<p><strong>ವಾಷಿಂಗ್ಟನ್ (ಪಿಟಿಐ): </strong>ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಮಂಡಿಸಿದ ಬಜೆಟ್ನಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಔಷಧ ಹಾಗೂ ಆರೋಗ್ಯ ವಲಯಗಳಲ್ಲಿ ಅತ್ಯವಶ್ಯಕವಾದ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಟ್ಟಿರುವುದನ್ನು ಅಮೆರಿಕ ಮತ್ತು ಭಾರತೀಯ ಉನ್ನತ ವಾಣಿಜ್ಯ ಒಕ್ಕೂಟವು (ಯುಎಸ್ಎಐಸಿಸಿ) ಶನಿವಾರ ಇಲ್ಲಿ ಹೊಗಳಿದೆ.<br /> <br /> ಆದರೆ `ಕೆಲವು ಆರ್ಥಿಕ ಸುಧಾ ರಣೆಗಳಿಗೆ ಬಜೆಟ್ ಆಶಾದಾಯ ಕವಾಗಿಲ್ಲ~ ಎಂದೂ ಅಭಿ ಪ್ರಾಯಪಟ್ಟಿದೆ.<br /> ಹಣದುಬ್ಬರಕ್ಕೆ ಕಾರಣ:`ಅಬಕಾರಿ ತೆರಿಗೆಯಲ್ಲಿ ಹೆಚ್ಚಳ ಮಾಡಿರುವುದು ಹಣದುಬ್ಬರಕ್ಕೆ ಕಾರಣವಾಗಲಿದ್ದು, ಆರ್ಥಿಕ ಬೆಳವಣಿಗೆ ಮತ್ತು ಬಡ್ಡಿದರದ ಮೇಲೆ ಪರಿಣಾಮ ಬೀರಲಿದೆ.<br /> <br /> ಪ್ರಸಕ್ತ ಹಣಕಾಸು ವರ್ಷದ ಅಂದಾಜು ಬೆಳವಣಿಗೆ ದರವನ್ನು ಶೇ 6.9ಕ್ಕೆ ನಿಗದಿಪಡಿಸಿರುವುದು ನಿರಾಶಾದಾಯಕವಾಗಿದ್ದು, ಇದರಿಂದ ಬೃಹತ್ ಸುಧಾರಣೆಗಳಿಗೆ ಹಿನ್ನಡೆಯಾಗಲಿದೆ. ಅಭಿವೃದ್ಧಿ ದರವನ್ನು ಕಾಯ್ದುಕೊಳ್ಳಲು ಗ್ರಾಮೀಣಾಭಿವೃದ್ಧಿ, ಆರೋಗ್ಯ, ಔಷಧ, ಶಿಕ್ಷಣ ಮತ್ತಿತರ ಕ್ಷೇತ್ರಗಳಿಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ~ ಎಂದು ಇಲ್ಲಿನ ಅಮೆರಿಕ ಮತ್ತು ಭಾರತೀಯ ವಾಣಿಜ್ಯ ಸಂಸ್ಥೆಗಳನ್ನು ಪ್ರತಿನಿಧಿಸುವ ಈ ಒಕ್ಕೂಟದ ಅಧ್ಯಕ್ಷ ಕರುಣ್ ರಿಷಿ ತಿಳಿಸಿದ್ದಾರೆ.<br /> <br /> `ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಗೆ ಹಣಕಾಸು ನೆರವನ್ನು ಶೇ 15ರಷ್ಟು ಹೆಚ್ಚಿಸಿರುವುದು ಮತ್ತು ರಾಷ್ಟ್ರೀಯ ನಗರ ಆರೋಗ್ಯ ಯೋಜನೆಯನ್ನು ಆರಂಭಿಸುವ ಮೂಲಕ ಸಾರ್ವಜನಿಕ ಆರೋಗ್ಯ ನೀತಿಗೆ ಬಲ ಒದಗಿಸಿರುವುದು ಯೋಗ್ಯವಾಗಿದೆ. <br /> <br /> ಶಿಕ್ಷಣಕ್ಕೆ ಶೇ 18ರಷ್ಟು ಅನುದಾನ ಹೆಚ್ಚಿಸಿರುವುದು ಸಹ ಪ್ರಶಂಸಾರ್ಹ. ಮೂಲಸೌಕರ್ಯ ಅಭಿವೃದ್ಧಿ ವಲಯದಲ್ಲಿ ಬಂಡವಾಳ ಹೂಡಿಕೆಗೆ ಬೆಂಬಲ ನೀಡಿರುವುದು ಮತ್ತು ವಿದೇಶಿ ವಾಣಿಜ್ಯ ಸಾಲ ನೀತಿಯನ್ನು ಉದಾರೀಕರಿಸಿರುವುದು ಮತ್ತಿತರ ಕ್ರಮಗಳು ಅಭಿವೃದ್ಧಿ ಪರವಾಗಿವೆ~ ಎಂದು ಅವರು ನುಡಿದಿದ್ದಾರೆ.