಪ್ರೀಂ ಕೋರ್ಟ್ನ ಪೀಠದ ಈ ಆದೇಶದ ನಂತರ ‘ಜೊಯ್ ಬಾಂಗ್ಲಾ’ ಅನ್ನು ರಾಷ್ಟ್ರೀಯ ಘೋಷಣೆಯಾಗಿ ಪರಿಗಣಿಸಲಾಗುವುದಿಲ್ಲ’ ಎಂದು ವಿಚಾರಣೆ ವೇಳೆ, ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಟಾರ್ನಿ ಜನರಲ್ ಅನೀಕ್ ಆರ್ ಹಕ್ ತಿಳಿಸಿದರು.</p>.<p>2022ರ ಫೆ.20 ರಂದು ಹಸೀನಾ ನೇತೃತ್ವದ ಸಂಪುಟ ಈ ವಾಕ್ಯವನ್ನು ರಾಷ್ಟ್ರೀಯ ಘೋಷಣೆ ಎಂದು ಘೋಷಿಸಿತ್ತು. ಅವಾಮಿ ಲೀಗ್ ಸರ್ಕಾರವು 2022ರ ಮಾ.2 ರಂದು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಢಾಕಾ:</strong> ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಜನಪ್ರಿಯಗೊಳಿಸಿದ್ದ ‘ಜೊಯ್ ಬಾಂಗ್ಲಾ’ ಅನ್ನು ‘ರಾಷ್ಟ್ರೀಯ ಘೋಷಣೆ’ ಎಂಬುದಾಗಿ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.</p>.<p>‘ಜೊಯ್ ಬಾಂಗ್ಲಾ’ವನ್ನು ರಾಷ್ಟ್ರೀಯ ಘೋಷಣೆ ಎಂಬುದಾಗಿ ಹೈಕೋರ್ಟ್ 2020ರ ಮಾರ್ಚ್ 10ರಂದು ತೀರ್ಪು ನೀಡಿತ್ತು. </p>.<p>ರೆಹಮಾನ್ ಅವರ ಪುತ್ರಿ ಶೇಖ್ ಹಸೀನಾ ಅವರನ್ನು ಆ.5ರಂದು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿದ ನಂತರ ಅಸ್ತಿತ್ವಕ್ಕೆ ಬಂದಿರುವ ಮಧ್ಯಂತರ ಸರ್ಕಾರವು ಈ ಘೋಷಣೆ ಕುರಿತ ಹೈಕೋರ್ಟ್ ತೀರ್ಪಿಗೆ ತಡೆ ನೀಡುವಂತೆ ಕೋರಿ ಡಿ.2ರಂದು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. </p>.<p>ರಾಷ್ಟ್ರೀಯ ಘೋಷಣೆಯು ಸರ್ಕಾರದ ನೀತಿ ನಿರ್ಧಾರದ ವಿಷಯವಾಗಿದೆ ಮತ್ತು ಈ ವಿಷಯದಲ್ಲಿ ನ್ಯಾಯಾಂಗವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೈಯದ್ ರೆಫಾತ್ ಅಹ್ಮದ್ ನೇತೃತ್ವದ ನಾಲ್ವರು ನ್ಯಾಯಮೂರ್ತಿಗಳು ಇದ್ದ ಪೀಠವು ತನ್ನ ತೀರ್ಪಿನಲ್ಲಿ ಹೇಳಿದೆ.</p>.<p>‘ಸುಪ್ರೀಂ ಕೋರ್ಟ್ನ ಪೀಠದ ಈ ಆದೇಶದ ನಂತರ ‘ಜೊಯ್ ಬಾಂಗ್ಲಾ’ ಅನ್ನು ರಾಷ್ಟ್ರೀಯ ಘೋಷಣೆಯಾಗಿ ಪರಿಗಣಿಸಲಾಗುವುದಿಲ್ಲ’ ಎಂದು ವಿಚಾರಣೆ ವೇಳೆ, ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಟಾರ್ನಿ ಜನರಲ್ ಅನೀಕ್ ಆರ್ ಹಕ್ ತಿಳಿಸಿದರು.</p>.<p>2022ರ ಫೆ.20 ರಂದು ಹಸೀನಾ ನೇತೃತ್ವದ ಸಂಪುಟ ಈ ವಾಕ್ಯವನ್ನು ರಾಷ್ಟ್ರೀಯ ಘೋಷಣೆ ಎಂದು ಘೋಷಿಸಿತ್ತು. ಅವಾಮಿ ಲೀಗ್ ಸರ್ಕಾರವು 2022ರ ಮಾ.2 ರಂದು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>