ವಿದೇಶಿ ಪ್ರಜೆಗಳು ಹಾಗೂ ಸಂಸ್ಥೆಗಳಿಂದ ಪಿಟಿಐ ಪಕ್ಷ ಕೋಟ್ಯಂತರ ರೂಪಾಯಿ ದೇಣಿಗೆ ಪಡೆದಿದೆ. 2009–10ರಿಂದ 2012–13ನೇ ಸಾಲಿನ ವರೆಗಿನ ದೇಣಿಗೆ ವಿವರಗಳನ್ನು ಮುಚ್ಚಿಟ್ಟಿದೆ ಎಂದು ಚುನಾವಣಾ ಆಯೋಗ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ನವಾಜ್ ಶರೀಫ್ ಅವರು ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.