<p><strong>ಕೆರ್ಸಾನ್ (ಉಕ್ರೇನ್)</strong>: ಕಖೊವ್ಕಾ ಜಲಾಶಯ ಧ್ವಂಸಗೊಂಡು ಉಂಟಾಗಿರುವ ಭಾರಿ ಪ್ರವಾಹದಲ್ಲಿ ರಷ್ಯಾ ಆಕ್ರಮಿತ ಪ್ರದೇಶದ ಐವರು ನಾಗರಿಕರು ಗುರುವಾರ ಮೃತಪಟ್ಟಿದ್ದಾರೆ.</p>.<p>ಮಂಗಳವಾರ ಅಣೆಕಟ್ಟೆ ಧ್ವಂಸವಾದ ನಂತರ ಪ್ರವಾಹದಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಮುಂದುವರಿದಿದೆ ಎಂದು ನೊವಾ ಕಖೊವ್ಕಾ ನಗರದ ರಷ್ಯಾ ನಿಯೋಜಿತ ಮೇಯರ್ ವ್ಲಾದಿಮಿರ್ ಲಿಯೊಂಚಿಫ್ ರಷ್ಯಾದ ಸರ್ಕಾರಿ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ. </p>.<p>ನೀಪರ್ ನದಿ ದಂಡೆಯಲ್ಲಿ ಸೃಷ್ಟಿಯಾಗಿರುವ ಪ್ರವಾಹದಿಂದಾಗಿ ಈವರೆಗೆ ರಷ್ಯಾ ಮತ್ತು ಉಕ್ರೇನ್ ನಿಯಂತ್ರಿತ ಪ್ರದೇಶಗಳ ಸುಮಾರು 4 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p>.<p>ಗುರುವಾರ ಬೆಳಿಗ್ಗೆ ಪ್ರವಾಹ ಮಟ್ಟ ಸರಾಸರಿ 5.6 ಮೀಟರ್ಗೆ ಏರಿಕೆಯಾಗಿದ್ದು, ಸುಮಾರು 600 ಚದರ ಕಿಲೋಮೀಟರ್ನಷ್ಟು ಭೂಪ್ರದೇಶ ಪ್ರವಾಹದಲ್ಲಿ ಮುಳುಗಿದೆ ಎಂದು ಪ್ರಾದೇಶಿಕ ಗವರ್ನರ್ ಅಲೆಕ್ಸಾಂಡರ್ ಪ್ರೊಕುದಿನ್ ಹೇಳಿದರು.</p>.<p>ಪ್ರವಾಹ ಪೀಡಿತ ಪ್ರದೇಶಗಳಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆರ್ಸಾನ್ (ಉಕ್ರೇನ್)</strong>: ಕಖೊವ್ಕಾ ಜಲಾಶಯ ಧ್ವಂಸಗೊಂಡು ಉಂಟಾಗಿರುವ ಭಾರಿ ಪ್ರವಾಹದಲ್ಲಿ ರಷ್ಯಾ ಆಕ್ರಮಿತ ಪ್ರದೇಶದ ಐವರು ನಾಗರಿಕರು ಗುರುವಾರ ಮೃತಪಟ್ಟಿದ್ದಾರೆ.</p>.<p>ಮಂಗಳವಾರ ಅಣೆಕಟ್ಟೆ ಧ್ವಂಸವಾದ ನಂತರ ಪ್ರವಾಹದಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಮುಂದುವರಿದಿದೆ ಎಂದು ನೊವಾ ಕಖೊವ್ಕಾ ನಗರದ ರಷ್ಯಾ ನಿಯೋಜಿತ ಮೇಯರ್ ವ್ಲಾದಿಮಿರ್ ಲಿಯೊಂಚಿಫ್ ರಷ್ಯಾದ ಸರ್ಕಾರಿ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ. </p>.<p>ನೀಪರ್ ನದಿ ದಂಡೆಯಲ್ಲಿ ಸೃಷ್ಟಿಯಾಗಿರುವ ಪ್ರವಾಹದಿಂದಾಗಿ ಈವರೆಗೆ ರಷ್ಯಾ ಮತ್ತು ಉಕ್ರೇನ್ ನಿಯಂತ್ರಿತ ಪ್ರದೇಶಗಳ ಸುಮಾರು 4 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p>.<p>ಗುರುವಾರ ಬೆಳಿಗ್ಗೆ ಪ್ರವಾಹ ಮಟ್ಟ ಸರಾಸರಿ 5.6 ಮೀಟರ್ಗೆ ಏರಿಕೆಯಾಗಿದ್ದು, ಸುಮಾರು 600 ಚದರ ಕಿಲೋಮೀಟರ್ನಷ್ಟು ಭೂಪ್ರದೇಶ ಪ್ರವಾಹದಲ್ಲಿ ಮುಳುಗಿದೆ ಎಂದು ಪ್ರಾದೇಶಿಕ ಗವರ್ನರ್ ಅಲೆಕ್ಸಾಂಡರ್ ಪ್ರೊಕುದಿನ್ ಹೇಳಿದರು.</p>.<p>ಪ್ರವಾಹ ಪೀಡಿತ ಪ್ರದೇಶಗಳಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>