ಮುಸ್ಲಿಂ ವಿರೋಧಿ ಗಲಭೆ ಮೂರು ಜಿಲ್ಲೆಗಳಲ್ಲಿ ವ್ಯಾಪಿಸುತ್ತಿದ್ದಂತೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಭಾನುವಾರ ರಾತ್ರಿಯಿಂದ ಪುಟ್ಟಲಾಂ ಜಿಲ್ಲೆಯಲ್ಲಿ ಗಲಭೆ ಶುರುವಾಗಿದ್ದು, ಮರಗೆಲಸದ ಅಂಗಡಿಗೆ ನುಗ್ಗಿರುವ ಗುಂಪು ಚೂಪಾದ ಆಯುಧಗಳಿಂದ 45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದೆ. ಆಸ್ಪತ್ರೆಗೆ ದಾಖಲಿಸಿದರೂ ಆತ ಬದುಕುಳಿಯಲಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.