<p><strong>ಕಠ್ಮಂಡು(ನೇಪಾಳ):</strong> ಪ್ರಧಾನ ಮಂತ್ರಿ ಪುಷ್ಪ ಕಮಲ್ ದಹಲ್ ಪ್ರಚಂಡ ನೇತೃತ್ವದ ನೇಪಾಳದ ಮೈತ್ರಿಕೂಟದ ಸರ್ಕಾರ ಬೀಳುವುದು ಬಹುತೇಕ ಖಚಿತಗೊಂಡಿದೆ. ತಡರಾತ್ರಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಂತರ ಮಿತ್ರ ಪಕ್ಷ ಸಿಪಿಎನ್–ಯುಎಂಎಲ್ ಪಕ್ಷದ 8 ಸಚಿವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.</p> <p>ಸಿಪಿಎನ್-ಯುಎಂಎಲ್ (ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ- ಯುನಿಫೈಡ್ ಮಾರ್ಕ್ಸ್ವಾದಿ ಲೆನಿನಿಸ್ಟ್) ಮುಖ್ಯ ಸಚೇತಕ ಮಹೇಶ್ ಬರ್ತೌಲಾ ಅವರು, ದಹಲ್ ಕ್ಯಾಬಿನೆಟ್ನಲ್ಲಿರುವ ಎಲ್ಲ ಎಂಟು ಸಚಿವರು ಇಂದು ರಾಜೀನಾಮೆ ನೀಡಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.</p><p>'ನಮ್ಮ ಸಚಿವರು ಪ್ರಧಾನಮಂತ್ರಿಗಳಿಗೆ ಇಂದು ರಾಜೀನಾಮೆ ಸಲ್ಲಿಸಲಿದ್ದು, ಪರಿಸ್ಥಿತಿಯನ್ನು ಅಳೆದು ತೂಗಿ ಪ್ರಧಾನಿ ಕೂಡ ಶೀಘ್ರದಲ್ಲೇ ತಮ್ಮ ಸ್ಥಾನದಿಂದ ಕೆಳಗಿಳಿಯಬಹುದು. ಸಂಜೆಯ ವೇಳೆಗೆ ಹೊಸ ಸರ್ಕಾರ ರಚೆನೆಯನ್ನು ನಿರೀಕ್ಷಿಸಲಾಗಿದೆ’ಎಂದೂ ಮಹೇಶ್ ಬರ್ತೌಲಾ ದೂರವಾಣಿ ಮೂಲಕ ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ.</p><p>ಸಚಿವರ ರಾಜೀನಾಮೆ ನಿರ್ಧಾರದ ನಡುವೆಯೇ ಸಿಪಿಎನ್–ಯುಎಂಎಲ್ ಪಕ್ಷವು ಮಧ್ಯಾಹ್ನ 3 ಗಂಟೆಗೆ ಪಕ್ಷದ ಕಾರ್ಯದರ್ಶಿ ಗಳ ಸಭೆ ಕರೆದಿದೆ.</p><p>ಸರ್ಕಾರದ ಪತನದ ಸೂಚನೆ ಸಿಗುತ್ತಿದ್ದಂತೆ ಸಿಪಿಎನ್-ಮಾವೋವಾದಿ ಪಕ್ಷವು ಮುಂದಿನ ಮಾರ್ಗಸೂಚಿಯ ಬಗ್ಗೆ ನಿರ್ಧರಿಸಲು ಪದಾಧಿಕಾರಿಗಳ ಸಭೆ ನಡೆಸಲು ನಿರ್ಧರಿಸಿದೆ. ರಾಜೀನಾಮೆ ನೀಡಬೇಕೆ ಅಥವಾ ಸಂಸತ್ತಿನಲ್ಲಿ ವಿಶ್ವಾಸಮತವನ್ನು ಎದುರಿಸಬೇಕೆ ಎಂದು ಚರ್ಚಿಸಲು ಪ್ರಧಾನಿ ದಹಲ್ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಪಕ್ಷದ ನಾಯಕ ಗಣೇಶ್ ಶಾ ದೃಢಪಡಿಸಿದ್ದಾರೆ.</p><p>ಈ ಬೆಳವಣಿಗೆಗಳ ನಡುವೆ ರಾಷ್ಟ್ರೀಯ ಸ್ವತಂತ್ರ ಪಕ್ಷವು ಸಹ ಮುಂಬರುವ ಸನ್ನಿವೇಶಗಳನ್ನು ಹೇಗೆ ನಿರ್ವಹಿಸಬೇಕೆಂಬ ಬಗ್ಗೆ ಸಭೆ ನಡೆಸುತ್ತಿದೆ. ಬಹು ದೊಡ್ಡ ರಾಜಕೀಯ ಬದಲಾವಣೆ ಹಿನ್ನೆಲೆಯಲ್ಲಿ ನೇಪಾಳ ಕಾಂಗ್ರೆಸ್ ಸಹ ಪದಾಧಿಕಾರಿಗಳ ಸಭೆ ನಡೆಸುತ್ತಿದೆ.