<p><strong>ವಿಶ್ವಸಂಸ್ಥೆ :</strong> ಅಗ್ನಿ ಆಕಸ್ಮಿಕದಿಂದ ಹಾನಿಗೊಳಗಾಗಿರುವ ಇತಿಹಾಸ ಪ್ರಸಿದ್ಧ ನಾಟ್ರೆ ಡೇಮ್ ಚರ್ಚ್ನ ಪುನರ್ ನಿರ್ಮಾಣಕ್ಕೆ ತಜ್ಞರ ನೆರವು ಒದಗಿಸುತ್ತಿರುವುದಾಗಿ ಯುನೆಸ್ಕೊ ವಿಶ್ವ ಪಾರಂಪರಿಕ ಕೇಂದ್ರದ ನಿರ್ದೇಶಕಿ ಮೆಕ್ಟಿಲ್ಡ್ ರಾಸ್ಲರ್ ತಿಳಿಸಿದ್ದಾರೆ.</p>.<p>ಯುನೆಸ್ಕೊದ ತಜ್ಞರು ಈಗಾಗಲೇ ಸ್ಥಳದಲ್ಲಿದ್ದು, ಕಟ್ಟಡಕ್ಕೆ ಆಗಿರುವ ಹಾನಿ ಕುರಿತುಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.</p>.<p><strong>ಇದನ್ನೂ ಓದಿ:<a href="https://www.prajavani.net/notre-dame-cathedral-paris-629258.html" target="_blank">ನಾಟ್ರೆ ಡೇಮ್ ಕ್ಯಾಥೊಲಿಕ್ ಚರ್ಚ್ನಲ್ಲಿ ಬೆಂಕಿ ಅನಾಹುತ</a></strong></p>.<p>‘ಫ್ರಾನ್ಸ್ನ ಕೇಂದ್ರ ಬಿಂದು ಹಾಗೂ ಜಾಗತಿಕ ಸಂಕೇತವಾಗಿರುವಈ ಚರ್ಚ್ ಹಾನಿಗೀಡಾಗಿರುವುದು ವಿಶ್ವದೆಲ್ಲೆಡೆ ಜನರಿಗೆ ಆಘಾತ ತಂದಿದೆ. ಇದು ಕೇವಲ ಕ್ರೈಸ್ತ ಸಮುದಾಯಕ್ಕೆ ಸೇರಿದ್ದಲ್ಲ. ಇದು ನಮ್ಮೆಲ್ಲರದ್ದು’ ಎಂದು ಅವರು ತಿಳಿಸಿದ್ದಾರೆ.</p>.<p>ಚರ್ಚ್ ಮೇಲ್ಭಾಗದಲ್ಲಿಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದು, ಆಧಾರಕಂಬಗಳನ್ನು ಅಳವಡಿಸುವಲ್ಲಿ ನಿರತರಾಗಿದ್ದಾರೆ. ಬೃಹತ್ ಕ್ರೇನ್ಗಳ ಮೂಲಕ ಮರದ ಹಲಗೆಗಳನ್ನು ಸ್ಥಳಕ್ಕೆ ಸಾಗಿಸಲಾಗಿದೆ.</p>.<p class="Subhead"><strong>ಪತ್ತೆಯಾಗದ ಕಾರಣ:</strong>ಚರ್ಚ್ನ ಒಳಭಾಗ ಇನ್ನೂ ಅಪಾಯದಿಂದ ಮುಕ್ತವಾಗದ ಕಾರಣ, ತನಿಖಾಧಿಕಾರಿಗಳು ಒಳಪ್ರವೇಶಿಸಲು ಸಾಧ್ಯವಾಗಿಲ್ಲ. ಆದ್ದರಿಂದಅಗ್ನಿ ಆಕಸ್ಮಿಕಕ್ಕೆ ಕಾರಣ ಏನು ಎಂದು ಇನ್ನೂ ಪತ್ತೆಯಾಗಿಲ್ಲ. ಎಂದು ಪ್ಯಾರಿಸ್ನ ಕಾನೂನು ಇಲಾಖೆ ತಿಳಿಸಿದೆ.</p>.