<p><strong>ಕಠ್ಮಂಡು</strong>: ಅತಿ ಎತ್ತರದ ಚಾರಣಕ್ಕೆ ತೆರಳಿದ್ದಾಗ ಆಮ್ಲಜನಕದ ಕೊರತೆಯಿಂದ ಅಸ್ವಸ್ಥಗೊಂಡು (ಆಲ್ಟಿಟ್ಯೂಡ್ ಸಿಕ್ನೆಸ್) ನೇಪಾಳದ ಇಬ್ಬರು ಕೂಲಿ ಕಾರ್ಮಿಕರು ಮತ್ತು ಇಬ್ಬರು ಚಾರಣಿಗರು ಮೃತಪಟ್ಟಿದ್ದಾರೆ. </p>.<p>‘ಆಲ್ಟಿಟ್ಯೂಡ್ ಸಿಕ್ನೆಸ್’ ಎಂಬುದು ಹೆಚ್ಚು ಎತ್ತರಕ್ಕೆ ಏರಿದಾಗ ಉಂಟಾಗುವ ಅನಾರೋಗ್ಯ ಸಮಸ್ಯೆಯಾಗಿದೆ. ಆಮ್ಲಜನಕದ ಕೊರತೆ ಉಂಟಾಗಿ, ಅಸ್ವಸ್ಥಗೊಳ್ಳುತ್ತಾರೆ. ವಿಶ್ರಾಂತಿ ಪಡದರೂ ಉಸಿರಾಡಲು ಕೆಲವೊಮ್ಮೆ ಸಾಧ್ಯವಾಗದ ಸ್ಥಿತಿ ಇರುತ್ತದೆ. </p>.<p>ಪ್ರತ್ಯೇಕ ಘಟನೆಗಳಲ್ಲಿ ಕೂಲಿ ಕಾರ್ಮಿಕರಾದ ದಿಲ್ ಬಹದ್ದೂರ್ ಗುರುಂಗ್ ಮತ್ತು ಸಮ್ಗಾ ಘಾಳೆ ಮತ್ತು ಚಾರಣಿಗರಾದ ರಾಮ್ ಬಹದ್ದೂರ್ ಥಾಪಾ ಮಗರ್, ಸೂರಜ್ ಮನ್ ಶ್ರೇಷ್ಠಾ ಅವರು ಸಾವಿಗೀಡಾಗಿದ್ದಾರೆ. </p>.<p>ಗುರುಂಗ್ ಮತ್ತು ಘಾಳೆ ವಿದೇಶಿ ಚಾರಣಿಗರ ಸರಕುಗಳನ್ನು ಹೊರುವ ಕೆಲಸ ಮಾಡುತ್ತಿದ್ದರು. ಚಾರಣದಿಂದ ಹಿಂದಿರುಗಿದ ಬಳಿಕ ಮಗರ್ ಅವರು ಹೋಟೆಲ್ನ ತಮ್ಮ ಕೊಠಡಿಯಲ್ಲಿ ಮೃತಪಟ್ಟಿದ್ದಾರೆ.</p>.<p>ನೇಪಾಳದ ಇನ್ನೊಬ್ಬ ಪ್ರಜೆ, ಸೂರಜ್ ಮನ್ ಶ್ರೇಷ್ಠಾ ಅವರು ಕಸ್ಕಿ ಜಿಲ್ಲೆಯಲ್ಲಿ ಚಾರಣ ಮಾಡುತ್ತಿದ್ದ ವೇಳೆ ‘ಆಲ್ಟಿಟ್ಯೂಡ್ ಸಿಕ್ನೆಸ್’ನಿಂದ ಬಳಲುತ್ತಿದ್ದರು. ಇವರು ಕೂಡ ಹೋಟೆಲ್ ಕೊಠಡಿಯಲ್ಲಿ ಶನಿವಾರ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಅಪಾಯ ತಡೆ ಹಾಗೂ ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. </p>.<p>ಚಾರಣದ ಬಳಿಕ ಇದೇ ರೀತಿಯ ಅನಾರೋಗ್ಯದಿಂದ ಅಸ್ವಸ್ಥಗೊಂಡಿದ್ದ ವಿದೇಶಿ ಪ್ರಜೆಯನ್ನು ರಕ್ಷಿಸಲಾಗಿದೆ. </p>.