ಇಸ್ಲಾಮಾಬಾದ್:ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಪರ ಭಾರತದ ವಕೀಲರೊಬ್ಬರಿಗೆ ವಾದ ಮಂಡನೆಗೆ ಅನುಮತಿ ನೀಡಲು ಸಾಧ್ಯ ಇಲ್ಲ ಎಂದು ಪಾಕಿಸ್ತಾನ ಗುರುವಾರ ಹೇಳಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಜಹೀದ್ ಹಫೀಜ್ ಚೌಧರಿ, ಈ ಸಂಬಂಧ ಭಾರತ ಮುಂದಿಟ್ಟಿರುವ ಬೇಡಿಕೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಭಾರತದ ವಕೀಲರು ಜಾಧವ್ ಪರ ವಕಾಲತ್ತು ವಹಿಸಲು ಅನುಮತಿ ನೀಡಬೇಕು ಎಂಬ ಆ ದೇಶದ ಬೇಡಿಕೆಯನ್ನೇ ಒಪ್ಪಲಾಗದು. ಈ ದೇಶದಲ್ಲಿ ವಕೀಲ ವೃತ್ತಿ ಕೈಗೊಳ್ಳಲು ಪರವಾನಗಿ ಹೊಂದಿರುವವರಿಗೆ ಮಾತ್ರ ಇಂಥ ಅವಕಾಶ ನೀಡಲಾಗುತ್ತದೆ’ ಎಂದರು.
ಈ ಸಂಬಂಧದ ಅರ್ಜಿಯ ವಿಚಾರಣೆಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಸೆ.3ರಂದು ನಡೆಸಲಿದೆ.