<p class="Subhead"><strong>ಇದನ್ನೂ ಓದಿ:<a href="https://www.prajavani.net/notre-dame-hunt-%E2%80%98dad-and-629560.html" target="_blank">ನಾಟ್ರೆ ಡೇಮ್ ಚರ್ಚ್ಗೆ ಬೆಂಕಿ ಬೀಳುವ ಒಂದು ತಾಸು ಮೊದಲು ತೆಗೆದ ಫೋಟೊ ವೈರಲ್</a></strong></p>.<p>ನವೀಕರಣ ಕಾರ್ಯದಲ್ಲಿ ನಿರತವಾಗಿರುವ ಕಂಪನಿಯ ಸಿಬ್ಬಂದಿ ಸೇರಿದಂತೆ 30 ಸಾಕ್ಷ್ಯಗಳ ಜತೆಗೆ ತನಿಖಾಧಿಕಾರಿಗಳು ಮಾತುಕತೆ ನಡೆಸಿದ್ದಾರೆ.</p>.<p><strong>‘ಪುನರ್ನಿರ್ಮಾಣಕ್ಕೆ ಅಂತರರಾಷ್ಟ್ರೀಯ ಸ್ಪರ್ಧೆ’</strong></p>.<p>ಅಗ್ನಿ ಆಕಸ್ಮಿಕದಲ್ಲಿ ನಾಶವಾದಚರ್ಚ್ನ ಪಿರಮಿಡ್ ಆಕೃತಿಯ ಗೋಪುರ ಪುನರ್ನಿರ್ಮಾಣಕ್ಕೆ ವಿನ್ಯಾಸ ರೂಪಿಸಲು ವಿಶ್ವದೆಲ್ಲೆಡೆಯಿಂದ ವಾಸ್ತುಶಿಲ್ಪಿಗಳನ್ನು ಸ್ಪರ್ಧೆಗೆ ಆಹ್ವಾನಿಸಲಾಗುತ್ತಿದೆ.</p>.<p>‘ಈ ಕಾಲದ ಸವಾಲುಗಳನ್ನು ಎದುರಿಸಲು ಸಮರ್ಥವಾದ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಹೊಸ ಗೋಪುರ ನಿರ್ಮಿಸುವುದು ಈ ಸ್ಪರ್ಧೆಯ ಉದ್ದೇಶ’ ಎಂದು ಪ್ರಧಾನಿ ಎಡ್ವರ್ಡ್ ಫಿಲಿಪ್ ತಿಳಿಸಿದ್ದಾರೆ. ಪುನರ್ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿ ಚರ್ಚೆ ನಡೆಸಲು ಅಧ್ಯಕ್ಷ ಎಮ್ಯಾನುವಲ್ ಮ್ಯಾಕ್ರೊನ್ ಕರೆದಿದ್ದ ವಿಶೇಷ ಸಂಪುಟ ಸಭೆ ಬಳಿಕ ಅವರು ಈ ಮಾಹಿತಿ ನೀಡಿದ್ದಾರೆ.</p>.<p><strong>‘ಆರು ವರ್ಷ ಬಂದ್’:</strong> ‘ಅಗ್ನಿ ಅವಘಡದಿಂದ ಚರ್ಚ್ನ ಭಾಗ ದುರ್ಬಲವಾಗಿದೆ. ಆದ್ದರಿಂದ ಆರು ವರ್ಷ ಚರ್ಚ್ ಮುಚ್ಚಲಾಗುವುದು’ ಎಂದು ಬಿಷಪ್ ಪ್ಯಾಟ್ರಿಕ್ ಚುವೆಟ್ ತಿಳಿಸಿದ್ದಾರೆ. </p>.<p><strong>ಧನ್ಯವಾದ ಅರ್ಪಣೆ:</strong> ತಮ್ಮ ಜೀವವನ್ನು ಅಪಾಯಕ್ಕೊಡ್ಡಿ ರಕ್ಷಣಾ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿಗೆ ಇಡೀ ಚರ್ಚ್ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಪೋಪ್ ಫ್ರಾನ್ಸಿಸ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವಸಂಸ್ಥೆ :</strong> ಅಗ್ನಿ ಆಕಸ್ಮಿಕದಿಂದ ಹಾನಿಗೊಳಗಾಗಿರುವ ಇತಿಹಾಸ ಪ್ರಸಿದ್ಧ ನಾಟ್ರೆ ಡೇಮ್ ಚರ್ಚ್ನ ಪುನರ್ ನಿರ್ಮಾಣಕ್ಕೆ ತಜ್ಞರ ನೆರವು ಒದಗಿಸುತ್ತಿರುವುದಾಗಿ ಯುನೆಸ್ಕೊ ವಿಶ್ವ ಪಾರಂಪರಿಕ ಕೇಂದ್ರದ ನಿರ್ದೇಶಕಿ ಮೆಕ್ಟಿಲ್ಡ್ ರಾಸ್ಲರ್ ತಿಳಿಸಿದ್ದಾರೆ.</p>.<p>ಯುನೆಸ್ಕೊದ ತಜ್ಞರು ಈಗಾಗಲೇ ಸ್ಥಳದಲ್ಲಿದ್ದು, ಕಟ್ಟಡಕ್ಕೆ ಆಗಿರುವ ಹಾನಿ ಕುರಿತುಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.</p>.<p><strong>ಇದನ್ನೂ ಓದಿ:<a href="https://www.prajavani.net/notre-dame-cathedral-paris-629258.html" target="_blank">ನಾಟ್ರೆ ಡೇಮ್ ಕ್ಯಾಥೊಲಿಕ್ ಚರ್ಚ್ನಲ್ಲಿ ಬೆಂಕಿ ಅನಾಹುತ</a></strong></p>.<p>‘ಫ್ರಾನ್ಸ್ನ ಕೇಂದ್ರ ಬಿಂದು ಹಾಗೂ ಜಾಗತಿಕ ಸಂಕೇತವಾಗಿರುವಈ ಚರ್ಚ್ ಹಾನಿಗೀಡಾಗಿರುವುದು ವಿಶ್ವದೆಲ್ಲೆಡೆ ಜನರಿಗೆ ಆಘಾತ ತಂದಿದೆ. ಇದು ಕೇವಲ ಕ್ರೈಸ್ತ ಸಮುದಾಯಕ್ಕೆ ಸೇರಿದ್ದಲ್ಲ. ಇದು ನಮ್ಮೆಲ್ಲರದ್ದು’ ಎಂದು ಅವರು ತಿಳಿಸಿದ್ದಾರೆ.</p>.<p>ಚರ್ಚ್ ಮೇಲ್ಭಾಗದಲ್ಲಿಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದು, ಆಧಾರಕಂಬಗಳನ್ನು ಅಳವಡಿಸುವಲ್ಲಿ ನಿರತರಾಗಿದ್ದಾರೆ. ಬೃಹತ್ ಕ್ರೇನ್ಗಳ ಮೂಲಕ ಮರದ ಹಲಗೆಗಳನ್ನು ಸ್ಥಳಕ್ಕೆ ಸಾಗಿಸಲಾಗಿದೆ.</p>.<p class="Subhead"><strong>ಪತ್ತೆಯಾಗದ ಕಾರಣ:</strong>ಚರ್ಚ್ನ ಒಳಭಾಗ ಇನ್ನೂ ಅಪಾಯದಿಂದ ಮುಕ್ತವಾಗದ ಕಾರಣ, ತನಿಖಾಧಿಕಾರಿಗಳು ಒಳಪ್ರವೇಶಿಸಲು ಸಾಧ್ಯವಾಗಿಲ್ಲ. ಆದ್ದರಿಂದಅಗ್ನಿ ಆಕಸ್ಮಿಕಕ್ಕೆ ಕಾರಣ ಏನು ಎಂದು ಇನ್ನೂ ಪತ್ತೆಯಾಗಿಲ್ಲ. ಎಂದು ಪ್ಯಾರಿಸ್ನ ಕಾನೂನು ಇಲಾಖೆ ತಿಳಿಸಿದೆ.</p>.