ಅಮಾನವೀಯ ಕೃತ್ಯವೆಸಗಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ, ಈ ಹೊತ್ತಿನ ಶಿಕ್ಷಣ ಕ್ರಮದ ವೈಫಲ್ಯದ ಸಂಕೇತವೂ ಹೌದು. ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಹಾಗೂ ಸಮಾಜದ ಆರೋಗ್ಯಕ್ಕೆ ಕಾರಣವಾಗಬೇಕಿದ್ದ ‘ವಿದ್ಯೆ’, ವ್ಯಕ್ತಿಯನ್ನು ಟೊಳ್ಳಾಗಿಸುತ್ತಿದೆ. ವಿದ್ಯೆಯನ್ನು ‘ವ್ಯಂಗ್ಯ’ವಾಗಿಸುವ ಮೂಲಕ ದುರಿತ ಕಾಲವನ್ನು ಸೃಷ್ಟಿಸುವ ಕೆಲಸದಲ್ಲಿ ಸಮಾಜ ತೊಡಗಿಕೊಂಡಿರುವುದು ದುರದೃಷ್ಟಕರ ಸಂಗತಿ.