<p><strong>ಪಕ್ಷದ ಅಧ್ಯಕ್ಷರಾಗಿ ನಾಯ್ಡು ಆಯ್ಕೆ: ಎನ್ಟಿಆರ್ ಅಸಮ್ಮತಿ</strong></p>.<p><strong>ಹೈದರಾಬಾದ್, ಸೆ. 1 (ಪಿಟಿಐ)</strong>– ತೆಲುಗುದೇಶಂ ಪಕ್ಷದ ಅಧ್ಯಕ್ಷರಾಗಿ ಎನ್.ಚಂದ್ರಬಾಬು ನಾಯ್ಡು ಆಯ್ಕೆ ಶಾಸನ ಸಮ್ಮತವಲ್ಲ ಎಂದು ಮಾಜಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಇಂದು ಇಲ್ಲಿ ಹೇಳಿದ್ದಾರೆ.</p>.<p>‘ಅವರು ಅಧ್ಯಕ್ಷರಾಗಿ ಆಯ್ಕೆಯಾಗಬೇಕಾದುದು ಪಕ್ಷದ ದ್ವೈವಾರ್ಷಿಕ ಸಭೆಯಲ್ಲಿ. ಕಳೆದ ಸಭೆಯಲ್ಲಿ ನಾನು ಅವಿರೋಧವಾಗಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಪಕ್ಷದ ಸಂವಿಧಾನದ ಪ್ರಕಾರ ಮುಂದಿನ ಸಭೆಯವರೆಗೂ ನಾನೇ ಅಧ್ಯಕ್ಷ’ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.</p>.<p><strong>ಬೇಅಂತ್ ಅಂತ್ಯಕ್ರಿಯೆ ಇಂದು ಸಿಬಿಐನಿಂದ ತನಿಖೆ ಆರಂಭ</strong></p>.<p><strong>ನವದೆಹಲಿ, ಸೆ. 1 (ಯುಎನ್ಐ, ಪಿಟಿಐ)–</strong> ಕಾಲೇಜು ವಿದ್ಯಾರ್ಥಿಗಳಂತೆ ಕಾಣುತ್ತಿದ್ದ ಇಬ್ಬರು ಯುವಕರು ಪಂಜಾಬ್ ಮುಖ್ಯಮಂತ್ರಿ ಬೇಅಂತ್ ಸಿಂಗ್ ಅವರ ಹತ್ಯೆಯ ಪ್ರಮುಖ ಆರೋಪಿಗಳಾಗಿರುವ ಸಾಧ್ಯತೆಗಳಿವೆ ಎಂದು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಕೇಂದ್ರ ತನಿಖಾ ದಳ (ಸಿಬಿಐ) ಇಂದು ಹೇಳಿದೆ. ಈ ಇಬ್ಬರು ಯುವಕರ ಕಂಪ್ಯೂಟರ್ ಭಾವಚಿತ್ರಗಳನ್ನು ಅದು ಸಿದ್ಧಪಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಕ್ಷದ ಅಧ್ಯಕ್ಷರಾಗಿ ನಾಯ್ಡು ಆಯ್ಕೆ: ಎನ್ಟಿಆರ್ ಅಸಮ್ಮತಿ</strong></p>.<p><strong>ಹೈದರಾಬಾದ್, ಸೆ. 1 (ಪಿಟಿಐ)</strong>– ತೆಲುಗುದೇಶಂ ಪಕ್ಷದ ಅಧ್ಯಕ್ಷರಾಗಿ ಎನ್.ಚಂದ್ರಬಾಬು ನಾಯ್ಡು ಆಯ್ಕೆ ಶಾಸನ ಸಮ್ಮತವಲ್ಲ ಎಂದು ಮಾಜಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಇಂದು ಇಲ್ಲಿ ಹೇಳಿದ್ದಾರೆ.</p>.<p>‘ಅವರು ಅಧ್ಯಕ್ಷರಾಗಿ ಆಯ್ಕೆಯಾಗಬೇಕಾದುದು ಪಕ್ಷದ ದ್ವೈವಾರ್ಷಿಕ ಸಭೆಯಲ್ಲಿ. ಕಳೆದ ಸಭೆಯಲ್ಲಿ ನಾನು ಅವಿರೋಧವಾಗಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಪಕ್ಷದ ಸಂವಿಧಾನದ ಪ್ರಕಾರ ಮುಂದಿನ ಸಭೆಯವರೆಗೂ ನಾನೇ ಅಧ್ಯಕ್ಷ’ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.</p>.<p><strong>ಬೇಅಂತ್ ಅಂತ್ಯಕ್ರಿಯೆ ಇಂದು ಸಿಬಿಐನಿಂದ ತನಿಖೆ ಆರಂಭ</strong></p>.<p><strong>ನವದೆಹಲಿ, ಸೆ. 1 (ಯುಎನ್ಐ, ಪಿಟಿಐ)–</strong> ಕಾಲೇಜು ವಿದ್ಯಾರ್ಥಿಗಳಂತೆ ಕಾಣುತ್ತಿದ್ದ ಇಬ್ಬರು ಯುವಕರು ಪಂಜಾಬ್ ಮುಖ್ಯಮಂತ್ರಿ ಬೇಅಂತ್ ಸಿಂಗ್ ಅವರ ಹತ್ಯೆಯ ಪ್ರಮುಖ ಆರೋಪಿಗಳಾಗಿರುವ ಸಾಧ್ಯತೆಗಳಿವೆ ಎಂದು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಕೇಂದ್ರ ತನಿಖಾ ದಳ (ಸಿಬಿಐ) ಇಂದು ಹೇಳಿದೆ. ಈ ಇಬ್ಬರು ಯುವಕರ ಕಂಪ್ಯೂಟರ್ ಭಾವಚಿತ್ರಗಳನ್ನು ಅದು ಸಿದ್ಧಪಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>