ಜೈನಧರ್ಮದ ಪರಿಕಲ್ಪನೆಗಳಾದ ಅಹಿಂಸಾ ತತ್ವ, ಅಪರಿಗ್ರಹ, ಅನೇಕಾಂತವಾದ ಕುರಿತು ಅಧ್ಯಯನ ಹಾಗೂ ಆಧುನಿಕ ಸಮಾಜದಲ್ಲಿ ಇವುಗಳ ಅನ್ವಯಿವಿಕೆಯ ಸಾಧ್ಯತೆಗಳಿಗೆ ಪೀಠ ಒತ್ತು ನೀಡಲಿದೆ. ಶಾಂತಿ, ಸಾಮಾಜಿಕ ಸೌಹಾರ್ದ, ಪರಿಸರ ಸುಸ್ಥಿರಾಭಿವೃದ್ಧಿ ಕುರಿತು ಒಲವು ಬೆಳೆಸಿಕೊಳ್ಳಲು, ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಲು ಉತ್ತೇಜನ ನೀಡಲಿದೆ.