<p><strong>ರಾಜ್ಯದ ಅರ್ಧಭಾಗದಲ್ಲಿಮಳೆ ಅಭಾವ</strong></p>.<p><strong>ಬೆಂಗಳೂರು, ಜುಲೈ 3–</strong> ಮುಂಗಾರು ಮಳೆಯ ಮೊದಲ ತಿಂಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಅಷ್ಟೇನೂ ಆಶಾದಾಯಕವಾಗಿಲ್ಲ. ಈ ಅವಧಿಯಲ್ಲಿ ರಾಜ್ಯದ 175 ತಾಲ್ಲೂಕುಗಳ ಪೈಕಿ 50ರಲ್ಲಿ ಮಾಮೂಲಿಗೂ ಅಧಿಕ ಹಾಗೂ 45ರಲ್ಲಿ ಮಾಮೂಲು ಮಳೆಯಾಗಿದ್ದು, 80 ತಾಲ್ಲೂಕುಗಳು ಕೊರತೆ ಅನುಭವಿಸುತ್ತಿವೆ.</p>.<p><strong>ವಿದ್ಯುತ್ ಉತ್ಪಾದನೆಗೆ ಒತ್ತು ವಿಶ್ವಬ್ಯಾಂಕ್ ನೆರವಿಗೆ ಕಾರಣ</strong></p>.<p><strong>ಮೈಸೂರು, ಜುಲೈ 3– </strong>ರಾಜ್ಯದಲ್ಲಿ ವಿದ್ಯುತ್ ವಿತರಣೆ ಜಾಲವನ್ನು ಸುಧಾರಿಸಲು ಕೈಗೊಂಡ ಕ್ರಮಗಳಿಂದ 2000 ಮೆಗಾವಾಟ್ ವಿದ್ಯುತ್ ಹೊಸದಾಗಿ ಉತ್ಪಾದನೆ ಆಗುತ್ತಿರುವುದು ವಿಶ್ವಬ್ಯಾಂಕ್ನ ನೆರವು ಮತ್ತೆ ಲಭಿಸುತ್ತಿರುವುದಕ್ಕೆ ಕಾರಣವಾಗಿದೆ ಎಂದು ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಇಂದು ಹೇಳಿದರು.</p>.<p><strong>ರಾಜ್ಯ ಕಾಂಗೈ ಪುನರ್ರಚನೆ ಶೀಘ್ರ</strong></p>.<p><strong>ನವದೆಹಲಿ, ಜುಲೈ 3 (ಪಿಟಿಐ)– </strong>ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಕಾಂಗ್ರೆಸ್ (ಐ) ಸಮಿತಿಗಳನ್ನು ಶೀಘ್ರವೇ ಪುನರ್ ರಚಿಸಲಿದ್ದಾರೆ. ಈ ವರ್ಷಾಂತ್ಯದ ವೇಳೆಗೆ ವಿಧಾನಸಭಾ ಚುನಾವಣೆಗಳು ನಡೆಯಲಿರುವ ರಾಜ್ಯಗಳತ್ತ ಪಕ್ಷಾಧ್ಯಕ್ಷರು ಗಮನ ಹರಿಸುತ್ತಿದ್ದಾರೆ. ರಾವ್ ನೇತೃತ್ವದ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸಲು ಕಾಂಗ್ರೆಸ್ (ಐ) ದೆಹಲಿಯ ಕೆಂಪುಕೋಟೆಯಲ್ಲಿ ಜುಲೈ 14ರಂದು ಹಮ್ಮಿಕೊಂಡಿರುವ ರ್ಯಾಲಿಗೆ ಮೊದಲೇ ಈ ಪುನರ್ರಚನೆ ನಡೆಯುವ ಸಾಧ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜ್ಯದ ಅರ್ಧಭಾಗದಲ್ಲಿಮಳೆ ಅಭಾವ</strong></p>.<p><strong>ಬೆಂಗಳೂರು, ಜುಲೈ 3–</strong> ಮುಂಗಾರು ಮಳೆಯ ಮೊದಲ ತಿಂಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಅಷ್ಟೇನೂ ಆಶಾದಾಯಕವಾಗಿಲ್ಲ. ಈ ಅವಧಿಯಲ್ಲಿ ರಾಜ್ಯದ 175 ತಾಲ್ಲೂಕುಗಳ ಪೈಕಿ 50ರಲ್ಲಿ ಮಾಮೂಲಿಗೂ ಅಧಿಕ ಹಾಗೂ 45ರಲ್ಲಿ ಮಾಮೂಲು ಮಳೆಯಾಗಿದ್ದು, 80 ತಾಲ್ಲೂಕುಗಳು ಕೊರತೆ ಅನುಭವಿಸುತ್ತಿವೆ.</p>.<p><strong>ವಿದ್ಯುತ್ ಉತ್ಪಾದನೆಗೆ ಒತ್ತು ವಿಶ್ವಬ್ಯಾಂಕ್ ನೆರವಿಗೆ ಕಾರಣ</strong></p>.<p><strong>ಮೈಸೂರು, ಜುಲೈ 3– </strong>ರಾಜ್ಯದಲ್ಲಿ ವಿದ್ಯುತ್ ವಿತರಣೆ ಜಾಲವನ್ನು ಸುಧಾರಿಸಲು ಕೈಗೊಂಡ ಕ್ರಮಗಳಿಂದ 2000 ಮೆಗಾವಾಟ್ ವಿದ್ಯುತ್ ಹೊಸದಾಗಿ ಉತ್ಪಾದನೆ ಆಗುತ್ತಿರುವುದು ವಿಶ್ವಬ್ಯಾಂಕ್ನ ನೆರವು ಮತ್ತೆ ಲಭಿಸುತ್ತಿರುವುದಕ್ಕೆ ಕಾರಣವಾಗಿದೆ ಎಂದು ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಇಂದು ಹೇಳಿದರು.</p>.<p><strong>ರಾಜ್ಯ ಕಾಂಗೈ ಪುನರ್ರಚನೆ ಶೀಘ್ರ</strong></p>.<p><strong>ನವದೆಹಲಿ, ಜುಲೈ 3 (ಪಿಟಿಐ)– </strong>ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಕಾಂಗ್ರೆಸ್ (ಐ) ಸಮಿತಿಗಳನ್ನು ಶೀಘ್ರವೇ ಪುನರ್ ರಚಿಸಲಿದ್ದಾರೆ. ಈ ವರ್ಷಾಂತ್ಯದ ವೇಳೆಗೆ ವಿಧಾನಸಭಾ ಚುನಾವಣೆಗಳು ನಡೆಯಲಿರುವ ರಾಜ್ಯಗಳತ್ತ ಪಕ್ಷಾಧ್ಯಕ್ಷರು ಗಮನ ಹರಿಸುತ್ತಿದ್ದಾರೆ. ರಾವ್ ನೇತೃತ್ವದ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸಲು ಕಾಂಗ್ರೆಸ್ (ಐ) ದೆಹಲಿಯ ಕೆಂಪುಕೋಟೆಯಲ್ಲಿ ಜುಲೈ 14ರಂದು ಹಮ್ಮಿಕೊಂಡಿರುವ ರ್ಯಾಲಿಗೆ ಮೊದಲೇ ಈ ಪುನರ್ರಚನೆ ನಡೆಯುವ ಸಾಧ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>