<p><strong>ವಿಶ್ವಸಂಸ್ಥೆ:</strong> ದೀಪಾವಳಿ ಹಬ್ಬದ ಅಂಗವಾಗಿ ವಿಶ್ವಸಂಸ್ಥೆಯ ಅಂಚೆ ವಿಭಾಗ ಅಂಚೆ ಚೀಟಿ ಬಿಡುಗಡೆ ಮಾಡಿದೆ.</p>.<p>ವಿಶ್ವಸಂಸ್ಥೆಯ ಈ ನಿರ್ಧಾರಕ್ಕೆ ಭಾರತ ಧನ್ಯವಾದ ಸಲ್ಲಿಸಿದೆ.</p>.<p>‘ದುಷ್ಟಶಕ್ತಿಗಳ ವಿರುದ್ಧ ಸಂಘರ್ಷ ಪ್ರತಿನಿತ್ಯ ನಡೆಯುತ್ತಲೇ ಇರುತ್ತದೆ. ದುಷ್ಟಶಕ್ತಿಗಳನ್ನು ದಮನ ಮಾಡುವ ಹೋರಾಟದಲ್ಲಿ ಜಯ ಸಾಧಿಸುವ ಸಂಕೇತವಾಗಿ ಅಂಚೆ ಚೀಟಿ ಬಿಡುಗಡೆ ಮಾಡಿರುವುದಕ್ಕೆ ಧನ್ಯವಾದಗಳು’ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ರಾಯಭಾರಿ ಸೈಯದ್ ಅಕ್ಬರುದ್ದೀನ್ ಟ್ವೀಟ್ ಮಾಡಿದ್ದಾರೆ.</p>.<p>ವಿಶ್ವಸಂಸ್ಥೆ ಪ್ರಧಾನ ಕಚೇರಿ ಕಟ್ಟಡದ ಚಿತ್ರದ ಜತೆಗೆ ದೀಪ ಬೆಳಗುತ್ತಿರುವ ಚಿತ್ರವನ್ನು ಈ ಅಂಚೆ ಚೀಟಿ ಒಳಗೊಂಡಿದ್ದು, ಶುಭಾಶಯ ಕೋರಲಾಗಿದೆ.</p>.<p><strong>ಲಂಡನ್ನಲ್ಲಿ ಕಾಳಿ ಪೂಜೆ:</strong>ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಲಂಡನ್ ಉಪನಗರ ಕ್ರೊಯ್ಡಾನ್ನಲ್ಲಿ ಬುಧವಾರ ಕಾಳಿ ಪೂಜೆ ಮಾಡಲಾಯಿತು.</p>.<p>‘ಕ್ರೊಯ್ಡಾನ್ ಬೆಂಗಾಲಿ ಕನೆಕ್ಷನ್’ (ಸಿಬಿಸಿ) ಎನ್ನುವ ಸಂಘಟನೆ ಈ ಕಾರ್ಯಕ್ರಮ ಆಯೋಜಿಸಿತ್ತು.</p>.<p>ಕಾಳಿ ಪೂಜೆ ನಡೆಸಲು ರಾಣಿ ಎಲಿಜಬೆತ್– 2 ಒಪ್ಪಿಗೆ ನೀಡಿದ್ದರು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಭಾಶಯ ಕೋರಿದ್ದರು.</p>.<p><strong>ಇಮ್ರಾನ್, ಮೈಕ್ ಪಾಂಪಿಯೊ ಶುಭಾಶಯ:</strong>ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.</p>.<p>‘ಕತ್ತಲು ಕಳೆದು ಬೆಳಕು ಮೂಡಿಸುವ ಸಂಕೇತದ ಹಬ್ಬ ಇದಾಗಿದೆ. ಈ ದೀಪಾವಳಿ ಪ್ರತಿಯೊಬ್ಬರಿಗೂ ಸುಖ ಮತ್ತು ಸಂತೋಷ ನೀಡಲಿ.ಪ್ರತಿಫಲದ ನಿರೀಕ್ಷೆಯಿಲ್ಲದೇ ನಿಸ್ವಾರ್ಥ ಸೇವೆ ಸಲ್ಲಿಸಲು ಇದು ಸುಸಂದರ್ಭ’ ಎಂದು ಅವರು ತಿಳಿಸಿದ್ದಾರೆ.</p>.<p>ಕೆಡುಕಿನ ಮುಂದೆ ಒಳಿತಿಗೆ ಎಂದಿಗೂ ಜಯ ಸಿಗುತ್ತದೆ. ಹಾಗೆಯೇ ಕರುಣೆ ದ್ವೇಷವನ್ನು ಮರೆಸುತ್ತದೆ ಎಂದು ಹೇಳಿದ್ದಾರೆ.</p>.<p>ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಸಹ ದೀಪಾವಳಿ ಶುಭಾಶಯ ಕೋರಿದ್ದಾರೆ.</p>.<p>‘ಎಲ್ಲ ಹಿಂದೂ ನಾಗರಿಕರಿಗೂ ದೀಪಾವಳಿ ಹಬ್ಬದ ಶುಭಾಶಯಗಳು’ ಎಂದು ಇಮ್ರಾನ್ ಟ್ವೀಟ್ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವಸಂಸ್ಥೆ:</strong> ದೀಪಾವಳಿ ಹಬ್ಬದ ಅಂಗವಾಗಿ ವಿಶ್ವಸಂಸ್ಥೆಯ ಅಂಚೆ ವಿಭಾಗ ಅಂಚೆ ಚೀಟಿ ಬಿಡುಗಡೆ ಮಾಡಿದೆ.