‘ನನ್ನ ಪಾಡಿಗೆ ನಾನಿದ್ದೆ, ನಿನ್ನ ವಂಶಸ್ಥರಿಗೆ ಮೋಕ್ಷ ದೊರೆಯಲೆಂದು ಭರತಭೂಮಿಗೆ ಕರಕೊಂಡು ಹೋದೆ. ನೀನಿಲ್ಲಿ ಸ್ವರ್ಗದಲ್ಲಿ ಆರಾಮಾಗಿದ್ದಿ. ಅಲ್ಲಿ ನನ್ನ ದಂಡೆ ಮ್ಯಾಗಿರೋ ಸಾವಿರಾರು ಫ್ಯಾಕ್ಟರಿಗಳು, ನಗರಗಳು, ಹಳ್ಳಿಗಳ ಕಸಕಡ್ಡಿ, ಕಾರ್ಖಾನೆ ತ್ಯಾಜ್ಯ ಸುರಿದು ನನ್ನ ಅವಸ್ಥೆ ನೋಡು’ ಭಗೀರಥನಿಗೆ ಗಂಗೆ ಫೋನಿನಲ್ಲಿ ವರಾತ ಹಚ್ಚಿದ್ದಳು.