<p><strong>ಪ್ರತಿಪಕ್ಷಗಳೆಲ್ಲ ಒಂದಾದರೆ ಕಾಂಗೈಗೆ ಕಷ್ಟ– ಮೊಯಿಲಿ</strong><br /><strong>ನವದೆಹಲಿ, ಮೇ 5–</strong> ಕರ್ನಾಟಕದಲ್ಲಿ ಈಗ ಕಾಂಗೈಗೆ ಜನತಾದಳವೇ ಪ್ರಮುಖ ವಿರೋಧ ಪಕ್ಷವಾಗಿದೆ. ಕಾನ್ಶಿರಾಂ ಪಕ್ಷವಾಗಲೀ ಬಂಗಾರಪ್ಪ ಅವರ ಕರ್ನಾಟಕ ಕಾಂಗ್ರೆಸ್ ಪಕ್ಷವಾಗಲೀ ಅಲ್ಲ. ಆದರೆ ವಿರೋಧ ಪಕ್ಷಗಳೆಲ್ಲ ಒಂದಾದರೆ ಕಾಂಗೈಗೆ ಕಷ್ಟವಾಗುತ್ತದೆ ಎಂದು ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಇಂದು ಇಲ್ಲಿ ಅಭಿಪ್ರಾಯಪಟ್ಟರು.</p>.<p>ಕಾನ್ಶಿರಾಂ ಅವರ ವಿಚಾರ ಕರ್ನಾಟಕದಲ್ಲಿ ಅಸಂಗತವಾದದ್ದು. ಅಲ್ಲದೆ ಬಂಗಾರಪ್ಪ ಅವರು ಹಿಂದುಳಿದ ವರ್ಗಗಳ ವೆಂಕಟಸ್ವಾಮಿ ಆಯೋಗದ ವರದಿಯನ್ನು ವಿರೋಧಿಸಿದವರಲ್ಲಿ ಮೊದಲಿಗರು. ಆದ್ದರಿಂದ ಅವರು ಎಷ್ಟರ ಮಟ್ಟಿಗೆ ಹಿಂದುಳಿದವರ ಪರ ಎಂಬುದನ್ನು ತಿಳಿಯುವ ವಿಷಯ ನಿಮಗೇ ಬಿಟ್ಟದ್ದು ಎಂದು ಮಾತನಾಡುತ್ತ ತಿಳಿಸಿದರು.</p>.<p><strong>ಅಣ್ವಸ್ತ್ರ ಒಪ್ಪಂದ: ಪ್ರಧಾನಿ ಹೇಳಿಕೆಗೆ ಆಗ್ರಹ</strong><br /><strong>ನವದೆಹಲಿ, ಮೇ 5 (ಪಿಟಿಐ)</strong> – ಅಗ್ನಿ ಕ್ಷಿಪಣಿ ಅಭಿವೃದ್ಧಿ ಮತ್ತು ಅದನ್ನು ಸೇನಾಪಡೆಯಲ್ಲಿ ನಿಯೋಜಿಸುವ ದೇಶದ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಅಮೆರಿಕ ಪ್ರವಾಸ ಆರಂಭಿಸುವ ಮುನ್ನ ಸಂಸತ್ತಿಗೆ ಭರವಸೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪ್ರತಿಪಕ್ಷಗಳೆಲ್ಲ ಒಂದಾದರೆ ಕಾಂಗೈಗೆ ಕಷ್ಟ– ಮೊಯಿಲಿ</strong><br /><strong>ನವದೆಹಲಿ, ಮೇ 5–</strong> ಕರ್ನಾಟಕದಲ್ಲಿ ಈಗ ಕಾಂಗೈಗೆ ಜನತಾದಳವೇ ಪ್ರಮುಖ ವಿರೋಧ ಪಕ್ಷವಾಗಿದೆ. ಕಾನ್ಶಿರಾಂ ಪಕ್ಷವಾಗಲೀ ಬಂಗಾರಪ್ಪ ಅವರ ಕರ್ನಾಟಕ ಕಾಂಗ್ರೆಸ್ ಪಕ್ಷವಾಗಲೀ ಅಲ್ಲ. ಆದರೆ ವಿರೋಧ ಪಕ್ಷಗಳೆಲ್ಲ ಒಂದಾದರೆ ಕಾಂಗೈಗೆ ಕಷ್ಟವಾಗುತ್ತದೆ ಎಂದು ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಇಂದು ಇಲ್ಲಿ ಅಭಿಪ್ರಾಯಪಟ್ಟರು.</p>.<p>ಕಾನ್ಶಿರಾಂ ಅವರ ವಿಚಾರ ಕರ್ನಾಟಕದಲ್ಲಿ ಅಸಂಗತವಾದದ್ದು. ಅಲ್ಲದೆ ಬಂಗಾರಪ್ಪ ಅವರು ಹಿಂದುಳಿದ ವರ್ಗಗಳ ವೆಂಕಟಸ್ವಾಮಿ ಆಯೋಗದ ವರದಿಯನ್ನು ವಿರೋಧಿಸಿದವರಲ್ಲಿ ಮೊದಲಿಗರು. ಆದ್ದರಿಂದ ಅವರು ಎಷ್ಟರ ಮಟ್ಟಿಗೆ ಹಿಂದುಳಿದವರ ಪರ ಎಂಬುದನ್ನು ತಿಳಿಯುವ ವಿಷಯ ನಿಮಗೇ ಬಿಟ್ಟದ್ದು ಎಂದು ಮಾತನಾಡುತ್ತ ತಿಳಿಸಿದರು.</p>.<p><strong>ಅಣ್ವಸ್ತ್ರ ಒಪ್ಪಂದ: ಪ್ರಧಾನಿ ಹೇಳಿಕೆಗೆ ಆಗ್ರಹ</strong><br /><strong>ನವದೆಹಲಿ, ಮೇ 5 (ಪಿಟಿಐ)</strong> – ಅಗ್ನಿ ಕ್ಷಿಪಣಿ ಅಭಿವೃದ್ಧಿ ಮತ್ತು ಅದನ್ನು ಸೇನಾಪಡೆಯಲ್ಲಿ ನಿಯೋಜಿಸುವ ದೇಶದ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಅಮೆರಿಕ ಪ್ರವಾಸ ಆರಂಭಿಸುವ ಮುನ್ನ ಸಂಸತ್ತಿಗೆ ಭರವಸೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>