<p>ಸಾರಿಗೆ ಖಾಸಗೀಕರಣ: ಸಂಪುಟ ಸಮಿತಿ</p>.<p><strong>ಬೆಂಗಳೂರು, ಅ. 20– </strong>ರಾಷ್ಟ್ರೀಕರಣ ವಾಗಿರುವ ಕೆಲವೊಂದು ಮಾರ್ಗಗಳಲ್ಲಿ ಖಾಸಗಿ ಬಸ್ಗಳ ಓಡಾಟಕ್ಕೆ ಪರವಾ ನಗಿ, ರಾಜ್ಯ ಸಾರಿಗೆ ಸಂಸ್ಥೆಯನ್ನು ವಿಭಜಿಸಿ ಐದು ಪ್ರತ್ಯೇಕ ನಿಗಮಗಳ ರಚನೆ, ರಾಜಧಾನಿಯಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗಾಗಿ ಬಿಟಿಎಸ್ಗೆ ಪರ್ಯಾಯವಾಗಿ ಖಾಸಗಿಯವರಿಗೆ ಅವಕಾಶ.</p>.<p>ಸಾರಿಗೆ ಸಂಸ್ಥೆ ನೌಕರರು ಮೂರು ದಿನ ಮಿಂಚಿನ ಮುಷ್ಕರ ಹೂಡಿ ರಾಜ್ಯದಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ ಹಿನ್ನೆಲೆಯಲ್ಲಿ, ಮುಂದೆ ಇಂಥ ಪರಿಸ್ಥಿತಿ ಉದ್ಭವಿಸದಂತೆ ಮಾಡಲು ಸರ್ಕಾರ ಯೋಚಿಸಿರುವ ಕಾರ್ಯಯೋಜನೆಯ ಸ್ಥೂಲರೂಪ ಇದು.</p>.<p><strong>ಕಾಶ್ಮೀರ ಜನ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ</strong></p>.<p><strong>ಜಮ್ಮು ಅ. 20 (ಯುಎನ್ಐ)– </strong>ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸಕ್ತ ರಾಷ್ಟ್ರಪತಿ ಆಡಳಿತದ ಅವಧಿ ಕೊನೆಗೊಳ್ಳುವ ಜನವರಿಗೆ ಮೊದಲೇ ಚುನಾವಣೆ ನಡೆಸಲು ಕೇಂದ್ರ ಮತ್ತು ರಾಜ್ಯ ಆಡಳಿತ ಎಲ್ಲ ಸಿದ್ಧತೆ ನಡೆಸುತ್ತಿವೆ. ಅಭ್ಯರ್ಥಿ ನಿಧನವಾದ ಸಂದರ್ಭದಲ್ಲಿ ಚುನಾವಣೆಯನ್ನು ರದ್ದುಗೊಳಿಸದಂತೆ ಜನ ಪ್ರಾತಿನಿಧ್ಯ ಕಾಯ್ದೆಗೆ (1957) ತಿದ್ದುಪಡಿ ತರಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾರಿಗೆ ಖಾಸಗೀಕರಣ: ಸಂಪುಟ ಸಮಿತಿ</p>.<p><strong>ಬೆಂಗಳೂರು, ಅ. 20– </strong>ರಾಷ್ಟ್ರೀಕರಣ ವಾಗಿರುವ ಕೆಲವೊಂದು ಮಾರ್ಗಗಳಲ್ಲಿ ಖಾಸಗಿ ಬಸ್ಗಳ ಓಡಾಟಕ್ಕೆ ಪರವಾ ನಗಿ, ರಾಜ್ಯ ಸಾರಿಗೆ ಸಂಸ್ಥೆಯನ್ನು ವಿಭಜಿಸಿ ಐದು ಪ್ರತ್ಯೇಕ ನಿಗಮಗಳ ರಚನೆ, ರಾಜಧಾನಿಯಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗಾಗಿ ಬಿಟಿಎಸ್ಗೆ ಪರ್ಯಾಯವಾಗಿ ಖಾಸಗಿಯವರಿಗೆ ಅವಕಾಶ.</p>.<p>ಸಾರಿಗೆ ಸಂಸ್ಥೆ ನೌಕರರು ಮೂರು ದಿನ ಮಿಂಚಿನ ಮುಷ್ಕರ ಹೂಡಿ ರಾಜ್ಯದಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ ಹಿನ್ನೆಲೆಯಲ್ಲಿ, ಮುಂದೆ ಇಂಥ ಪರಿಸ್ಥಿತಿ ಉದ್ಭವಿಸದಂತೆ ಮಾಡಲು ಸರ್ಕಾರ ಯೋಚಿಸಿರುವ ಕಾರ್ಯಯೋಜನೆಯ ಸ್ಥೂಲರೂಪ ಇದು.</p>.<p><strong>ಕಾಶ್ಮೀರ ಜನ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ</strong></p>.<p><strong>ಜಮ್ಮು ಅ. 20 (ಯುಎನ್ಐ)– </strong>ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸಕ್ತ ರಾಷ್ಟ್ರಪತಿ ಆಡಳಿತದ ಅವಧಿ ಕೊನೆಗೊಳ್ಳುವ ಜನವರಿಗೆ ಮೊದಲೇ ಚುನಾವಣೆ ನಡೆಸಲು ಕೇಂದ್ರ ಮತ್ತು ರಾಜ್ಯ ಆಡಳಿತ ಎಲ್ಲ ಸಿದ್ಧತೆ ನಡೆಸುತ್ತಿವೆ. ಅಭ್ಯರ್ಥಿ ನಿಧನವಾದ ಸಂದರ್ಭದಲ್ಲಿ ಚುನಾವಣೆಯನ್ನು ರದ್ದುಗೊಳಿಸದಂತೆ ಜನ ಪ್ರಾತಿನಿಧ್ಯ ಕಾಯ್ದೆಗೆ (1957) ತಿದ್ದುಪಡಿ ತರಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>