<p><strong>ಕಾರ್ಯಕ್ರಮ ರೂಪಿಸಲು ಯೋಜನಾ ಆಯೋಗಕ್ಕೆ ಕರೆ</strong></p>.<p><strong>ನವದೆಹಲಿ, ಅ. 7–</strong> ಗ್ರಾಮಾಂತರ ಪ್ರದೇಶಗಳಲ್ಲಿ ಜನರಿಗೆ ಉದ್ಯೋಗ ಒದಗಿಸಲು ಈ ಕೂಡಲೇ ಯೋಜನೆಗಳನ್ನು ರೂಪಿಸಬೇಕೆಂದು ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಯೋಜನಾ ಮಂಡಳಿಗೆ ಸೂಚಿಸಿದರು.</p>.<p>ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಠ ಪ್ರಮಾಣದ ಜನರಿಗೆ, ಅದರಲ್ಲೂ ಮುಖ್ಯವಾಗಿ ಅರೆನುರಿತ ಹಾಗೂ ತರಬೇತಿ ಪಡೆಯದ ಕಾರ್ಮಿಕರಿಗೆ ಉದ್ಯೋಗ ಒದಗಿಸಬಹುದಾದ ಯೋಜನೆಗಳನ್ನು ರೂಪಿಸುವುದರ ಮೂಲಕ ಈ ಕಾರ್ಯವನ್ನು<br />ಪ್ರಾರಂಭಿಸಬಹುದೆಂದೂ ಪ್ರಧಾನ ಮಂತ್ರಿಯವರು ಯೋಜನಾ ಮಂಡಳಿಯ ಪೂರ್ಣ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.</p>.<p>ನಿರುದ್ಯೋಗ ಸಮಸ್ಯೆ ಸ್ಫೋಟಕ ಮಟ್ಟ ಮುಟ್ಟುತ್ತಾ ಇದೆಯೆಂದೂ ಸಮಾಜದ ಎಲ್ಲ ವರ್ಗಗಳ ಜನರ ಉದ್ಯೋಗಾವಕಾಶ ಹೆಚ್ಚಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದೂ ಶ್ರೀಮತಿ ಗಾಂಧಿ ನುಡಿದರು.</p>.<p><strong>ಸರ್ಕಾರಿ ಬ್ಯಾಂಕುಗಳಲ್ಲಿ ‘ಕೆಟ್ಟ ಆಡಳಿತ’</strong></p>.<p><strong>ಜೈಪುರ, ಅ. 7– </strong>ರಾಷ್ಟ್ರೀಕರಣವಾದ ನಂತರ ರಾಷ್ಟ್ರೀಕೃತ ಬ್ಯಾಂಕುಗಳು ‘ಬಹಳ ಕೆಟ್ಟದಾಗಿ’ ಕಾರ್ಯ ನಿರ್ವಹಿಸುತ್ತಿವೆ ಎಂದು ಮೊರಾರ್ಜಿ ದೇಸಾಯಿ ಇಂದು ತಿಳಿಸಿದರು.</p>.<p>ಬ್ಯಾಂಕ್ ವ್ಯವಹಾರಗಳಲ್ಲಿ ಸರ್ಕಾರ ಮತ್ತು ರಿಸರ್ವ್ ಬ್ಯಾಂಕು ಹಸ್ತಕ್ಷೇಪ ಮಾಡುತ್ತಿವೆ ಎಂದು ಆರೋಪಿಸಿದ ದೇಸಾಯಿ ಅವರು, ಇದರಿಂದಾಗಿ ಎಲ್ಲೆಡೆಯೂ ‘ಕೆಟ್ಟ ಆಡಳಿತ’ ತಲೆದೋರಿದೆ ಎಂದರು.</p>.<p>ತಾವು ಅಧಿಕಾರದಲ್ಲಿದ್ದಾಗ, ಹಣದುಬ್ಬರ ಪ್ರವೃತ್ತಿ ನಿಂತು ಬೆಲೆಗಳು ಸ್ಥಿರವಾಗಿದ್ದವು ಎಂದೂ ಮಾಜಿ ಹಣಕಾಸು ಸಚಿವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರ್ಯಕ್ರಮ ರೂಪಿಸಲು ಯೋಜನಾ ಆಯೋಗಕ್ಕೆ ಕರೆ</strong></p>.