ಜಕಾರ್ತಾ: ‘ಇಂಡೊನೇಷ್ಯಾದ ಸುಲಾವೆಸಿ ದ್ವೀಪದಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿಯಿಂದ ಸಂಕಷ್ಟಕ್ಕೆ ಒಳಗಾದ 1.91ಲಕ್ಷ ಮಂದಿಗೆ ಮಾನವೀಯ ನೆರವಿನ ತುರ್ತು ಅಗತ್ಯವಿದೆ’ ಎಂದು ವಿಶ್ವಸಂಸ್ಥೆ ನಡೆಸಿದ ಅಧ್ಯಯನ ವರದಿಯಲ್ಲಿ ತಿಳಿಸಿದೆ.
ಸುನಾಮಿಯಿಂದ 46 ಸಾವಿರ ಮಕ್ಕಳು ಹಾಗೂ 14 ಸಾವಿರ ಹಿರಿಯರು ಸಂಕಷ್ಟದಲ್ಲಿದ್ದು, ನಗರ ಪ್ರದೇಶದಿಂದ ಹೊರಗಿದ್ದಾರೆ ಎಂದು ವಿಶ್ವಸಂಸ್ಥೆ ಮಾನವಿಯ ನೆರವು ವಿಭಾಗದ ಕಚೇರಿ ತಿಳಿಸಿದೆ.