<p><strong>ಕಠ್ಮಂಡು</strong>: ಲಿಪುಲೇಖ್ ಪಾಸ್ ಗಡಿಭಾಗದ ಮೂಲಕ ವ್ಯಾಪಾರವನ್ನು ಪುನರಾರಂಭಿಸಲು ಭಾರತ ಹಾಗೂ ಚೀನಾ ಇತ್ತೀಚೆಗೆ ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಪಡಿಸಬೇಕು ಎಂದು ನೇಪಾಳದ ಆಡಳಿತಾರೂಢ ಪಕ್ಷವಾದ ಸಿಪಿಎನ್–ಯುಎಂಎಲ್ ಒತ್ತಾಯಿಸಿದೆ. </p>.<p>ಉನ್ನತ ಮಟ್ಟದ ರಾಜತಾಂತ್ರಿಕ ಕ್ರಮಗಳ ಮೂಲಕ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವಂತೆ ಸರ್ಕಾರವನ್ನು ಒತ್ತಾಯಿಸಿದೆ. ಅಲ್ಲದೆ, ಕಾಲಾಪಾನಿ, ಲಿಂಪಿಯಾಧುರಾ ಮತ್ತು ಲಿಪುಲೇಖ್ ಸೇರಿದಂತೆ ಕಾಳಿ ನದಿಯ ಪೂರ್ವ ಪ್ರದೇಶಗಳ ಮೇಲಿನ ತನ್ನ ಹಕ್ಕುಗಳನ್ನು ಪುನರುಚ್ಚರಿಸಿದೆ ಎಂದು ಪಕ್ಷದ ಮೂಲಗಳು ಹೇಳಿವೆ.</p>.<p class="title">ಲಲಿತ್ಪುರದ ಗೋದಾವರಿ ಪುರಸಭೆಯಲ್ಲಿ ಸೆ.5ರಿಂದ 7ರವರೆಗೆ ಪ್ರಧಾನಿ ಕೆ.ಪಿ. ಶರ್ಮಾ ಒಲಿ ನೇತೃತ್ವದಲ್ಲಿ ನಡೆದ ಸಿಪಿಎನ್–ಯುಎಂಎಲ್ನ ಎರಡನೇ ರಾಷ್ಟ್ರೀಯ ಸಮಾವೇಶದಲ್ಲಿ ಅಂಗೀಕರಿಸಿದ 28 ಅಂಶಗಳ ಪ್ರಸ್ತಾವದಲ್ಲಿ ಇದು ಸೇರಿದೆ.</p>.<p class="title">ಚೀನಾಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಪ್ರಧಾನಿ ಒಲಿ ಅವರು ಲಿಪುಲೇಖ್ ವ್ಯಾಪಾರ ಒಪ್ಪಂದದ ಬಗ್ಗೆ ತಮ್ಮ ಭಿನ್ನಾಭಿಪ್ರಾಯವನ್ನು ದಾಖಲಿಸಿದ್ದರು.</p>.<p class="title">‘ಲಿಪುಲೇಖ್ ತನ್ನ ಸ್ವಂತ ಪ್ರದೇಶ’ ಎಂದು ನೇಪಾಳ ಹೇಳಿಕೊಂಡಿದ್ದು, ಅದನ್ನು ಭಾರತ ಸ್ಪಷ್ಟವಾಗಿ ತಿರಸ್ಕರಿಸಿದೆ. ‘ಇದು ಸತ್ಯವನ್ನು ಆಧರಿಸಿಲ್ಲ ಹಾಗೂ ಐತಿಹಾಸಿಕ ಪುರಾವೆಗಳನ್ನು ಹೊಂದಿಲ್ಲ’ ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಠ್ಮಂಡು</strong>: ಲಿಪುಲೇಖ್ ಪಾಸ್ ಗಡಿಭಾಗದ ಮೂಲಕ ವ್ಯಾಪಾರವನ್ನು ಪುನರಾರಂಭಿಸಲು ಭಾರತ ಹಾಗೂ ಚೀನಾ ಇತ್ತೀಚೆಗೆ ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಪಡಿಸಬೇಕು ಎಂದು ನೇಪಾಳದ ಆಡಳಿತಾರೂಢ ಪಕ್ಷವಾದ ಸಿಪಿಎನ್–ಯುಎಂಎಲ್ ಒತ್ತಾಯಿಸಿದೆ. </p>.<p>ಉನ್ನತ ಮಟ್ಟದ ರಾಜತಾಂತ್ರಿಕ ಕ್ರಮಗಳ ಮೂಲಕ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವಂತೆ ಸರ್ಕಾರವನ್ನು ಒತ್ತಾಯಿಸಿದೆ. ಅಲ್ಲದೆ, ಕಾಲಾಪಾನಿ, ಲಿಂಪಿಯಾಧುರಾ ಮತ್ತು ಲಿಪುಲೇಖ್ ಸೇರಿದಂತೆ ಕಾಳಿ ನದಿಯ ಪೂರ್ವ ಪ್ರದೇಶಗಳ ಮೇಲಿನ ತನ್ನ ಹಕ್ಕುಗಳನ್ನು ಪುನರುಚ್ಚರಿಸಿದೆ ಎಂದು ಪಕ್ಷದ ಮೂಲಗಳು ಹೇಳಿವೆ.</p>.<p class="title">ಲಲಿತ್ಪುರದ ಗೋದಾವರಿ ಪುರಸಭೆಯಲ್ಲಿ ಸೆ.5ರಿಂದ 7ರವರೆಗೆ ಪ್ರಧಾನಿ ಕೆ.ಪಿ. ಶರ್ಮಾ ಒಲಿ ನೇತೃತ್ವದಲ್ಲಿ ನಡೆದ ಸಿಪಿಎನ್–ಯುಎಂಎಲ್ನ ಎರಡನೇ ರಾಷ್ಟ್ರೀಯ ಸಮಾವೇಶದಲ್ಲಿ ಅಂಗೀಕರಿಸಿದ 28 ಅಂಶಗಳ ಪ್ರಸ್ತಾವದಲ್ಲಿ ಇದು ಸೇರಿದೆ.</p>.<p class="title">ಚೀನಾಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಪ್ರಧಾನಿ ಒಲಿ ಅವರು ಲಿಪುಲೇಖ್ ವ್ಯಾಪಾರ ಒಪ್ಪಂದದ ಬಗ್ಗೆ ತಮ್ಮ ಭಿನ್ನಾಭಿಪ್ರಾಯವನ್ನು ದಾಖಲಿಸಿದ್ದರು.</p>.<p class="title">‘ಲಿಪುಲೇಖ್ ತನ್ನ ಸ್ವಂತ ಪ್ರದೇಶ’ ಎಂದು ನೇಪಾಳ ಹೇಳಿಕೊಂಡಿದ್ದು, ಅದನ್ನು ಭಾರತ ಸ್ಪಷ್ಟವಾಗಿ ತಿರಸ್ಕರಿಸಿದೆ. ‘ಇದು ಸತ್ಯವನ್ನು ಆಧರಿಸಿಲ್ಲ ಹಾಗೂ ಐತಿಹಾಸಿಕ ಪುರಾವೆಗಳನ್ನು ಹೊಂದಿಲ್ಲ’ ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>