ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಭಾನುವಾರ, 3-9-1995

Last Updated 2 ಸೆಪ್ಟೆಂಬರ್ 2020, 20:15 IST
ಅಕ್ಷರ ಗಾತ್ರ

ಆಸ್ತಿ ನೋಂದಣಿಗೆ ಹೊಸ ವ್ಯವಸ್ಥೆ

ಬೆಂಗಳೂರು, ಸೆ. 2– ಆಸ್ತಿ ನೋಂದಾವಣಿಗೆ ಸಮಯದಲ್ಲಿ ಅವುಗಳ ಮಾರುಕಟ್ಟೆ ಮೌಲ್ಯ ಹಾಗೂ ಅದಕ್ಕೆ ಪಾವತಿ ಮಾಡಬೇಕಾದ ಮುದ್ರಾಂಕ ಮತ್ತು ನೋಂದಾವಣೆ ಶುಲ್ಕ ಪ್ರಮಾಣದ ಬಗ್ಗೆ ನೋಂದಾವಣೆ ಪೂರ್ವದಲ್ಲಿ ಕಡ್ಡಾಯವಾಗಿ ಹಿಂಬರಹ ನೀಡುವ ಹೊಸ ಪದ್ಧತಿಯು ಈ ತಿಂಗಳ ಐದರಿಂದ ರಾಜ್ಯದಾದ್ಯಂತ ಜಾರಿಗೆ ಬರಲಿದೆ.

ಉಪ ನೋಂದಾವಣಾಧಿಕಾರಿಗಳಿಂದ ಆಸ್ತಿ ನೋಂದಾವಣೆ ಸಂಬಂಧದಲ್ಲಿ ಸಾರ್ವಜನಿಕರಿಗೆ ಕಿರುಕುಳ ಆಗದಂತೆ ಮಾಡಲು ಈ ಪದ್ಧತಿ ಜಾರಿಗೆ ತರಲಾಗುವುದು. ಈ ಪದ್ಧತಿ ಅನುಷ್ಠಾನಕ್ಕೆ ಬರುತ್ತಿರುವುದು ರಾಷ್ಟ್ರದಲ್ಲಿಯೇ ಪ್ರಪ್ರಥಮ. ಇದರಿಂದ ಅರ್ಧದಷ್ಟು ಭ್ರಷ್ಟಾಚಾರ ತಪ್ಪುತ್ತದೆ ಎಂದು ಕಂದಾಯ ಸಚಿವ ಆರ್‌.ಎಲ್‌. ಜಾಲಪ್ಪ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪಾಲಿಕೆ ಅಧಿಕಾರ ಪ್ರಶ್ನಿಸಿರುವ ಕೆಂಟಕಿ

ಬೆಂಗಳೂರು, ಸೆ.2 – ತಾನು ಮಾರುತ್ತಿರುವ ಕೋಳಿಮಾಂಸ ಪದಾರ್ಥಗಳ ಎಂಎಸ್‌ಜಿ (ಮೋನೋಸೋಡಿಯಂ ಗ್ಲುಟಮೆಟ್‌) ರಾಸಾಯನಿಕ ಪ್ರಮಾಣವನ್ನು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಿರುವ ಬೆಂಗಳೂರು ಮಹಾನಗರ ಪಾಲಿಕೆಯ ಅರ್ಹತೆಯನ್ನೇ ವಿವಾದಗ್ರಸ್ತ ಕೆಎಫ್‌ಸಿ (ಕೆಂಟಕಿ ಫ್ರೈಡ್‌ ಚಿಕನ್‌) ಪ್ರಶ್ನಿಸಿದೆ.

ಇದರಿಂದ ವಿವಾದಕ್ಕೆ ಈಗ ಹೊಸ ತಿರುವು ಬಂದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT