<p><strong>ಮಂಗಳೂರು ವಿದ್ಯುತ್ ಸ್ಥಾವರ ಕಾರ್ಯ ವಾರದೊಳಗೆ ಆರಂಭ</strong></p>.<p>ನವದೆಹಲಿ, ಏ. 15– ಮಂಗಳೂರಿನ 1,000 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರದ ಕಾರ್ಯ ಶೀಘ್ರವೇ ಆರಂಭಗೊಳ್ಳಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರು ಇಂದು ಇಲ್ಲಿ ತಿಳಿಸಿದರು. ಕೇಂದ್ರ ವಿದ್ಯುತ್ ಸಚಿವಾಲಯವು ವಾರದೊಳಗೆ ಈ ಯೋಜನೆಗೆ ಒಪ್ಪಿಗೆ ನೀಡಲಿದೆ ಎಂದರು.</p>.<p>ಪ್ರಧಾನಿ ಪಿ.ವಿ.ನರಸಿಂಹರಾವ್ ಮತ್ತು ಕೇಂದ್ರ ವಿದ್ಯುತ್ ಸಚಿವ ಎನ್.ಕೆ.ಪಿ. ಸಾಳ್ವೆ ಅವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ದೇವೇಗೌಡರು ಈ ವಿಷಯ ಪ್ರಕಟಿಸಿದರು.</p>.<p><strong>ಪ್ರದೇಶ ಕಾಂಗೈ ಸಮಿತಿ ಪುನರ್ರಚನೆ ಕಾರ್ಯ ಆರಂಭ</strong></p>.<p>ನವದೆಹಲಿ, ಏ. 15 (ಪಿಟಿಐ)– ಕೆಲವು ಪ್ರದೇಶ ಕಾಂಗೈ ಸಮಿತಿಗಳನ್ನು ಪುನರ್ ರಚಿಸುವ ಕಾರ್ಯವನ್ನು ಕಾಂಗ್ರೆಸ್ (ಐ) ಹೈಕಮಾಂಡ್ ಆರಂಭಿಸಿದೆ. ಈ ಉದ್ದೇಶಕ್ಕಾಗಿ ಪಕ್ಷದ ಇಬ್ಬರು ಪ್ರಧಾನ ಕಾರ್ಯದರ್ಶಿಗಳು ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ತೆರಳುವರು.</p>.<p>ಏಪ್ರಿಲ್ 19ರಂದು ಜನಾರ್ದನ ಪೂಜಾರಿ ಅವರು ಮುಂಬೈಗೆ ತೆರಳಿದರೆ, ಮಾಧವ ಸಿನ್ಹಾ ಸೋಳಂಕಿ ಅವರು ಏಪ್ರಿಲ್ 20ರಂದು ಬೆಂಗಳೂರಿಗೆ ಹೋಗುವರು. ಈ ವಿಷಯವನ್ನು ಈ ಇಬ್ಬರು ಪ್ರಧಾನ ಕಾರ್ಯದರ್ಶಿಗಳು ಪ್ರತ್ಯೇಕವಾಗಿ ಪ್ರಕಟಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು ವಿದ್ಯುತ್ ಸ್ಥಾವರ ಕಾರ್ಯ ವಾರದೊಳಗೆ ಆರಂಭ</strong></p>.<p>ನವದೆಹಲಿ, ಏ. 15– ಮಂಗಳೂರಿನ 1,000 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರದ ಕಾರ್ಯ ಶೀಘ್ರವೇ ಆರಂಭಗೊಳ್ಳಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರು ಇಂದು ಇಲ್ಲಿ ತಿಳಿಸಿದರು. ಕೇಂದ್ರ ವಿದ್ಯುತ್ ಸಚಿವಾಲಯವು ವಾರದೊಳಗೆ ಈ ಯೋಜನೆಗೆ ಒಪ್ಪಿಗೆ ನೀಡಲಿದೆ ಎಂದರು.</p>.<p>ಪ್ರಧಾನಿ ಪಿ.ವಿ.ನರಸಿಂಹರಾವ್ ಮತ್ತು ಕೇಂದ್ರ ವಿದ್ಯುತ್ ಸಚಿವ ಎನ್.ಕೆ.ಪಿ. ಸಾಳ್ವೆ ಅವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ದೇವೇಗೌಡರು ಈ ವಿಷಯ ಪ್ರಕಟಿಸಿದರು.</p>.<p><strong>ಪ್ರದೇಶ ಕಾಂಗೈ ಸಮಿತಿ ಪುನರ್ರಚನೆ ಕಾರ್ಯ ಆರಂಭ</strong></p>.<p>ನವದೆಹಲಿ, ಏ. 15 (ಪಿಟಿಐ)– ಕೆಲವು ಪ್ರದೇಶ ಕಾಂಗೈ ಸಮಿತಿಗಳನ್ನು ಪುನರ್ ರಚಿಸುವ ಕಾರ್ಯವನ್ನು ಕಾಂಗ್ರೆಸ್ (ಐ) ಹೈಕಮಾಂಡ್ ಆರಂಭಿಸಿದೆ. ಈ ಉದ್ದೇಶಕ್ಕಾಗಿ ಪಕ್ಷದ ಇಬ್ಬರು ಪ್ರಧಾನ ಕಾರ್ಯದರ್ಶಿಗಳು ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ತೆರಳುವರು.</p>.<p>ಏಪ್ರಿಲ್ 19ರಂದು ಜನಾರ್ದನ ಪೂಜಾರಿ ಅವರು ಮುಂಬೈಗೆ ತೆರಳಿದರೆ, ಮಾಧವ ಸಿನ್ಹಾ ಸೋಳಂಕಿ ಅವರು ಏಪ್ರಿಲ್ 20ರಂದು ಬೆಂಗಳೂರಿಗೆ ಹೋಗುವರು. ಈ ವಿಷಯವನ್ನು ಈ ಇಬ್ಬರು ಪ್ರಧಾನ ಕಾರ್ಯದರ್ಶಿಗಳು ಪ್ರತ್ಯೇಕವಾಗಿ ಪ್ರಕಟಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>