ರೋಮ್ ಮೂಲದ ಸಂಸ್ಥೆಯು 79,000 ಜನರು ಆಹಾರದ ಅಭದ್ರತೆ ಮತ್ತು ತೀವ್ರ ಹಸಿವಿನ ಸ್ಥಿತಿ ಎದುರಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ಪೈಕಿ ಪಿಬೋರ್ ಪ್ರದೇಶದಲ್ಲಿ 11,000, ಬಹರ್ ಎಲ್ ಗಜಲ್ ರಾಜ್ಯದ ಅವೇಲ್ ಈಸ್ಟ್ ಕೌಂಟಿಯಲ್ಲಿ 40,000 ಮತ್ತು ಸುಡಾನ್ನಲ್ಲಿ ವರ್ಷವಿಡೀ ನಡೆದ ಸಂಘರ್ಷದಿಂದ ಪಲಾಯನ ಮಾಡಿ, ದೇಶದಾದ್ಯಂತ ನೆಲೆಸಿರುವ 28,000 ದಕ್ಷಿಣ ಸುಡಾನ್ ಜನರು ಸೇರಿದ್ದಾರೆ ಎಂದು ವರದಿ ತಿಳಿಸಿದೆ.