<p><strong>ಢಾಕಾ:</strong> ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಮೊಹಮ್ಮದ್ ಯೂನುಸ್ ಅವರೇ ಮುಂದುವರಿಯಲಿದ್ದಾರೆ ಎಂದು ಸಚಿವ ಸಂಪುಟದ ಸಲಹೆಗಾರರೊಬ್ಬರು ಶನಿವಾರ ಸ್ಪಷ್ಟಪಡಿಸಿದ್ದಾರೆ. </p>.<p>ಯೂನುಸ್ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಎರಡು ದಿನಗಳ ಹಿಂದೆ ಅವರ ಆಪ್ತರೊಬ್ಬರು ಹೇಳಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.</p>.<p>‘ಅವರು(ಯೂನುಸ್) ಎಂದಿಗೂ ಹುದ್ದೆ ತ್ಯಜಿಸುವುದಾಗಿ ತಿಳಿಸಿರಲಿಲ್ಲ. ನಮಗೆ ವಹಿಸಿದ ಜವಾಬ್ದಾರಿಯಲ್ಲಿ ಹಲವು ಅಡೆತಡೆಗಳು ಎದುರಾಗಿದ್ದರೂ ಕೂಡ ಅದನ್ನು ನಿವಾರಿಸಿ ಮುನ್ನಡೆಯಲಿದ್ದೇವೆ’ ಎಂದು ಸರ್ಕಾರದ ಯೋಜನಾ ಸಲಹೆಗಾರ ವಾಹಿದುದ್ದೀನ್ ಮಹಮ್ಮುದ್ ತಿಳಿಸಿದ್ದಾರೆ.</p>.<p>‘ಯೂನುಸ್ ಅವರು ಖಂಡಿತವಾಗಿಯೂ ಆ ಹುದ್ದೆಯಲ್ಲಿ ಉಳಿಯಲಿದ್ದಾರೆ’ ಎಂದು ಮಹಮ್ಮುದ್ ಸ್ಪಷ್ಟಪಡಿಸಿದರು.</p>.<p>‘ಸರ್ಕಾರದಲ್ಲಿರುವ ಪ್ರತಿಯೊಬ್ಬ ಸಲಹೆಗಾರರಿಗೂ ವಹಿಸಿರುವ ಜವಾಬ್ದಾರಿ ಮಹತ್ವದ್ದಾಗಿದೆ. ನಾವು ಯಾವುದೇ ಕಾರಣಕ್ಕೂ ಈ ಕರ್ತವ್ಯವನ್ನು ತ್ಯಜಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.</p>.<p>‘ಈಗಿನ ಪರಿಸ್ಥಿತಿಯಲ್ಲಿ ಯೂನುಸ್ ಅವರು ಕೆಲಸ ಮಾಡಲು ಸಾಧ್ಯವಿಲ್ಲ, ಹೀಗಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ’ ಎಂದು ವಿದ್ಯಾರ್ಥಿಗಳ ನೇತೃತ್ವ ಹೊಂದಿರುವ ನ್ಯಾಷನಲ್ ಸಿಟಿಜನ್ ಪಕ್ಷದ ನಾಯಕರು ಎರಡು ದಿನಗಳ ಹಿಂದೆ ಹೇಳಿಕೆ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಢಾಕಾ:</strong> ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಮೊಹಮ್ಮದ್ ಯೂನುಸ್ ಅವರೇ ಮುಂದುವರಿಯಲಿದ್ದಾರೆ ಎಂದು ಸಚಿವ ಸಂಪುಟದ ಸಲಹೆಗಾರರೊಬ್ಬರು ಶನಿವಾರ ಸ್ಪಷ್ಟಪಡಿಸಿದ್ದಾರೆ. </p>.<p>ಯೂನುಸ್ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಎರಡು ದಿನಗಳ ಹಿಂದೆ ಅವರ ಆಪ್ತರೊಬ್ಬರು ಹೇಳಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.</p>.<p>‘ಅವರು(ಯೂನುಸ್) ಎಂದಿಗೂ ಹುದ್ದೆ ತ್ಯಜಿಸುವುದಾಗಿ ತಿಳಿಸಿರಲಿಲ್ಲ. ನಮಗೆ ವಹಿಸಿದ ಜವಾಬ್ದಾರಿಯಲ್ಲಿ ಹಲವು ಅಡೆತಡೆಗಳು ಎದುರಾಗಿದ್ದರೂ ಕೂಡ ಅದನ್ನು ನಿವಾರಿಸಿ ಮುನ್ನಡೆಯಲಿದ್ದೇವೆ’ ಎಂದು ಸರ್ಕಾರದ ಯೋಜನಾ ಸಲಹೆಗಾರ ವಾಹಿದುದ್ದೀನ್ ಮಹಮ್ಮುದ್ ತಿಳಿಸಿದ್ದಾರೆ.</p>.<p>‘ಯೂನುಸ್ ಅವರು ಖಂಡಿತವಾಗಿಯೂ ಆ ಹುದ್ದೆಯಲ್ಲಿ ಉಳಿಯಲಿದ್ದಾರೆ’ ಎಂದು ಮಹಮ್ಮುದ್ ಸ್ಪಷ್ಟಪಡಿಸಿದರು.</p>.<p>‘ಸರ್ಕಾರದಲ್ಲಿರುವ ಪ್ರತಿಯೊಬ್ಬ ಸಲಹೆಗಾರರಿಗೂ ವಹಿಸಿರುವ ಜವಾಬ್ದಾರಿ ಮಹತ್ವದ್ದಾಗಿದೆ. ನಾವು ಯಾವುದೇ ಕಾರಣಕ್ಕೂ ಈ ಕರ್ತವ್ಯವನ್ನು ತ್ಯಜಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.</p>.<p>‘ಈಗಿನ ಪರಿಸ್ಥಿತಿಯಲ್ಲಿ ಯೂನುಸ್ ಅವರು ಕೆಲಸ ಮಾಡಲು ಸಾಧ್ಯವಿಲ್ಲ, ಹೀಗಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ’ ಎಂದು ವಿದ್ಯಾರ್ಥಿಗಳ ನೇತೃತ್ವ ಹೊಂದಿರುವ ನ್ಯಾಷನಲ್ ಸಿಟಿಜನ್ ಪಕ್ಷದ ನಾಯಕರು ಎರಡು ದಿನಗಳ ಹಿಂದೆ ಹೇಳಿಕೆ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>