<p class="Subhead"><strong>ಇದನ್ನೂ ಓದಿ:<a href="https://www.prajavani.net/notre-dame-hunt-%E2%80%98dad-and-629560.html" target="_blank">ನಾಟ್ರೆ ಡೇಮ್ ಚರ್ಚ್ಗೆ ಬೆಂಕಿ ಬೀಳುವ ಒಂದು ತಾಸು ಮೊದಲು ತೆಗೆದ ಫೋಟೊ ವೈರಲ್</a></strong></p>.<p>ನವೀಕರಣ ಕಾರ್ಯದಲ್ಲಿ ನಿರತವಾಗಿರುವ ಕಂಪನಿಯ ಸಿಬ್ಬಂದಿ ಸೇರಿದಂತೆ 30 ಸಾಕ್ಷ್ಯಗಳ ಜತೆಗೆ ತನಿಖಾಧಿಕಾರಿಗಳು ಮಾತುಕತೆ ನಡೆಸಿದ್ದಾರೆ.</p>.<p><strong>‘ಪುನರ್ನಿರ್ಮಾಣಕ್ಕೆ ಅಂತರರಾಷ್ಟ್ರೀಯ ಸ್ಪರ್ಧೆ’</strong></p>.<p>ಅಗ್ನಿ ಆಕಸ್ಮಿಕದಲ್ಲಿ ನಾಶವಾದಚರ್ಚ್ನ ಪಿರಮಿಡ್ ಆಕೃತಿಯ ಗೋಪುರ ಪುನರ್ನಿರ್ಮಾಣಕ್ಕೆ ವಿನ್ಯಾಸ ರೂಪಿಸಲು ವಿಶ್ವದೆಲ್ಲೆಡೆಯಿಂದ ವಾಸ್ತುಶಿಲ್ಪಿಗಳನ್ನು ಸ್ಪರ್ಧೆಗೆ ಆಹ್ವಾನಿಸಲಾಗುತ್ತಿದೆ.</p>.<p>‘ಈ ಕಾಲದ ಸವಾಲುಗಳನ್ನು ಎದುರಿಸಲು ಸಮರ್ಥವಾದ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಹೊಸ ಗೋಪುರ ನಿರ್ಮಿಸುವುದು ಈ ಸ್ಪರ್ಧೆಯ ಉದ್ದೇಶ’ ಎಂದು ಪ್ರಧಾನಿ ಎಡ್ವರ್ಡ್ ಫಿಲಿಪ್ ತಿಳಿಸಿದ್ದಾರೆ. ಪುನರ್ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿ ಚರ್ಚೆ ನಡೆಸಲು ಅಧ್ಯಕ್ಷ ಎಮ್ಯಾನುವಲ್ ಮ್ಯಾಕ್ರೊನ್ ಕರೆದಿದ್ದ ವಿಶೇಷ ಸಂಪುಟ ಸಭೆ ಬಳಿಕ ಅವರು ಈ ಮಾಹಿತಿ ನೀಡಿದ್ದಾರೆ.</p>.<p><strong>‘ಆರು ವರ್ಷ ಬಂದ್’:</strong> ‘ಅಗ್ನಿ ಅವಘಡದಿಂದ ಚರ್ಚ್ನ ಭಾಗ ದುರ್ಬಲವಾಗಿದೆ. ಆದ್ದರಿಂದ ಆರು ವರ್ಷ ಚರ್ಚ್ ಮುಚ್ಚಲಾಗುವುದು’ ಎಂದು ಬಿಷಪ್ ಪ್ಯಾಟ್ರಿಕ್ ಚುವೆಟ್ ತಿಳಿಸಿದ್ದಾರೆ. </p>.<p><strong>ಧನ್ಯವಾದ ಅರ್ಪಣೆ:</strong> ತಮ್ಮ ಜೀವವನ್ನು ಅಪಾಯಕ್ಕೊಡ್ಡಿ ರಕ್ಷಣಾ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿಗೆ ಇಡೀ ಚರ್ಚ್ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಪೋಪ್ ಫ್ರಾನ್ಸಿಸ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>