</p><p>ಮಾರ್ಚ್ 4ರಂದು ಅಧಿಕಾರಕ್ಕೆ ಬಂದ ನೇಪಾಳದ ಹೊಸ ಸರ್ಕಾರವು 100ಕ್ಕೂ ಕಡಿಮೆ ದಿನಗಳಲ್ಲಿ ಪತನದ ಹಾದಿಗೆ ಬಂದಿದೆ. </p><p>ಸಿಪಿಎನ್-ಯುಎಂಎಲ್ ಪಕ್ಷದ ಕೆ.ಪಿ. ಶರ್ಮಾ ಓಲಿ ಮತ್ತು ನೇಪಾಳ ಕಾಂಗ್ರೆಸ್ ಪಕ್ಷದ ಶೇರ್ ಬಹದ್ದೂರ್ ದೇವುಬಾ ನಡುವೆ ಮಧ್ಯರಾತ್ರಿ ಏರ್ಪಟ್ಟಿರುವ ಹೊಸ ಒಪ್ಪಂದದ ಹಿನ್ನೆಲೆಯಲ್ಲಿ ಸರ್ಕಾರ ಪತನದ ಹಾದಿ ಹಿಡಿದಿದೆ.</p><p>ಉಭಯ ಪಕ್ಷಗಳ ನಾಯಕರು ತಲಾ ಒಂದೂವರೆ ವರ್ಷ ಪ್ರಧಾನಿಯಾಗುವ ಬಗ್ಗೆ ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಬಂದಿದ್ದಾರೆ. ಒಪ್ಪಂದದ ಪ್ರಕಾರ, ಮೊದಲ ಒಂದೂವರೆ ವರ್ಷ ಕೆ.ಪಿ. ಶರ್ಮಾ ಓಲಿ ಪ್ರಧಾನಿಯಾಗಿ ಅಧಿಕಾರ ನಡೆಸಲಿದ್ದು, ನಂತರದ ಅವಧಿಯಲ್ಲಿ ಶೇರ್ ಬಹದ್ದೂರ್ಗೆ ಅಧಿಕಾರ ಬಿಟ್ಟುಕೊಡಬೇಕಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಠ್ಮಂಡು(ನೇಪಾಳ):</strong> ಪ್ರಧಾನ ಮಂತ್ರಿ ಪುಷ್ಪ ಕಮಲ್ ದಹಲ್ ಪ್ರಚಂಡ ನೇತೃತ್ವದ ನೇಪಾಳದ ಮೈತ್ರಿಕೂಟದ ಸರ್ಕಾರ ಬೀಳುವುದು ಬಹುತೇಕ ಖಚಿತಗೊಂಡಿದೆ. ತಡರಾತ್ರಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಂತರ ಮಿತ್ರ ಪಕ್ಷ ಸಿಪಿಎನ್–ಯುಎಂಎಲ್ ಪಕ್ಷದ 8 ಸಚಿವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.</p> <p>ಸಿಪಿಎನ್-ಯುಎಂಎಲ್ (ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ- ಯುನಿಫೈಡ್ ಮಾರ್ಕ್ಸ್ವಾದಿ ಲೆನಿನಿಸ್ಟ್) ಮುಖ್ಯ ಸಚೇತಕ ಮಹೇಶ್ ಬರ್ತೌಲಾ ಅವರು, ದಹಲ್ ಕ್ಯಾಬಿನೆಟ್ನಲ್ಲಿರುವ ಎಲ್ಲ ಎಂಟು ಸಚಿವರು ಇಂದು ರಾಜೀನಾಮೆ ನೀಡಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.