<p><strong>ನಾಗಸಾಕಿ(ಜಪಾನ್):</strong> ಎರಡನೇ ಮಹಾಯುದ್ಧದ ಸಂದರ್ಭದಲ್ಲಿನಾಗಸಾಕಿ ಮೇಲೆ ಅಣುಬಾಂಬ್ ದಾಳಿ ನಡೆದು 75 ವರ್ಷ ತುಂಬಿದೆ. ಈ ನಿಮಿತ್ತ ಜಪಾನ್ನಲ್ಲಿ ಭಾನುವಾರ ಸ್ಮರಣಾರ್ಥ ಕಾರ್ಯಕ್ರಮನಡೆಯಿತು.</p>.<p>ಅಮೆರಿಕ 1945 ಆ.6ರಂದು ಜಪಾನಿನ ಹಿರೋಶಿಮಾ ನಗರದ ಮೇಲೆ ಅಣುಬಾಂಬ್ ದಾಳಿ ನಡೆಸಿದ್ದು, 1.40 ಲಕ್ಷ ಜನ ಮೃತಪಟ್ಟಿದ್ದರು. ಮೂರು ದಿನಗಳ ಬಳಿಕ ನಾಗಸಾಕಿಯ ಮೇಲೆ ನಡೆಸಿದ ಅಣುಬಾಂಬ್ ದಾಳಿಯಲ್ಲಿ 74,000 ಜನರು ತಮ್ಮ ಪ್ರಾಣ ಕಳೆದುಕೊಂಡರು.</p>.<p>ಜಪಾನ್ ಅಣುಬಾಂಬ್ ದಾಳಿಗೆ ಗುರಿಯಾದ ಏಕಮಾತ್ರ ರಾಷ್ಟ್ರವಾಗಿದೆ.ಈ ನಿಮಿತ್ತ ಕಾರ್ಯಕ್ರಮದಲ್ಲಿ ಅಣುಬಾಂಬ್ ದಾಳಿಯಲ್ಲಿ ಬದುಕುಳಿದವರು, ಅವರ ಸಂಬಂಧಿಕರು, ವಿದೇಶಿ ಪ್ರಮುಖರು ಭಾಗವಹಿಸಿದ್ದರು. ಬೆಳಿಗ್ಗೆ 11.02 ಕ್ಕೆ ಸರಿಯಾಗಿ ಮೌನ ಪ್ರಾರ್ಥನೆ ನಡೆದಿದ್ದು, ವಿಶ್ವಶಾಂತಿ ರಕ್ಷಣೆಗೆ ಕೋರಲಾಯಿತು.</p>.<p>‘ಕೊರೊನಾ ವೈರಾಣುಹರಡಲಾರಂಭಿಸಿದಾಗ ಮಾತ್ರ ನಾವು ಅದರ ಬಗ್ಗೆ ಭಯಪಡಲು ಆರಂಭಿಸಿದೆವು. ಅದೇ ರೀತಿ ಅಣುಬಾಂಬ್ನ ಪರಿಣಾಮ ಜನರಿಗೆ ಅರಿವಿಲ್ಲ. ಸಂಕಷ್ಟಕ್ಕೆ ಸಿಲುಕಿದಾಗ ಮಾತ್ರ ಅದರ ನೋವು ನಮಗೆ ತಿಳಿಯುತ್ತದೆ’ ಎಂದು ನಾಗಸಾಕಿಯ ಮೇಯರ್ಟೋಮಿಹಿಸಾ ಟೌ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಸಾಕಿ(ಜಪಾನ್):</strong> ಎರಡನೇ ಮಹಾಯುದ್ಧದ ಸಂದರ್ಭದಲ್ಲಿನಾಗಸಾಕಿ ಮೇಲೆ ಅಣುಬಾಂಬ್ ದಾಳಿ ನಡೆದು 75 ವರ್ಷ ತುಂಬಿದೆ. ಈ ನಿಮಿತ್ತ ಜಪಾನ್ನಲ್ಲಿ ಭಾನುವಾರ ಸ್ಮರಣಾರ್ಥ ಕಾರ್ಯಕ್ರಮನಡೆಯಿತು.</p>.<p>ಅಮೆರಿಕ 1945 ಆ.6ರಂದು ಜಪಾನಿನ ಹಿರೋಶಿಮಾ ನಗರದ ಮೇಲೆ ಅಣುಬಾಂಬ್ ದಾಳಿ ನಡೆಸಿದ್ದು, 1.40 ಲಕ್ಷ ಜನ ಮೃತಪಟ್ಟಿದ್ದರು. ಮೂರು ದಿನಗಳ ಬಳಿಕ ನಾಗಸಾಕಿಯ ಮೇಲೆ ನಡೆಸಿದ ಅಣುಬಾಂಬ್ ದಾಳಿಯಲ್ಲಿ 74,000 ಜನರು ತಮ್ಮ ಪ್ರಾಣ ಕಳೆದುಕೊಂಡರು.</p>.<p>ಜಪಾನ್ ಅಣುಬಾಂಬ್ ದಾಳಿಗೆ ಗುರಿಯಾದ ಏಕಮಾತ್ರ ರಾಷ್ಟ್ರವಾಗಿದೆ.ಈ ನಿಮಿತ್ತ ಕಾರ್ಯಕ್ರಮದಲ್ಲಿ ಅಣುಬಾಂಬ್ ದಾಳಿಯಲ್ಲಿ ಬದುಕುಳಿದವರು, ಅವರ ಸಂಬಂಧಿಕರು, ವಿದೇಶಿ ಪ್ರಮುಖರು ಭಾಗವಹಿಸಿದ್ದರು. ಬೆಳಿಗ್ಗೆ 11.02 ಕ್ಕೆ ಸರಿಯಾಗಿ ಮೌನ ಪ್ರಾರ್ಥನೆ ನಡೆದಿದ್ದು, ವಿಶ್ವಶಾಂತಿ ರಕ್ಷಣೆಗೆ ಕೋರಲಾಯಿತು.</p>.<p>‘ಕೊರೊನಾ ವೈರಾಣುಹರಡಲಾರಂಭಿಸಿದಾಗ ಮಾತ್ರ ನಾವು ಅದರ ಬಗ್ಗೆ ಭಯಪಡಲು ಆರಂಭಿಸಿದೆವು. ಅದೇ ರೀತಿ ಅಣುಬಾಂಬ್ನ ಪರಿಣಾಮ ಜನರಿಗೆ ಅರಿವಿಲ್ಲ. ಸಂಕಷ್ಟಕ್ಕೆ ಸಿಲುಕಿದಾಗ ಮಾತ್ರ ಅದರ ನೋವು ನಮಗೆ ತಿಳಿಯುತ್ತದೆ’ ಎಂದು ನಾಗಸಾಕಿಯ ಮೇಯರ್ಟೋಮಿಹಿಸಾ ಟೌ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>