</p>.<p>ವಿಶ್ವಸಂಸ್ಥೆಯ ಈ ನಿರ್ಧಾರಕ್ಕೆ ಭಾರತ ಧನ್ಯವಾದ ಸಲ್ಲಿಸಿದೆ.</p>.<p>‘ದುಷ್ಟಶಕ್ತಿಗಳ ವಿರುದ್ಧ ಸಂಘರ್ಷ ಪ್ರತಿನಿತ್ಯ ನಡೆಯುತ್ತಲೇ ಇರುತ್ತದೆ. ದುಷ್ಟಶಕ್ತಿಗಳನ್ನು ದಮನ ಮಾಡುವ ಹೋರಾಟದಲ್ಲಿ ಜಯ ಸಾಧಿಸುವ ಸಂಕೇತವಾಗಿ ಅಂಚೆ ಚೀಟಿ ಬಿಡುಗಡೆ ಮಾಡಿರುವುದಕ್ಕೆ ಧನ್ಯವಾದಗಳು’ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ರಾಯಭಾರಿ ಸೈಯದ್ ಅಕ್ಬರುದ್ದೀನ್ ಟ್ವೀಟ್ ಮಾಡಿದ್ದಾರೆ.</p>.<p>ವಿಶ್ವಸಂಸ್ಥೆ ಪ್ರಧಾನ ಕಚೇರಿ ಕಟ್ಟಡದ ಚಿತ್ರದ ಜತೆಗೆ ದೀಪ ಬೆಳಗುತ್ತಿರುವ ಚಿತ್ರವನ್ನು ಈ ಅಂಚೆ ಚೀಟಿ ಒಳಗೊಂಡಿದ್ದು, ಶುಭಾಶಯ ಕೋರಲಾಗಿದೆ.</p>.<p><strong>ಲಂಡನ್ನಲ್ಲಿ ಕಾಳಿ ಪೂಜೆ:</strong>ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಲಂಡನ್ ಉಪನಗರ ಕ್ರೊಯ್ಡಾನ್ನಲ್ಲಿ ಬುಧವಾರ ಕಾಳಿ ಪೂಜೆ ಮಾಡಲಾಯಿತು.</p>.<p>‘ಕ್ರೊಯ್ಡಾನ್ ಬೆಂಗಾಲಿ ಕನೆಕ್ಷನ್’ (ಸಿಬಿಸಿ) ಎನ್ನುವ ಸಂಘಟನೆ ಈ ಕಾರ್ಯಕ್ರಮ ಆಯೋಜಿಸಿತ್ತು.</p>.<p>ಕಾಳಿ ಪೂಜೆ ನಡೆಸಲು ರಾಣಿ ಎಲಿಜಬೆತ್– 2 ಒಪ್ಪಿಗೆ ನೀಡಿದ್ದರು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಭಾಶಯ ಕೋರಿದ್ದರು.</p>.<p><strong>ಇಮ್ರಾನ್, ಮೈಕ್ ಪಾಂಪಿಯೊ ಶುಭಾಶಯ:</strong>ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.</p>.<p>‘ಕತ್ತಲು ಕಳೆದು ಬೆಳಕು ಮೂಡಿಸುವ ಸಂಕೇತದ ಹಬ್ಬ ಇದಾಗಿದೆ. ಈ ದೀಪಾವಳಿ ಪ್ರತಿಯೊಬ್ಬರಿಗೂ ಸುಖ ಮತ್ತು ಸಂತೋಷ ನೀಡಲಿ.ಪ್ರತಿಫಲದ ನಿರೀಕ್ಷೆಯಿಲ್ಲದೇ ನಿಸ್ವಾರ್ಥ ಸೇವೆ ಸಲ್ಲಿಸಲು ಇದು ಸುಸಂದರ್ಭ’ ಎಂದು ಅವರು ತಿಳಿಸಿದ್ದಾರೆ.</p>.<p>ಕೆಡುಕಿನ ಮುಂದೆ ಒಳಿತಿಗೆ ಎಂದಿಗೂ ಜಯ ಸಿಗುತ್ತದೆ. ಹಾಗೆಯೇ ಕರುಣೆ ದ್ವೇಷವನ್ನು ಮರೆಸುತ್ತದೆ ಎಂದು ಹೇಳಿದ್ದಾರೆ.</p>.<p>ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಸಹ ದೀಪಾವಳಿ ಶುಭಾಶಯ ಕೋರಿದ್ದಾರೆ.</p>.<p>‘ಎಲ್ಲ ಹಿಂದೂ ನಾಗರಿಕರಿಗೂ ದೀಪಾವಳಿ ಹಬ್ಬದ ಶುಭಾಶಯಗಳು’ ಎಂದು ಇಮ್ರಾನ್ ಟ್ವೀಟ್ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>