ಹಕ್ಕುಚ್ಯುತಿ ಯತ್ನ, ಬಗೆಹರಿಯದ ಬಿಕ್ಕಟ್ಟು
ಬೆಂಗಳೂರು, ಆ.21– ಸಭಾಧ್ಯಕ್ಷರು ನೀಡಿದ ತೀರ್ಪನ್ನು ವಿರೋಧ ಪಕ್ಷದ ನಾಯಕರು ಸದನದ ಹೊರಗೆ ಪ್ರಶ್ನಿಸಿದ್ದಾರೆಂಬ ಹಿನ್ನೆಲೆಯಲ್ಲಿ ಉದ್ಭವವಾಗಿದ್ದ ಸಮಸ್ಯೆ ಬಗೆಹರಿಸಲು ಇಂದು ಬೆಳಗಿನಿಂದ ಸಂಜೆವರೆಗೆ ನಡೆದ ತೆರೆಮರೆಯ ಸಂಧಾನದ ಪ್ರಯತ್ನ ವಿಫಲವಾಯಿತು. ಈ ವಿಚಾರದಲ್ಲಿ ಹಕ್ಕುಚ್ಯುತಿ ಮಂಡನೆಗೆ ಅನುಮತಿ ಕೋರಿ ಪೂರ್ವಭಾವಿ ಪ್ರಸ್ತಾಪ ಮಾಡಲು ವಿಧಾನಸಭೆಯಲ್ಲಿ ಅನುಮತಿ ದೊರಕಿದ್ದು ಪ್ರಕರಣ ಕುತೂಹಲ ಕೆರಳಿಸಿದೆ.