ಪಾಕಿಸ್ತಾನ್–ಎ–ಇಸ್ಸಾಫ್ (ಪಿಟಿಐ) ಪಕ್ಷದ ಸಂಸ್ಥಾಪಕರೂ ಆದ ಇಮ್ರಾನ್ ಖಾನ್ ಅವರ ಬಂಬಲಿಗರು ಸಾರ್ವಜನಿಕ ಸ್ವತ್ತುಗಳಿಗೆ ಹಾನಿ ಮಾಡಿದ್ದರು. ಜೊತೆಗೆ, ಸ್ಥಳದಲ್ಲಿ ಜಮಾವಣೆಗೊಂಡಿದ್ದ ಸೇನಾ ತುಕಡಿಗಳಿಗೂ ತೊಂದರೆ ಉಂಟುಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಶೆಹಜಾದ್ ಟೌನ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿದ್ದವು. ಈ ದೂರುಗಳನ್ನು ಪ್ರಶ್ನಿಸಿ ಇಮ್ರಾನ್ ಅವರು ಅರ್ಜಿ ಸಲ್ಲಿಸಿದ್ದರು.