ಈ ಹೇಳಿಕೆ ಕಾರಣಕ್ಕಾಗಿ ಅಲ್ಲಿಯ ಪ್ರಮುಖ ವಿರೋಧ ಪಕ್ಷವಾದ ಸಿಪಿಎನ್– ಯುಎಂಲ್ ಸಂಸತ್ ಕಲಾಪಕ್ಕೆ ಬುಧವಾರ ಅಡ್ಡಿಪಡಿಸಿದೆ. ಪ್ರಚಂಡ ಅವರ ಹೇಳಿಕೆಯು ದೇಶದ ಸ್ವಾತಂತ್ರ್ಯ, ಘನತೆ, ಸಂವಿಧಾನ ಮತ್ತು ಸಂಸತ್ತಿಗೆ ಅಪಮಾನ ಮಾಡಿದಂತಿದೆ. ದೆಹಲಿಯಿಂದ ನೇಮಕವಾಗಿರುವ ಪ್ರಧಾನಿಯು ಈ ದೇಶಕ್ಕೆ ಅಗತ್ಯವಿಲ್ಲ. ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.