<p>ನೇಪಾಳದ ಕಸ್ಕಿ, ಮುಸ್ತಾಂಗ್ ಸೇರಿದಂತೆ ಹಲವೆಡೆ ಚಾರಣ ಮಾಡಲು ವಿದೇಶಗಳಿಂದ ಹಲವಾರು ಪ್ರವಾಸಿಗರು ಬಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಠ್ಮಂಡು</strong>: ಅತಿ ಎತ್ತರದ ಚಾರಣಕ್ಕೆ ತೆರಳಿದ್ದಾಗ ಆಮ್ಲಜನಕದ ಕೊರತೆಯಿಂದ ಅಸ್ವಸ್ಥಗೊಂಡು (ಆಲ್ಟಿಟ್ಯೂಡ್ ಸಿಕ್ನೆಸ್) ನೇಪಾಳದ ಇಬ್ಬರು ಕೂಲಿ ಕಾರ್ಮಿಕರು ಮತ್ತು ಇಬ್ಬರು ಚಾರಣಿಗರು ಮೃತಪಟ್ಟಿದ್ದಾರೆ. </p>.<p>‘ಆಲ್ಟಿಟ್ಯೂಡ್ ಸಿಕ್ನೆಸ್’ ಎಂಬುದು ಹೆಚ್ಚು ಎತ್ತರಕ್ಕೆ ಏರಿದಾಗ ಉಂಟಾಗುವ ಅನಾರೋಗ್ಯ ಸಮಸ್ಯೆಯಾಗಿದೆ. ಆಮ್ಲಜನಕದ ಕೊರತೆ ಉಂಟಾಗಿ, ಅಸ್ವಸ್ಥಗೊಳ್ಳುತ್ತಾರೆ. ವಿಶ್ರಾಂತಿ ಪಡದರೂ ಉಸಿರಾಡಲು ಕೆಲವೊಮ್ಮೆ ಸಾಧ್ಯವಾಗದ ಸ್ಥಿತಿ ಇರುತ್ತದೆ. </p>.<p>ಪ್ರತ್ಯೇಕ ಘಟನೆಗಳಲ್ಲಿ ಕೂಲಿ ಕಾರ್ಮಿಕರಾದ ದಿಲ್ ಬಹದ್ದೂರ್ ಗುರುಂಗ್ ಮತ್ತು ಸಮ್ಗಾ ಘಾಳೆ ಮತ್ತು ಚಾರಣಿಗರಾದ ರಾಮ್ ಬಹದ್ದೂರ್ ಥಾಪಾ ಮಗರ್, ಸೂರಜ್ ಮನ್ ಶ್ರೇಷ್ಠಾ ಅವರು ಸಾವಿಗೀಡಾಗಿದ್ದಾರೆ. </p>.<p>ಗುರುಂಗ್ ಮತ್ತು ಘಾಳೆ ವಿದೇಶಿ ಚಾರಣಿಗರ ಸರಕುಗಳನ್ನು ಹೊರುವ ಕೆಲಸ ಮಾಡುತ್ತಿದ್ದರು. ಚಾರಣದಿಂದ ಹಿಂದಿರುಗಿದ ಬಳಿಕ ಮಗರ್ ಅವರು ಹೋಟೆಲ್ನ ತಮ್ಮ ಕೊಠಡಿಯಲ್ಲಿ ಮೃತಪಟ್ಟಿದ್ದಾರೆ.</p>.<p>ನೇಪಾಳದ ಇನ್ನೊಬ್ಬ ಪ್ರಜೆ, ಸೂರಜ್ ಮನ್ ಶ್ರೇಷ್ಠಾ ಅವರು ಕಸ್ಕಿ ಜಿಲ್ಲೆಯಲ್ಲಿ ಚಾರಣ ಮಾಡುತ್ತಿದ್ದ ವೇಳೆ ‘ಆಲ್ಟಿಟ್ಯೂಡ್ ಸಿಕ್ನೆಸ್’ನಿಂದ ಬಳಲುತ್ತಿದ್ದರು. ಇವರು ಕೂಡ ಹೋಟೆಲ್ ಕೊಠಡಿಯಲ್ಲಿ ಶನಿವಾರ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಅಪಾಯ ತಡೆ ಹಾಗೂ ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. </p>.<p>ಚಾರಣದ ಬಳಿಕ ಇದೇ ರೀತಿಯ ಅನಾರೋಗ್ಯದಿಂದ ಅಸ್ವಸ್ಥಗೊಂಡಿದ್ದ ವಿದೇಶಿ ಪ್ರಜೆಯನ್ನು ರಕ್ಷಿಸಲಾಗಿದೆ. </p>.<p>ನೇಪಾಳದ ಕಸ್ಕಿ, ಮುಸ್ತಾಂಗ್ ಸೇರಿದಂತೆ ಹಲವೆಡೆ ಚಾರಣ ಮಾಡಲು ವಿದೇಶಗಳಿಂದ ಹಲವಾರು ಪ್ರವಾಸಿಗರು ಬಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>