</p><p>'ನಮ್ಮ ಸಚಿವರು ಪ್ರಧಾನಮಂತ್ರಿಗಳಿಗೆ ಇಂದು ರಾಜೀನಾಮೆ ಸಲ್ಲಿಸಲಿದ್ದು, ಪರಿಸ್ಥಿತಿಯನ್ನು ಅಳೆದು ತೂಗಿ ಪ್ರಧಾನಿ ಕೂಡ ಶೀಘ್ರದಲ್ಲೇ ತಮ್ಮ ಸ್ಥಾನದಿಂದ ಕೆಳಗಿಳಿಯಬಹುದು. ಸಂಜೆಯ ವೇಳೆಗೆ ಹೊಸ ಸರ್ಕಾರ ರಚೆನೆಯನ್ನು ನಿರೀಕ್ಷಿಸಲಾಗಿದೆ’ಎಂದೂ ಮಹೇಶ್ ಬರ್ತೌಲಾ ದೂರವಾಣಿ ಮೂಲಕ ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ.</p><p>ಸಚಿವರ ರಾಜೀನಾಮೆ ನಿರ್ಧಾರದ ನಡುವೆಯೇ ಸಿಪಿಎನ್–ಯುಎಂಎಲ್ ಪಕ್ಷವು ಮಧ್ಯಾಹ್ನ 3 ಗಂಟೆಗೆ ಪಕ್ಷದ ಕಾರ್ಯದರ್ಶಿ ಗಳ ಸಭೆ ಕರೆದಿದೆ.</p><p>ಸರ್ಕಾರದ ಪತನದ ಸೂಚನೆ ಸಿಗುತ್ತಿದ್ದಂತೆ ಸಿಪಿಎನ್-ಮಾವೋವಾದಿ ಪಕ್ಷವು ಮುಂದಿನ ಮಾರ್ಗಸೂಚಿಯ ಬಗ್ಗೆ ನಿರ್ಧರಿಸಲು ಪದಾಧಿಕಾರಿಗಳ ಸಭೆ ನಡೆಸಲು ನಿರ್ಧರಿಸಿದೆ. ರಾಜೀನಾಮೆ ನೀಡಬೇಕೆ ಅಥವಾ ಸಂಸತ್ತಿನಲ್ಲಿ ವಿಶ್ವಾಸಮತವನ್ನು ಎದುರಿಸಬೇಕೆ ಎಂದು ಚರ್ಚಿಸಲು ಪ್ರಧಾನಿ ದಹಲ್ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಪಕ್ಷದ ನಾಯಕ ಗಣೇಶ್ ಶಾ ದೃಢಪಡಿಸಿದ್ದಾರೆ.</p><p>ಈ ಬೆಳವಣಿಗೆಗಳ ನಡುವೆ ರಾಷ್ಟ್ರೀಯ ಸ್ವತಂತ್ರ ಪಕ್ಷವು ಸಹ ಮುಂಬರುವ ಸನ್ನಿವೇಶಗಳನ್ನು ಹೇಗೆ ನಿರ್ವಹಿಸಬೇಕೆಂಬ ಬಗ್ಗೆ ಸಭೆ ನಡೆಸುತ್ತಿದೆ. ಬಹು ದೊಡ್ಡ ರಾಜಕೀಯ ಬದಲಾವಣೆ ಹಿನ್ನೆಲೆಯಲ್ಲಿ ನೇಪಾಳ ಕಾಂಗ್ರೆಸ್ ಸಹ ಪದಾಧಿಕಾರಿಗಳ ಸಭೆ ನಡೆಸುತ್ತಿದೆ.</p><p>ಮಾರ್ಚ್ 4ರಂದು ಅಧಿಕಾರಕ್ಕೆ ಬಂದ ನೇಪಾಳದ ಹೊಸ ಸರ್ಕಾರವು 100ಕ್ಕೂ ಕಡಿಮೆ ದಿನಗಳಲ್ಲಿ ಪತನದ ಹಾದಿಗೆ ಬಂದಿದೆ. </p><p>ಸಿಪಿಎನ್-ಯುಎಂಎಲ್ ಪಕ್ಷದ ಕೆ.ಪಿ. ಶರ್ಮಾ ಓಲಿ ಮತ್ತು ನೇಪಾಳ ಕಾಂಗ್ರೆಸ್ ಪಕ್ಷದ ಶೇರ್ ಬಹದ್ದೂರ್ ದೇವುಬಾ ನಡುವೆ ಮಧ್ಯರಾತ್ರಿ ಏರ್ಪಟ್ಟಿರುವ ಹೊಸ ಒಪ್ಪಂದದ ಹಿನ್ನೆಲೆಯಲ್ಲಿ ಸರ್ಕಾರ ಪತನದ ಹಾದಿ ಹಿಡಿದಿದೆ.</p><p>ಉಭಯ ಪಕ್ಷಗಳ ನಾಯಕರು ತಲಾ ಒಂದೂವರೆ ವರ್ಷ ಪ್ರಧಾನಿಯಾಗುವ ಬಗ್ಗೆ ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಬಂದಿದ್ದಾರೆ. ಒಪ್ಪಂದದ ಪ್ರಕಾರ, ಮೊದಲ ಒಂದೂವರೆ ವರ್ಷ ಕೆ.ಪಿ. ಶರ್ಮಾ ಓಲಿ ಪ್ರಧಾನಿಯಾಗಿ ಅಧಿಕಾರ ನಡೆಸಲಿದ್ದು, ನಂತರದ ಅವಧಿಯಲ್ಲಿ ಶೇರ್ ಬಹದ್ದೂರ್ಗೆ ಅಧಿಕಾರ ಬಿಟ್ಟುಕೊಡಬೇಕಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>