<br /> <br /> <strong>ಸುಧಾರಣೆ ಕೊರತೆ: </strong>ಈ ಮಧ್ಯೆ, ಅಮೆರಿಕ-ಭಾರತ ವಾಣಿಜ್ಯ ಮಂಡಳಿ (ಯುಎಸ್ಐಬಿಸಿ)ಯು ಪ್ರಣವ್ ಅವರ 2012-13ನೇ ಸಾಲಿನ ಬಜೆಟ್ ಅತ್ಯಗತ್ಯವಾದ ಬದಲಾವಣೆಯ ಸುಧಾರಣೆಗಳಿಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಟೀಕಿಸಿದೆಯಲ್ಲದೆ, ಹೆಚ್ಚು ವಿದೇಶಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಪಾರದರ್ಶಕ ತೆರಿಗೆ ನೀತಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದೆ.<br /> <br /> `ಪ್ರಬಲ ಆರ್ಥಿಕ ಬೆಳವಣಿಗೆಯನ್ನು ಸಾಧಿಸುವ ಮತ್ತು ಜಾಗತಿಕ ವ್ಯಾಪಾರವನ್ನು ವಿಸ್ತರಿಸುವ ಗುರಿಯೊಂದಿಗೆ ವಿದೇಶಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಸುಧಾರಣಾ ತೆರಿಗೆ ನೀತಿಗಳನ್ನು ಪ್ರಕಟಿಸಬೇಕು~ ಎಂದು ಮಂಡಳಿಯ ಅಧ್ಯಕ್ಷ ರಾನ್ ಸೋಮರ್ಸ್ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಿಯಾನೆ ಫಾರೆಲ್ ಸಲಹೆ ನೀಡಿದ್ದಾರೆ.<br /> <br /> <strong>ನೈಜತೆಗೆ ಹತ್ತಿರವಿದೆ (ಲಂಡನ್ ವರದಿ):</strong>ಅನಿವಾಸಿ ಭಾರತೀಯ ಉದ್ಯಮಿ ಲಾರ್ಡ್ ಸ್ವರಾಜ್ ಪಾಲ್ ಅವರು, `ಕೇಂದ್ರ ಬಜೆಟ್ ಭಾರತದ ನೈಜ ಪರಿಸ್ಥಿತಿಗೆ ಅನುಗುಣವಾಗಿದೆ~ ಎಂದು ಪ್ರತಿಕ್ರಿಯಿಸಿದ್ದಾರೆ. ದೇಶದಲ್ಲಿ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಸುಧಾರಿಸುವುದರ ಜೊತೆಗೆ ಆರ್ಥಿಕತೆಯನ್ನು ಉತ್ತಮಪಡಿಸಬೇಕಿದೆ ಎಂದಿದ್ದಾರೆ. ಇದೊಂದು `ಒಳ್ಳೆಯ ಆಯವ್ಯಯ~ ವಾಗಿದ್ದು, ಇದಕ್ಕಾಗಿ ಪ್ರಣವ್ ಅವರನ್ನು ಅಭಿನಂದಿಸುವುದಾಗಿಯೂ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್ (ಪಿಟಿಐ): </strong>ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಮಂಡಿಸಿದ ಬಜೆಟ್ನಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಔಷಧ ಹಾಗೂ ಆರೋಗ್ಯ ವಲಯಗಳಲ್ಲಿ ಅತ್ಯವಶ್ಯಕವಾದ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಟ್ಟಿರುವುದನ್ನು ಅಮೆರಿಕ ಮತ್ತು ಭಾರತೀಯ ಉನ್ನತ ವಾಣಿಜ್ಯ ಒಕ್ಕೂಟವು (ಯುಎಸ್ಎಐಸಿಸಿ) ಶನಿವಾರ ಇಲ್ಲಿ ಹೊಗಳಿದೆ.<br /> <br /> ಆದರೆ `ಕೆಲವು ಆರ್ಥಿಕ ಸುಧಾ ರಣೆಗಳಿಗೆ ಬಜೆಟ್ ಆಶಾದಾಯ ಕವಾಗಿಲ್ಲ~ ಎಂದೂ ಅಭಿ ಪ್ರಾಯಪಟ್ಟಿದೆ.<br /> ಹಣದುಬ್ಬರಕ್ಕೆ ಕಾರಣ:`ಅಬಕಾರಿ ತೆರಿಗೆಯಲ್ಲಿ ಹೆಚ್ಚಳ ಮಾಡಿರುವುದು ಹಣದುಬ್ಬರಕ್ಕೆ ಕಾರಣವಾಗಲಿದ್ದು, ಆರ್ಥಿಕ ಬೆಳವಣಿಗೆ ಮತ್ತು ಬಡ್ಡಿದರದ ಮೇಲೆ ಪರಿಣಾಮ ಬೀರಲಿದೆ.<br /> <br /> ಪ್ರಸಕ್ತ ಹಣಕಾಸು ವರ್ಷದ ಅಂದಾಜು ಬೆಳವಣಿಗೆ ದರವನ್ನು ಶೇ 6.9ಕ್ಕೆ ನಿಗದಿಪಡಿಸಿರುವುದು ನಿರಾಶಾದಾಯಕವಾಗಿದ್ದು, ಇದರಿಂದ ಬೃಹತ್ ಸುಧಾರಣೆಗಳಿಗೆ ಹಿನ್ನಡೆಯಾಗಲಿದೆ. ಅಭಿವೃದ್ಧಿ ದರವನ್ನು ಕಾಯ್ದುಕೊಳ್ಳಲು ಗ್ರಾಮೀಣಾಭಿವೃದ್ಧಿ, ಆರೋಗ್ಯ, ಔಷಧ, ಶಿಕ್ಷಣ ಮತ್ತಿತರ ಕ್ಷೇತ್ರಗಳಿಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ~ ಎಂದು ಇಲ್ಲಿನ ಅಮೆರಿಕ ಮತ್ತು ಭಾರತೀಯ ವಾಣಿಜ್ಯ ಸಂಸ್ಥೆಗಳನ್ನು ಪ್ರತಿನಿಧಿಸುವ ಈ ಒಕ್ಕೂಟದ ಅಧ್ಯಕ್ಷ ಕರುಣ್ ರಿಷಿ ತಿಳಿಸಿದ್ದಾರೆ.<br /> <br /> `ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಗೆ ಹಣಕಾಸು ನೆರವನ್ನು ಶೇ 15ರಷ್ಟು ಹೆಚ್ಚಿಸಿರುವುದು ಮತ್ತು ರಾಷ್ಟ್ರೀಯ ನಗರ ಆರೋಗ್ಯ ಯೋಜನೆಯನ್ನು ಆರಂಭಿಸುವ ಮೂಲಕ ಸಾರ್ವಜನಿಕ ಆರೋಗ್ಯ ನೀತಿಗೆ ಬಲ ಒದಗಿಸಿರುವುದು ಯೋಗ್ಯವಾಗಿದೆ. <br /> <br /> ಶಿಕ್ಷಣಕ್ಕೆ ಶೇ 18ರಷ್ಟು ಅನುದಾನ ಹೆಚ್ಚಿಸಿರುವುದು ಸಹ ಪ್ರಶಂಸಾರ್ಹ. ಮೂಲಸೌಕರ್ಯ ಅಭಿವೃದ್ಧಿ ವಲಯದಲ್ಲಿ ಬಂಡವಾಳ ಹೂಡಿಕೆಗೆ ಬೆಂಬಲ ನೀಡಿರುವುದು ಮತ್ತು ವಿದೇಶಿ ವಾಣಿಜ್ಯ ಸಾಲ ನೀತಿಯನ್ನು ಉದಾರೀಕರಿಸಿರುವುದು ಮತ್ತಿತರ ಕ್ರಮಗಳು ಅಭಿವೃದ್ಧಿ ಪರವಾಗಿವೆ~ ಎಂದು ಅವರು ನುಡಿದಿದ್ದಾರೆ.<br /> <br /> <strong>ಸುಧಾರಣೆ ಕೊರತೆ: </strong>ಈ ಮಧ್ಯೆ, ಅಮೆರಿಕ-ಭಾರತ ವಾಣಿಜ್ಯ ಮಂಡಳಿ (ಯುಎಸ್ಐಬಿಸಿ)ಯು ಪ್ರಣವ್ ಅವರ 2012-13ನೇ ಸಾಲಿನ ಬಜೆಟ್ ಅತ್ಯಗತ್ಯವಾದ ಬದಲಾವಣೆಯ ಸುಧಾರಣೆಗಳಿಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಟೀಕಿಸಿದೆಯಲ್ಲದೆ, ಹೆಚ್ಚು ವಿದೇಶಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಪಾರದರ್ಶಕ ತೆರಿಗೆ ನೀತಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದೆ.<br /> <br /> `ಪ್ರಬಲ ಆರ್ಥಿಕ ಬೆಳವಣಿಗೆಯನ್ನು ಸಾಧಿಸುವ ಮತ್ತು ಜಾಗತಿಕ ವ್ಯಾಪಾರವನ್ನು ವಿಸ್ತರಿಸುವ ಗುರಿಯೊಂದಿಗೆ ವಿದೇಶಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಸುಧಾರಣಾ ತೆರಿಗೆ ನೀತಿಗಳನ್ನು ಪ್ರಕಟಿಸಬೇಕು~ ಎಂದು ಮಂಡಳಿಯ ಅಧ್ಯಕ್ಷ ರಾನ್ ಸೋಮರ್ಸ್ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಿಯಾನೆ ಫಾರೆಲ್ ಸಲಹೆ ನೀಡಿದ್ದಾರೆ.<br /> <br /> <strong>ನೈಜತೆಗೆ ಹತ್ತಿರವಿದೆ (ಲಂಡನ್ ವರದಿ):</strong>ಅನಿವಾಸಿ ಭಾರತೀಯ ಉದ್ಯಮಿ ಲಾರ್ಡ್ ಸ್ವರಾಜ್ ಪಾಲ್ ಅವರು, `ಕೇಂದ್ರ ಬಜೆಟ್ ಭಾರತದ ನೈಜ ಪರಿಸ್ಥಿತಿಗೆ ಅನುಗುಣವಾಗಿದೆ~ ಎಂದು ಪ್ರತಿಕ್ರಿಯಿಸಿದ್ದಾರೆ. ದೇಶದಲ್ಲಿ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಸುಧಾರಿಸುವುದರ ಜೊತೆಗೆ ಆರ್ಥಿಕತೆಯನ್ನು ಉತ್ತಮಪಡಿಸಬೇಕಿದೆ ಎಂದಿದ್ದಾರೆ. ಇದೊಂದು `ಒಳ್ಳೆಯ ಆಯವ್ಯಯ~ ವಾಗಿದ್ದು, ಇದಕ್ಕಾಗಿ ಪ್ರಣವ್ ಅವರನ್ನು ಅಭಿನಂದಿಸುವುದಾಗಿಯೂ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>