ಕಾವೇರಿ: ಸರ್ಕಾರದ ವಿವರಣೆಗೆ ಅತೃಪ್ತಿ, ಪ್ರತಿಪಕ್ಷ ಸಭಾತ್ಯಾಗ
ಬೆಂಗಳೂರು, ಸೆ.5– ಅನಿವಾರ್ಯ ಪರಿಸ್ಥಿತಿಯಲ್ಲಿ ವಿರೋಧ ಪಕ್ಷಗಳೊಂದಿಗೆ ಸಮಾಲೋಚಿಸದೆ ತಮಿಳುನಾಡಿಗೆ ಐದು ಟಿಎಂಸಿಯಷ್ಟು ಕಾವೇರಿ ನೀರು ಬಿಡಬೇಕಾಯಿತು ಎಂಬ ಸರ್ಕಾರ ‘ವಿಷಾದ ರಹಿತ’ ವಿವರಣೆಯಿಂದ ತೃಪ್ತರಾಗದ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ಸದಸ್ಯರು ವಿಧಾನ ಮಂಡಲದ ಉಭಯ ಸದನಗಳಲ್ಲಿಯೂ ಇಂದು ಸಭಾತ್ಯಾಗ ಮಾಡಿದರು.