<p><strong>ನವದೆಹಲಿ, ಅ. 7–</strong> ಗ್ರಾಮಾಂತರ ಪ್ರದೇಶಗಳಲ್ಲಿ ಜನರಿಗೆ ಉದ್ಯೋಗ ಒದಗಿಸಲು ಈ ಕೂಡಲೇ ಯೋಜನೆಗಳನ್ನು ರೂಪಿಸಬೇಕೆಂದು ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಯೋಜನಾ ಮಂಡಳಿಗೆ ಸೂಚಿಸಿದರು.</p>.<p>ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಠ ಪ್ರಮಾಣದ ಜನರಿಗೆ, ಅದರಲ್ಲೂ ಮುಖ್ಯವಾಗಿ ಅರೆನುರಿತ ಹಾಗೂ ತರಬೇತಿ ಪಡೆಯದ ಕಾರ್ಮಿಕರಿಗೆ ಉದ್ಯೋಗ ಒದಗಿಸಬಹುದಾದ ಯೋಜನೆಗಳನ್ನು ರೂಪಿಸುವುದರ ಮೂಲಕ ಈ ಕಾರ್ಯವನ್ನು<br />ಪ್ರಾರಂಭಿಸಬಹುದೆಂದೂ ಪ್ರಧಾನ ಮಂತ್ರಿಯವರು ಯೋಜನಾ ಮಂಡಳಿಯ ಪೂರ್ಣ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.</p>.<p>ನಿರುದ್ಯೋಗ ಸಮಸ್ಯೆ ಸ್ಫೋಟಕ ಮಟ್ಟ ಮುಟ್ಟುತ್ತಾ ಇದೆಯೆಂದೂ ಸಮಾಜದ ಎಲ್ಲ ವರ್ಗಗಳ ಜನರ ಉದ್ಯೋಗಾವಕಾಶ ಹೆಚ್ಚಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದೂ ಶ್ರೀಮತಿ ಗಾಂಧಿ ನುಡಿದರು.</p>.<p><strong>ಸರ್ಕಾರಿ ಬ್ಯಾಂಕುಗಳಲ್ಲಿ ‘ಕೆಟ್ಟ ಆಡಳಿತ’</strong></p>.<p><strong>ಜೈಪುರ, ಅ. 7– </strong>ರಾಷ್ಟ್ರೀಕರಣವಾದ ನಂತರ ರಾಷ್ಟ್ರೀಕೃತ ಬ್ಯಾಂಕುಗಳು ‘ಬಹಳ ಕೆಟ್ಟದಾಗಿ’ ಕಾರ್ಯ ನಿರ್ವಹಿಸುತ್ತಿವೆ ಎಂದು ಮೊರಾರ್ಜಿ ದೇಸಾಯಿ ಇಂದು ತಿಳಿಸಿದರು.</p>.<p>ಬ್ಯಾಂಕ್ ವ್ಯವಹಾರಗಳಲ್ಲಿ ಸರ್ಕಾರ ಮತ್ತು ರಿಸರ್ವ್ ಬ್ಯಾಂಕು ಹಸ್ತಕ್ಷೇಪ ಮಾಡುತ್ತಿವೆ ಎಂದು ಆರೋಪಿಸಿದ ದೇಸಾಯಿ ಅವರು, ಇದರಿಂದಾಗಿ ಎಲ್ಲೆಡೆಯೂ ‘ಕೆಟ್ಟ ಆಡಳಿತ’ ತಲೆದೋರಿದೆ ಎಂದರು.</p>.<p>ತಾವು ಅಧಿಕಾರದಲ್ಲಿದ್ದಾಗ, ಹಣದುಬ್ಬರ ಪ್ರವೃತ್ತಿ ನಿಂತು ಬೆಲೆಗಳು ಸ್ಥಿರವಾಗಿದ್ದವು ಎಂದೂ ಮಾಜಿ ಹಣಕಾಸು ಸಚಿವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>